Homeಸುದ್ದಿಗಳುಕಿಲ್ಲರ್ ಕೊರೊನಾಕ್ಕೆ ಎರಡು ಬಲಿ

ಕಿಲ್ಲರ್ ಕೊರೊನಾಕ್ಕೆ ಎರಡು ಬಲಿ

ಬನವಾಸಿ: ಬನವಾಸಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಹಾಮಾರಿ ಕೊರೊನಾ ಆತಂಕ ಸೃಷ್ಟಿಸಿದ್ದು ಕಿಲ್ಲರ್ ಕೊರೊನಾಕ್ಕೆ ಮಂಗಳವಾರ ಇಬ್ಬರು ಮೃತ ಪಟ್ಟಿದ್ದಾರೆ.

ಪಟ್ಟಣದಲ್ಲಿ 200ರ ಆಸುಪಾಸಿನಲ್ಲಿ ಸಕ್ರಿಯ ಪ್ರಕರಣಗಳು ಇದ್ದು ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಸಾರ್ವಜನಿಕರು ನಿರ್ಲಕ್ಷ್ಯವಹಿಸಿದರೆ ಸಾವಿನ ಸಂಖ್ಯೆಯೂ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.

ಕಳೆದ ಕೆಲ ದಿನಗಳಿಂದ ಆರೋಗ್ಯ ತೊಂದರೆ ಅನುಭವಿಸುತ್ತಿದ್ದ ಬನವಾಸಿಯ ಜನತಾ ಕಾಲೋನಿ ನಿವಾಸಿ ವೆಂಕಟೇಶ ರೆಡ್ಡಿ ಹಾಗೂ ಭಾಶಿ ಪಂಚಾಯತ್ ವ್ಯಾಪ್ತಿಯ ಕಲಕೊಪ್ಪ ನಿವಾಸಿಯಾದ ರೇಣುಕಮ್ಮ ಮೇದಾರ ಕೊರೊನಾ ಮಹಾಮಾರಿಗೆ ಮೃತಪಟ್ಟಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group