ಮೂಡಲಗಿ: ಸುವರ್ಣ ಸಂಭ್ರಮ 50ರ ಜ್ಯೋತಿ ರಥಯಾತ್ರೆಯ ರಥಕ್ಕೆ ಬುಧವಾರದಂದು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಮುಂಭಾಗ ತಾಲೂಕಾಡಳಿತದಿಂದ ಪೂಜೆ ಸಲ್ಲಿಸಿ ಭವ್ಯ ಸ್ವಾಗತಕೋರಿದರು.
ಅಂಗನವಾಡಿ ಕಾರ್ಯಕರ್ತೆಯರ ಆರತಿ ಮೇಳ ಹಾಗೂ ವಾದ್ಯಮೇಳಗಳ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಪುರಸಭೆ ಸದಸ್ಯರು, ಕನ್ನಡಪರ ಸಂಘಟನೆ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಶಾಲಾ ವಿದ್ಯಾರ್ಥಿಗಳು ಉಪಸ್ಥಿತಿಯಲ್ಲಿ ಕಲ್ಮೇಶ್ವರ ವೃತ್ತದವರೆಗೆ ರಥಯಾತ್ರೆಯು ವಿವಿಧ ಕನ್ನಡ ಪರ ಜಯಘೋಷಣೆಯೊಂದಿಗೆ ಜರುಗಿತು.
ಕಲ್ಮೇಶ್ವರ ವೃತ್ತದಲ್ಲಿ ಜರುಗಿದ ಸಭೆಯಲ್ಲಿ ತಹಶೀಲ್ದಾರ ಬಿ.ಎಸ್.ಕಡಕಬಾವಿ ಮತ್ತು ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ಮೈಸೂರು ರಾಜ್ಯದಿಂದ ಕರ್ನಾಟಕವೆಂದು ಮರು ನಾಮಕರಣವಾಗಿ 50ನೇ ವರ್ಷಕ್ಕೆ ಪದಾರ್ಪಣೆ ಮಾಡಿದ ಸುವರ್ಣ ಸಂಭ್ರಮವನ್ನು ಸರ್ಕಾರ ಆಚರಿಸುತ್ತಿದೆ ಎಂದು ಹೇಳಿದರು.
ಕಸಾಪ ಮೂಡಲಗಿ ತಾಲೂಕಾ ಘಟಕದ ಅಧ್ಯಕ್ಷ ಡಾ.ಸಂಜಯ ಶಿಂಧಿಹಟ್ಟಿ ಮಾತನಾಡಿ, ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಕಲೆಗಳ ಉಳಿವಿಗಾಗಿ ಹಿರಿಯ ತ್ಯಾಗ ಬಲಿದಾನದಿಂದ ಪರಿಶ್ರಮ ಇದೆ ಎಂಬುದನ್ನು ಯುವಪೀಳಿಗೆ ತಿಳಿಸುವ ಉದೇಶದಿಂದ ಕರ್ನಾಟಕ ರಾಜ್ಯಾದ್ಯಂತ ರಥಯಾತ್ರೆಯು ಬಹಳ ವಿಜೃಂಭಣೆಯಿಂದ ಜರುಗುತ್ತಿದೆ, ನಮ್ಮ ಮಕ್ಕಳು ಇಂದು ಆಧುನಿಕ ಸಂಸ್ಕೃತಿಗೆ ಹೆಚ್ಚು ಆಕರ್ಷಿತಿರಾಗತಿರತಕ್ಕಂತ ಸಂಧರ್ಭದಲ್ಲಿ ಯುವಕರಲ್ಲಿ ಕನ್ನಡದ ಅಭಿಮಾನವನ್ನು ತುಂಬುವುದು ರಥಯಾತ್ರೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಿಡಿಪಿಒ ಯಲ್ಲಪ್ಪ ಗದಾಡಿ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಸಿ.ಬಿ.ಪಾಟೀಲ, ಪಶು ವೈದ್ಯಾಧಿಕಾರಿ ಡಾ. ಮೋಹನ ಕಮತ, ಪುರಸಭೆ ಆರೋಗ್ಯ ಹಿರಿಯ ನಿರೀಕ್ಷಕ ಸಿ.ಎಂ.ಮುಗಳಖೋಡ, ಉಪತಹಶೀಲ್ದಾರ ಪರುಶರಾಮ ನಾಯಕ, ಸರಕಾರಿ ಶಾಲಾ-ಕಾಲೇಜು, ಮೂಡಲಗಿ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯ ಮತ್ತು ವಿಬಿಎಸ್ಎಮ್ ಶಾಲೆ, ಅಲ್ಪಸಂಖ್ಯಾತರ ಮುರಾರ್ಜಿದೇಸಾಯಿ ಶಾಲೆ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಪುರಸಭೆ ಸದಸ್ಯರು, ಕಂದಾಯ ನಿರೀಕ್ಷಕ ಸಂಗಪ್ಪ ಹೊಸಮನಿ, ಸುಭಾಸ ಪೂಜೇರಿ, ಈರಪ್ಪ ಢವಳೇಶ್ವರ, ಬಿ.ವಾಯ್.ಶಿವಾಪೂರ ಮತ್ತಿತರು ಇದ್ದರು. ಶಿಕ್ಷಕ ಎ.ಪಿ.ಪರಸನ್ನವರ ನಿರೂಪಿಸಿ ಸ್ವಾಗತಿಸಿದರು.