ಕವನ: ಸುಗ್ಗಿ ಸಂಕ್ರಾಂತಿ

Must Read

ಸುಗ್ಗಿ ಸಂಕ್ರಾಂತಿ

ವರುಷದ ದುಡಿಮೆಯ ಫಲವಾಗಿ

ಬಂದೈತೆ ಸುಗ್ಗಿಯ ಸಂಕ್ರಾಂತಿ

ಬೆರೆಸುತ ಎಳ್ಳಿಗೆ ಬೆಲ್ಲವನು

ತಂದೈತೆ ನಾಡಿಗೆ ಸುಖಶಾಂತಿ//ಪ

ಬೆಳ್ಳಿಯ ರಥವೇರಿ ರವಿಬಂದು

ಮಿಂಚೈತೆ ನಾಡೆಲ್ಲ ಬೆಳಕಲ್ಲಿ

ಹಳ್ಳಿಯ ನೆಲದಿಂದ ದಿಲ್ಲಿಗೂ

ಹಂಚೈತೆ ರಟ್ಟೆಯ ಬಲವಿಲ್ಲಿ//೧

ಗಿಲಿಗಿಲಿ ಗೆಜ್ಜೆಯ ನಾದದಲಿ

ಬದುಕಿನ ಬಂಡಿಯು ಹೊರಟಾವ

ಕುಲುಕುಲು ನಗುವಿನ ಮೊಗದಲ್ಲಿ

 ಹಂತಿಯ ಪದವನು  ಹಾಡ್ಯಾವ//೨

ಕಬ್ಬನು ಸವಿಯುತ ಕೃಷಿಕಾರ

ಬೆಲ್ಲದ ರುಚಿಯನು ನೀಡ್ಯಾನ

ಹಬ್ಬವ ಮಾಡಿದ ಸರದಾರ 

ವಲ್ಲಿಯ ನೆರಿಗೆಯ ತೀಡ್ಯಾನ/೩

ಪರಿಪರಿ ಕಾಳಿನ ರಾಶಿಯನು

ಮುದದಲಿ ಮಡದಿಯು ಪೂಜಿಸಲು

ಹರಿಹರ ನಾಮವ ಜಪಿಸುತ

ಬದುಕಿನ ಬಂಡಿಯು ತುಂಬಿರಲು//೪

ಹಳ್ಳಿಯ ಸಂಕ್ರಾಂತಿ ಹೊಲದಲ್ಲಿ

ಒಳ್ಳೆಯ ಕಾಯಕ ನಿಷ್ಠೆಯಲಿ

ಬೆಳ್ಳಿಯ ರಥವದು ಪಯಣದಲಿ

ಹಳ್ಳದ ದಂಡಿಯ ತಿರುವಿನಲಿ/೫


ಶ್ರೀಮತಿ ಬಸಮ್ಮ ಏಗನಗೌಡ್ರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group