ಕ್ರೀಮಿ ಲೇಯರ್ ಆದಾಯ ರೂ. ೮ ರಿಂದ ೧೫ ಲಕ್ಷಕ್ಕೆ ಹೆಚ್ಚಿಸಲು ಕಿತ್ತೂರು ನೌಕರರ ಮನವಿ

Must Read

ಕಿತ್ತೂರು : ಕಿತ್ತೂರು ತಾಲೂಕ ನೌಕರರ ಬೇಡಿಕೆಯಂತೆ ಸರಕಾರಿ ನೌಕರರ ಮಕ್ಕಳ ಶಿಕ್ಷಣಕ್ಕೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಲಭ್ಯವಿಲ್ಲದೆ ರೂ. ೮ ಲಕ್ಷ ಮೀರುತ್ತಿದ್ದು ಕ್ರೀಮಿ ಲೇಯರ ( ಕೆನೆ ಪದರ ) ವ್ಯಾಪ್ತಿ ಮೀರಿರುವ ಕಾರಣದಿಂದ ಬಹುತೇಕ ಸಾಮಾನ್ಯ ನೌಕರರ ಮಕ್ಕಳಿಗೆ ಉನ್ನತ ಶಿಕ್ಷಣದಲ್ಲಿ ಜಾತಿ ಆದಾಯದ ಕೆಟಗರಿಯಲ್ಲಿ ಅವಕಾಶ ವಂಚಿತ ರಾಗುತ್ತಿದ್ದಾರೆ. ಅದನ್ನು ರೂ. ೧೫ ಲಕ್ಷದವರೆಗೆ ಹೆಚ್ಚಿಸಬೇಕೆಂದು ನೌಕರರ ಸಂಘದ ಮಾಜಿ ರಾಜ್ಯ ಪರಿಷತ್ ಸದಸ್ಯ ಡಾ ಶೇಖರ ಬಾಬು ಹಲಸಗಿಯವರು ರಾಜ್ಯಾಧ್ಯಕ್ಷ ಸಿ ಎಸ್ ಷಡಕ್ಷರಿ ಯವರನ್ನು ಒತ್ತಾಯಿಸಿದರು.

ನೌಕರರ ಸಂಘದ ಮಾಜಿ ತಾಲೂಕಾ ಅಧ್ಯಕ್ಷರು ಎಸ್ ಎಸ್ ಹುಲಮಣಿ, ನಿರ್ದೇಶಕರಾದ ಕೆ ಎ ಜಾಯಕ್ಕನವರ, ಎಂ ಎನ್ ಕಮ್ಮಾರ ಉಪಸ್ಥಿತರಿದ್ದರು

ಇದೆ ಸಂದರ್ಭದಲ್ಲಿ ದ್ವಿತೀಯ ಬಾರಿಗೆ ರಾಜ್ಯದ ನೌಕರರ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರಯುಕ್ತ ಕಿತ್ತೂರು ತಾಲೂಕ ನೌಕರರ ಬಳಗದ ವತಿಯಿಂದ ಷಡಕ್ಷರಿಯವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಸನ ಜಿಲ್ಲಾ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಕೊಟ್ಟೂರ ತಾಲೂಕ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group