spot_img
spot_img

ಸಾಹಿತಿ ಮಲಾಬಾದಿಯವರ ಕೃತಿಗಳ ಬಿಡುಗಡೆ

Must Read

spot_img

 

ಬೆಳಗಾವಿ – ತನ್ಮಯ ಚಿಂತನ ಚಾವಡಿಯ ಸಂಯುಕ್ತ ಆಶ್ರಯದಲ್ಲಿ  ಬೆಳಗಾವಿಯ ಮಹಾಂತೇಶ ನಗರದ ಮಹೇಶ್ ಪಿ.ಯು. ಕಾಲೇಜಿನಲ್ಲಿ ಸಾಯಂಕಾಲ 4 ಘಂಟೆಗೆ ಬೆಳಗಾವಿಯ  ಹಿರಿಯ ಸಾಹಿತಿಗಳಾದ ಬಿ.ಜೆ.ಮಲಾಬಾದಿ ಅವರು ರಚಿಸಿದ ‘ಒಲವು ಗೆಲುವು’ಮತ್ತು ಮಲ್ಲಿಗೆ ಕವನ ಸಂಕಲನಗಳ ಬಿಡುಗಡೆ ಸಮಾರಂಭವು ಜರುಗಿತು.      

ಲೋಕಾರ್ಪಣೆಗೂಂಡ  ಕವನ ಸಂಕಲನ ಗಳ ಪರಿಚಯ ವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಗಳಾದ ಮಹಾಂತೇಶ ಮೆಣಸಿನಕಾಯಿ ಹಾಗೂ ಉಪನ್ಯಾಸ ಕರಾದ ಬಸವರಾಜ ಮಠಪತಿ ಯವರು ಮಾಡಿ ಕೊಟ್ಟರು ಕವನ ಸಂಕಲನ ಬಿಡುಗಡೆಗೊಳಿಸಿದ ಹಿರಿಯ ಸಾಹಿತಿ ಸ.ರಾ.ಸುಳಕೂಡೆಯವರು ಮಾತನಾಡುತ್ತಾ, ಕವಿ ಗಳಾದ ಬಿ.ಜಿ.ಮಲಾಬಾದಿ ಯವರ ವ್ಯಕ್ತಿ ಪರಿಚಯ ನೀಡಿ, ಅವರ ಕವಿತೆಗಳು ಸ್ವತಂತ್ರ ವಾಗಿವೆ, ಆಧ್ಯಾತ್ಮಿಕ ಜ್ಞಾನದ ಮೂಲಕ ಬದುಕಿನ ವಿವಿಧ ಮಜಲುಗಳನ್ನು ದಾಟಿ ಮುಂದೆ ಸಾಗುವ ಒಲವು ಗೆಲುವಾಗಿವೆ ಎಂದರು.

ಕವಿಗಳು ಮಾತನಾಡುತ್ತಾ ನನ್ನ ಸಾಹಿತ್ಯ ಕರುಳಿನ ಭಾಷೆ ಯಾಗಿದೆ, ಸುಮಾರು ವರ್ಷಗಳ ಹಿಂದಿನಿಂದ ಅನುಭವ ಗಳ ಕಂಡು ಉಂಡು ಕವಿತೆ ಗಳನ್ನು ರಚಿಸಿದ್ದೇನೆ ಎಂದರು.  

ಅಧ್ಯಕ್ಷತೆಯನ್ನು ವಹಿಸಿದ ಹಿರಿಯ ಸಾಹಿತಿಗಳಾದ ಅಶೋಕ ಉಳ್ಳಾಗಡ್ಡಿ ಯವರು ಮಾತನಾಡುತ್ತಾ ಎಲ್ಲ ಕವಿತೆ ಗಳು ಓದುಗನ ಮನಸ್ಸಿನಲ್ಲಿ ನೆಲೆ ಯಾಗಿ ನಿಲ್ಲುವಂತಹುಗಳಾಗಿವೆ ಎಂದರು.

ಶಿಕ್ಷಕಿಯರಾದ ಶ್ರೀಮತಿ ಕಮಲಾ ಗಣಾಚಾರಿ  ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಯಾದ ಜಯಶೀಲಾ ಬ್ಯಾಕೊಡ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಘಟಕದ ಅಧ್ಯಕ್ಷ ರಾದ ಸುರೇಶ ಹಂಜಿ, ಜಾಗತಿಕ ಲಿಂಗಾಯತ ನಗರ ಘಟಕದ ಕಾರ್ಯದರ್ಶಿ ಗಳಾದ ಸಿ.ಆರ್.ಬೂದಿಹಾಳ, ಆಶು ಕವಿ ಕೋಳಿವಾಡ ಮುಂತಾದ ವರು ಉಪಸ್ಥಿತರಿದ್ದರು.

ಗಾಯಕ ರಾದ ಶ್ರೀರಂಗ ಜೋಷಿ ಪ್ರಾರ್ಥನೆ ಸಲ್ಲಿಸಿದರು, ಆರ್.ಜಿ.ಬನಶಂಕರಿ ಯವರು ಸ್ವಾಗತ ಕೋರಿದರು ಡಾ.ಅ.ಬ.ಇಟಗಿ ನಿರೂಪಿಸಿದರು.

- Advertisement -
- Advertisement -

Latest News

ವಿದ್ಯುತ್ ಕಳ್ಳತನ ಮಹಾಪರಾಧ: ಎಇಇ ಧರೆಪ್ಪಗೋಳ

ಸಿಂದಗಿ: ವಿದ್ಯುತ್ ಕಳ್ಳತನ ಮಹಾಪರಾಧ, ಕಳ್ಳತನ ಮಾಡಿದ ಗ್ರಾಹಕರಿಗೆ ಜೈಲುವಾಸ ಮತ್ತು ದಂಡ ಕಟ್ಟಿಟ್ಟಬುತ್ತಿ ಎಂದು ಸಿಂದಗಿ ಸಹಾಯಕ ಕಾರ್ಯನಿರ್ವಾಹಕ ವಿಶಾಲ್ ಧರೆಪ್ಪಗೋಳ ಹೇಳಿದರು. ತಾಲೂಕಿನ ಮೋರಟಗಿ...
- Advertisement -

More Articles Like This

- Advertisement -
close
error: Content is protected !!