spot_img
spot_img

ಎರಡು ಕವಿತೆಗಳು

Must Read

spot_img
- Advertisement -

ಬಸವಣ್ಣ ನೀ ಬಿಟ್ಟ…
_____________________

ಬಸವಣ್ಣ ನೀ ಕಳಚಿಟ್ಟ
ಕಿರೀಟವನು ಇವರು
ಧರಿಸಿ ಕುಳಿತು ಕುಪ್ಪಳ್ಳಿಸುತ್ತಿದ್ದಾರೆ
ನೀ ತೊರೆದ ಅರಮನೆಯ
ಮಠವ ಮಾಡಿ
ಸಕಲ ಭೋಗಾದಿಯಲಿ
ಮೆರೆಯುತಿಹರು.
ಬಸವಣ್ಣ ನೀ ಬಿಟ್ಟ
ಸಿಂಹಾಸನವನ್ನು
ಹತ್ತಿ ಇಳಿಯದೆ
ಕುಳಿತಿಹರು
ಅಕ್ಕ ಮಾತೆ ಸ್ವಾಮಿ ಶರಣರು
ಕಲ್ಲು ಸಕ್ಕರೆ ಕೊಟ್ಟು.
ಶೋಷಣೆ ವಸೂಲಿ ಕಾಯಕವಾಗಿದೆ
ಜಂಗಮ ಜಾತಿಯಾಗಿದೆ
ಜಾತ್ರೆ ತೇರು ರಥ ಉತ್ಸವ
ಕಾವಿ ಲಾಂಛನಧಾರಿಗಳ ಅಬ್ಬರ
ಇಲ್ಲ ಈಗ ಶಾಂತಿ ಸಮತೆ
ಬಸವಣ್ಣ ನಿನ್ನ ಜಗವೇ
ಹೊತ್ತು ನಡೆದಿದೆ.
ನಿನ್ನನರಿಯದ ದುರುಳರ
ಸಂಗವ ಮಾಡಿ
ನಾನು ಕೆಟ್ಟೆನು
ಬಸವ ಪ್ರಿಯ ಶಶಿಕಾಂತ

————————————-
ಗೆದ್ದು ನಿಲ್ಲುವ ರೀತಿಯು
___________________

- Advertisement -

ಮರೆತು ನಿನ್ನಯ
ನಿನ್ನೆಯ ನೋವು
ಬರುವ ನಾಳೆಯ
ನಗೆ ಸಿಹಿ ಘಳಿಗೆ
ಗಟ್ಟಿ ಗೊಳ್ಳು ಇಂದು
ನಿನ್ನ ಬಾಳಿಗೆ

ಏರು ಪೇರು ದಿಬ್ಬ ದಿಣ್ಣೆ
ಕಲ್ಲು ಮುಳ್ಳಿನ
ನಿನ್ನ ಪಯಣವು
ನಂಜು ನುಂಗಿ
ನಗೆಯ ಬೀರು
ಸ್ನೇಹ ಒಲವು ತಾಯಿ ಬೇರು

ಕಳೆದು ಕತ್ತಲೆ
ಬೆಳೆಗು ಬೆಳೆಯಲಿ
ಶಾಂತಿ ಸಮರಸ ಪ್ರೀತಿಯು
ಎದ್ದು ನಿಂತು ಹೆಜ್ಜೆ ಹಾಕು
ದಿಟ್ಟ ದೂರದ ದಾರಿಯು
ಗೆದ್ದು ನಿಲ್ಲುವ ರೀತಿಯು

- Advertisement -

ಡಾ ಶಶಿಕಾಂತ ಪಟ್ಟಣ, ರಾಮದುರ್ಗ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಡೈರಿ ಹಾಲಿನ ಬಳಕೆ ಮಾನವರಿಗೆ ಹೇಳಿಸಿದ್ದಲ್ಲ

ಅತಿಯಾದರೆ ಅಮೃತವೂ ವಿಷ ಹಾಲು ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ. ಬಹುತೇಕರಿಗೆ ಹಾಲು ಅಂದರೆ ಪ್ರಾಣ. ನಮ್ಮ ದೈನೇಸಿ ಬದುಕಿನಲ್ಲಿ ಆಹಾರದ ಭಾಗವಾಗಿ ಹಾಲು ಒಂದು...
- Advertisement -

More Articles Like This

- Advertisement -
close
error: Content is protected !!
Join WhatsApp Group