ಮೂಡಲಗಿ: ‘ಪವರ್ ಮ್ಯಾನ್ಗಳು ವಿದ್ಯುತ್ ಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ನಿರ್ವಹಿಸುವಾಗ ಸುರಕ್ಷತೆಯ ಬಗ್ಗೆ ಕಾಳಜಿವಹಿಸಬೇಕು’ ಎಂದು ಹೆಸ್ಕಾಂ ಮೂಡಲಗಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಂ.ಎಸ್. ನಾಗನ್ನವರ ಹೇಳಿದರು.
ಮೂಡಲಗಿಯ ಹೆಸ್ಕಾಂ ಉಪವಿಭಾಗದಲ್ಲಿ ಶುಕ್ರವಾರ ಆಚರಿಸಿದ ‘ವಿದ್ಯುತ್ ಸುರಕ್ಷಾ ಸಪ್ತಾಹ-2024 ದಿನಾಚರಣೆ’ ಗೆ ಚಾಲನೆ ನೀಡಿ ಮಾತನಾಡಿದ ಅವರು, ಪವರ್ಮನ್ಗಳು ಹೆಸ್ಕಾಂ ನ ನಿಯಮಗಳನ್ನು ಪಾಲಿಸುವುದರೊಂದಿಗೆ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಿ ವಿದ್ಯುತ್ ಅವಘಡಗಳಿಗೆ ಅವಕಾಶ ನೀಡಬಾರದು ಎಂದರು.
ಪವರ್ಮನ್ಗಳು ವಿದ್ಯುತ್ ಕಂಬಗಳ ನಿರ್ವಹಣೆ ಮಾಡುವ ಸಂದರ್ಭದಲ್ಲಿ ವಿದ್ಯುತ್ ವಿತರಣಾ ಕೇಂದ್ರದಿಂದ ಎಲ್ಸಿ ಪಡೆದುಕೊಳ್ಳುವ ಬಗ್ಗೆ ಹೆಚ್ಚು ಮುತವರ್ಜಿ ವಹಿಸಬೇಕು. ವಿದ್ಯುತ್ ಕಂಬದಲ್ಲಿ ಯಾವುದೇ ಸಂದರ್ಭದಲ್ಲಿ ಮೊಬೈಲ್ ಫೋನ್ವನ್ನು ಬಳಸಬಾರದು ಎಂದು ಸಲಹೆ ನೀಡಿದರು.
ಹಳ್ಳೂರ ಶಾಖೆಯ ಮೇಲ್ವಿಚಾರಕ ಮೆಹಬೂಬ ಶೇಖಬಡೆ ಅವರು ಪವರ್ಮನ್ಗಳಿಗೆ ಸುರಕ್ಷಾ ವಿಧಿ ಬೋಧಿಸಿದರು.
ಉಪವಿಭಾಗದ ತಾಂತ್ರಿಕ ಸಹಾಯಕ ಬಾಹುಬಲಿ ಕುರಣಗಿ, ಮೂಡಲಗಿ ಶಾಖಾಧಿಕಾರಿ ಎಸ್.ಎಸ್. ಮಠ, ಹಳ್ಳೂರ ಶಾಖಾಧಿಕಾರಿ ಬಿ. ವೈ. ಕುರಿ, ಆರ್.ಡಿ. ಪಿಡಾಯಿ, ರಾಜು ಬಾಸುತಕರ, ಎಂ.ಎನ್. ಬನವಿ, ಸುನೀಲ ಲಮಾಣಿ ಇದ್ದರು.