ಜೀವನದಲ್ಲಿ ಕಲೆಯ ಪಾತ್ರ ತುಂಬಾ ಮುಖ್ಯವಾದದ್ದು – ಪವಿತ್ರಾ ಅಕ್ಕನವರು

Must Read

ಸಿಂದಗಿ: ಮಾನವ ಜೀವನದಲ್ಲಿ ಕಲೆಯ ಪಾತ್ರವು ಜೀವನದಷ್ಟೇ ಮುಖ್ಯವಾಗಿದೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಪವಿತ್ರ ಅಕ್ಕನವರು ಹೇಳಿದರು.

ಪಟ್ಟಣದ ಓಂ ಶಾಂತಿ ಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ರಂಗೋಲಿ ಸ್ಪರ್ಧೆಯ ಸ್ಪರ್ಧಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸೌಂದರ್ಯದ ಜಗತ್ತು ನಮ್ಮನ್ನು ತಯಾರಿಸುತ್ತಿದೆ. ನಮ್ಮ ಜೀವನ ಎಷ್ಟು ಸಂಕೀರ್ಣ ಮತ್ತು ಅನಿರೀಕ್ಷಿತವಾಗಿದ್ದರೂ, ಅಲಂಕಾರಿಕ ಮತ್ತು ಸುಂದರವಾದ ಕ್ಷಣಗಳು ಮತ್ತು ಘಟನೆಗಳು ಯಾವಾಗಲೂ ಇವೆ. ಉತ್ತಮವಾದದ್ದಕ್ಕಾಗಿ ನಾವು ಯಾವಾಗಲೂ ಅತ್ಯುತ್ತಮವಾಗಿಸಲು ಪ್ರಯತ್ನಿಸುತ್ತೇವೆ. ಬದುಕಲು, ಪ್ರೀತಿಯಿಂದ, ಒಬ್ಬರಿಗೆ ಮತ್ತು ಸಮಾಜಕ್ಕೆ ಉಪಯುಕ್ತವಾದ ಏನನ್ನಾದರೂ ಮಾಡಲು ಅದ್ಭುತವಾಗಿದೆ. ಮಾನವ ಜೀವನದಲ್ಲಿ ಕಲೆಯ ಪಾತ್ರವು ಜೀವನದಷ್ಟೇ ಮುಖ್ಯವಾಗಿದೆ. ನಮಗೆ ಸುತ್ತುವರೆದಿರುವ ಎಲ್ಲವೂ ಒಂದು ರೀತಿಯ ಕಲಾ ಆಗಿದೆ ಎಂದರು.

ಪ್ರಾಧ್ಯಾಪಕ ಬಿ ಜಿ ಪಾಟೀಲ ಮಾತನಾಡಿ, ಸಪ್ತ ಸಾಗರದಾಚೆ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದು ವ್ಯಸನಮುಕ್ತ ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಜಾಗತಿಕ ಮಟ್ಟದಲ್ಲಿ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ಬಹು ದೊಡ್ಡ ಕಾರ್ಯ ಮಾಡುತ್ತಿದೆ ಎಂದರು.

ರಂಗೋಲಿ ಸ್ಪರ್ಧೆಯಲ್ಲಿ ಪ್ರಸಿದ್ಧ ಮಹಿಳೆಯರ, ಭಕ್ತ ಶಿರೋಮಣಿ ಮಹಿಳೆಯರ, ಮತ್ತು ಬೇಟಿ ಪಢಾವೋ ಬೇಟಿ ಬಚಾವೋ ಪರಿಕಲ್ಪನೆ ವಿಷಯದ ಚಿತ್ರಗಳನ್ನು ಬಿಡಿಸಿದ್ದು ಇಂದು ಉಪಯುಕ್ತವಾಗಿದೆ ಎಂದು ತಿಳಿಸಿದರು. ನಿರ್ಣಾಯಕರಾಗಿ ಪ್ರಕಾಶ ಹೊಳಿನ ಹಾಗೂ ನೇತ್ರಾವತಿ ಚೌಧರಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಬಿ ಜಿ ಪಾಟೀಲ, ಎಸ್ ಎಸ್ ಬುಳ್ಳಾ ಪ್ರೇಮಾ ನಾಯ್ಕ್, ಸತೀಶ ಚೌಧರಿ, ಗೀತಾ ಫಿರಗಾ, ವರ್ಷಾ ಪಾಟೀಲ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group