Homeಸುದ್ದಿಗಳುಹುಬ್ಬಳ್ಳಿ ಹಿಂಸಾಚಾರ ಪ್ರಕರಣ ಕಾಂಗ್ರೆಸ್ ಪಿತೂರಿ - ಭಗವಂತ ಖೂಬಾ

ಹುಬ್ಬಳ್ಳಿ ಹಿಂಸಾಚಾರ ಪ್ರಕರಣ ಕಾಂಗ್ರೆಸ್ ಪಿತೂರಿ – ಭಗವಂತ ಖೂಬಾ

ಬೀದರ – ಕಾಂಗ್ರೆಸ್ ಪಕ್ಷವು ವೋಟ್ ಬ್ಯಾಂಕ್ ಮಾಡಿಕೊಳ್ಳಲು ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಹುಬ್ಬಳ್ಳಿ ಗಲಭೆಯಂಥ ವಾಮಮಾರ್ಗವನ್ನು ಅನುಸರಿಸುತ್ತಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಆರೋಪಿಸಿದ್ದಾರೆ.

ಪತ್ರಕರ್ತರ ಜೊತೆ ಮಾತನಾಡುತ್ತ, ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಭಗವಂತ ಖೂಬಾ, ಈ ಪ್ರಕರಣ ರಾಷ್ಟ್ರೀಯ ಪಕ್ಕಕ್ಕೆ ಶೋಭೆ ತರುವಂಥದಲ್ಲ.ಜೊತೆಗೆ ಕರ್ನಾಟಕಕ್ಕೂ ಘನತೆಯನ್ನು ತರುವಂತದಲ್ಲ. ಕಾಂಗ್ರೆಸ್ ಇಂಥ ನಾಟಕಗಳನ್ನು ಬಿಡಬೇಕು ಎಂದರು.

ಕಿಡಿಗೇಡಿಗಳನ್ನು ಮಟ್ಟ ಹಾಕುವ ಕೆಲಸವನ್ನು ಸರ್ಕಾರಕ್ಕೆ ಬಿಡಬೇಕು‌‌‌. ರಾಜ್ಯದಲ್ಲಿ ಯಾರು ಕಾನೂನನ್ನು ಕೈಗೆತ್ತಿಕೊಳ್ಳಬಾರದು‌.ಇಂದು ಕಾನೂನನ್ನು ಕೈಗೆತ್ತಿಕೊಂಡ ಕಿಡಿಗೇಡಿಗಳ ಮೇಲೆ ಸರ್ಕಾರ ಕಾಯ್ದೆಗಳ ಅಡಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಅಂಥವರನ್ನು ಈ ಸರ್ಕಾರ ಮಟ್ಟ ಹಾಕಲು ಸಕ್ಷಮವಿದೆ ಎಂದು ಕೇಂದ್ರ ಸಚಿವರು ಹೇಳಿದರು.


ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group