ಬೀದರ – ಮರಾಠಾ ಸಮುದಾಯದ ನಾಯಕ ಸಂತೋಷ ಲಾಡ್ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬುದು ನಮ್ಮೆಲ್ಲರ ಬಯಕೆಯಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ಪದ್ಮಾಕರ ಪಾಟೀಲ ಹೇಳಿದರು.
ನಗರದ ಗಣೇಶ ಮೈದಾನದಲ್ಲಿ ನಡೆದ ಮರಾಠಾ ಸಮಾವೇಶದಲ್ಲಿ ಮಾತನಾಡಿದ ಅವರು, ಬೆಂಗಳೂರಿನಿಂದ ಬೀದರವರೆಗೆ, ಮಂಗಳೂರಿನಿಂದ ಬೆಳಗಾವಿಯವರೆಗೆ ಮರಾಠಾ ಸಮುದಾಯ ಲಾಡ್ ಪರ ಇದೆ. ಯಾರನ್ನ ಎತ್ತಬೇಕು ಯಾರನ್ನ ಬೀಳಿಸಬೇಕು ಎಂಬುದನ್ನು ಲಾಡ್ ಅವರು ಬೊಟ್ಟು ಮಾಡಿ ತೋರಿಸಿದರೆ ಸಾಕು ಅದನ್ನ ಮಾಡುತ್ತೇವೆ.ವಿಧಾನ ಸೌಧದ ಮೂರನೇ ಮಹಡಿಯ ಮೇಲೆ ಲಾಡ್ ಸಿಎಂ ಕುರ್ಚಿಯಲ್ಲಿ ಕೂರಬೇಕು. ವಿಧಾನ ಸೌಧದ ಮೇಲೆ ನಮ್ಮ ಭಗವಾ ಧ್ವಜ ಹಾರಾಡಬೇಕು ಎಂದರು.
ವರದಿ : ನಂದಕುಮಾರ ಕರಂಜೆ, ಬೀದರ

