- Advertisement -
ಸಿಂದಗಿ: ಪಟ್ಟಣದ ಹಿರಿಯ ಮಕ್ಕಳ ಸಾಹಿತಿಗಳಾದ ಹ.ಮ. ಪೂಜಾರ ಅವರ ‘ಅಜ್ಜನ ಮನೆಯ ಅಂಗಳದಲ್ಲಿ’ ಮಕ್ಕಳ ಕಾದಂಬರಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ಸಮೀರವಾಡಿ ಸಾಹಿತ್ಯ ಸಮ್ಮೇಳನದ ದತ್ತಿ ಪ್ರಶಸ್ತಿ ಹಾಗೂ ಆಲಮೇಲ ಸಾಹಿತ್ಯ ಸಮ್ಮೇಳನದ ಸ್ಮರಣಾರ್ಥ ಕೊಡಮಾಡುವ ದತ್ತಿ ಪ್ರಶಸ್ತಿಗಳು ಒಂದೇ ಕೃತಿಗೆ ಲಭಿಸಿದೆ.
ಮಕ್ಕಳ ಸಾಹಿತಿ ಹ.ಮ. ಪೂಜಾರ ಅವರಿಗೆ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷರಾದ ಎ.ಆರ್. ಹೆಗ್ಗಣದೊಡ್ಡಿˌ ಹಿರಿಯ ಸಾಹಿತಿಗಳಾದ ಪ.ಗು. ಸಿದ್ದಾಪುರ, ಬಿ.ಎಂ. ಪಾಟೀಲ, ಎಸ್.ಎಸ್. ಸಾತಿಹಾಳ, ಜಿ.ಎಸ್. ಭೂಸಗೊಂಡ, ಗುಂಡಣ್ಣ ಕುಂಬಾರ ಅವರು ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ.