- Advertisement -
ಬೀದರ – ಗಡಿ ಜಿಲ್ಲೆ ಬೀದರ್ ತಾಲ್ಲೂಕಿನ ಅಲಿಯಂಬರ್ ಗ್ರಾಮದಲ್ಲಿ ಒಂದೇ ಮನೆಯ ಇಬ್ಬರು ಮಕ್ಕಳು ಈಜಲು ಹೋಗಿ ಜೀವ ಕಳೆದುಕೊಂಡ ಘಟನೆ ನಡೆದಿದೆ.
ದಸರಾ ಹಬ್ಬದ ಹಿನ್ನೆಲೆಯಲ್ಲಿ ಬಟ್ಟೆ ಒಗೆಯಲು ಅಜ್ಜಿ, ತಾಯಿ ಹಾಗು ಚಿಕ್ಕಪ್ಪನ ಜೊತೆ ಕೆರೆಗೆ ಹೋಗಿದ್ದ ಮಕ್ಕಳು ಅಜ್ಜಿ ತಾಯಿಯ ಕಣ್ಣ ಮುಂದೆಯೇ ಇಬ್ಬರು ನೀರು ಪಾಲಾಗಿದ್ದು ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ಇಬ್ಬರಿಗೂ ಈಜಲು ಬರುತ್ತಿರಲಿಲ್ಲ ಎನ್ನಲಾಗಿದೆ.
ನೀರು ಪಾಲಾದ ಮಕ್ಕಳು ವಿನೇಶ ತಂದೆ ಸುಭಾಷ್ ವಯಸ್ಸು (೨೧) ಹಾಗೂ ಮಲಶೆಟ್ಟಿ ತಂದೆ ಸುಭಾಷ್ ( ೧೭).
- Advertisement -
ಈ ಘಟನೆ ಜನವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವರದಿ: ನಂದಕುಮಾರ ಕರಂಜೆ, ಬೀದರ