Homeಸುದ್ದಿಗಳುಡಾ.ರವಿಶಂಕರ್ ಕೆ.ವಿ.ಅವರಿಗೆ ಡಾ.ಪ್ರತಾಪ್ ಸಿ.ರೆಡ್ಡಿ ಪ್ರಶಸ್ತಿ

ಡಾ.ರವಿಶಂಕರ್ ಕೆ.ವಿ.ಅವರಿಗೆ ಡಾ.ಪ್ರತಾಪ್ ಸಿ.ರೆಡ್ಡಿ ಪ್ರಶಸ್ತಿ

ಮೈಸೂರು-ನಗರದ ಉಷಾಕಿರಣ ಕಣ್ಣಿನ ಆಸ್ಪತ್ರೆಯ ಹಿರಿಯ ನೇತ್ರ ಶಸ್ತ್ರ ಚಿಕಿತ್ಸಕರಾದ ಡಾ.ರವಿಶಂಕರ್ ಕೆ.ವಿ. ಅವರಿಗೆ ಮಾ.17ರಂದು ಉತ್ತರಪ್ರದೇಶದ ಲಕ್ನೋದಲ್ಲಿ ನಡೆದ ಗ್ಲೋಬಲ್ ಅಸೋಸಿಯೇಷನ್ ಆಫ್ ಫಿಜಿಷಿಯನ್ (ಜಿಎಪಿಐಒ) ಸಂಸ್ಥೆಯು ಕೊಡಮಾಡುವ ಪ್ರತಿಷ್ಠಿತ ಡಾ.ಪ್ರತಾಪ್ ಸಿ.ರೆಡ್ಡಿ ಲೋಕೋಪಯೋಗಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಚಿತ್ರದಲ್ಲಿ ಉತ್ತರಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್, ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್, ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.     

ಡಾ.ಕೆ.ವಿ.ರವಿಶಂಕರ್ ಈಗಾಗಲೇ ಕಳೆದ 15 ವರ್ಷಗಳಿಂದ ಮೈಸೂರಿನ ವಿವೇಕಾನಂದ ಸೇವಾಶ್ರಮದ ಜೊತೆಗೂಡಿ ಕಣ್ಣಿನ ತೊಂದರೆಯಿರುವ ಬಡ ಮಕ್ಕಳಿಗೆ ಉಚಿತ ಚಿಕಿತ್ಸೆಗಳನ್ನು ನೀಡುತ್ತಿದ್ದು, ಈವರೆಗೆ ಸುಮಾರು 4 ಲಕ್ಷ ಮಕ್ಕಳನ್ನು ಪರೀಕ್ಷೆ ಮಾಡಲಾಗಿದ್ದು, 11 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಕನ್ನಡಕ ಕೊಡಲಾಗಿದೆ. 325ಕ್ಕೂ ಹೆಚ್ಚು ಮಕ್ಕಳಿಗೆ ಶಸ್ತ್ರ ಚಿಕಿತ್ಸೆಗಳ ಮೂಲಕ ಕಣ್ಣಿನ ತೊಂದರೆಯನ್ನು ಪರಿಹರಿಸಿರುತ್ತಾರೆ.

RELATED ARTICLES

Most Popular

error: Content is protected !!
Join WhatsApp Group