spot_img
spot_img

ಕವನ : ಎಲ್ಲಿರುವೆ ಬಸವಣ್ಣ ?

Must Read

- Advertisement -

ಎಲ್ಲಿರುವೆ ಬಸವಣ್ಣ ?

ಎಲ್ಲಿರುವೆ ಬಸವಣ್ಣ ?
ಕಲ್ಯಾಣದ ಮಹಾಪುರುಷ
ಬಸವಳಿದ ಬದುಕಿಗೆ
ನಿನ್ನ ಸ್ಮರಣೆಯೇ ಪರುಷ

ಕಾಯಕವು ನಿಂತಿಹುದು
ಗುರು ಲಿಂಗವಿಲ್ಲದೆ
ಜಂಗಮವು ಜಡಗೊಂಡಿದೆ
ಸುಜ್ಞಾನವಿಲ್ಲದೆ

- Advertisement -

ಮನ ತುಂಬಿ ಜಪಿಸುವೆವು
ಅಂಗ ಹರಿದು ಲಿಂಗ ಗುಣಕೆ
ಅರ್ಥವ ಗಳಿಸಿಡುವೆ
ದಾಸೋಹದ ಸೊಮ್ಮಿಂಗೆ.

ಕಟುಕರ ಕೇರಿಯಲಿ ನಿಂತಿಹುದು ಕಲ್ಯಾಣ
ಕೃಷ್ಣ ಮಲಪ್ರಭೆಯಲಿ ಮುಳುಗಿದೆ ಸಂಗಮ
ಉಳಿದಿಲ್ಲ ಷಟಸ್ಥಲ ಉಳವಿಯ ಮೊನೆಯಲ್ಲಿ
ಬಂದೊಮ್ಮೆ ತೋರು ನೀ ಅನುಭವ ಮಂಟಪ

ಮಠಗಳಲ್ಲಿ ಅಭಿಸೇಕ ವೈದಿಕ ಮಂತ್ರ
ಗದ್ದುಗೆ ಪೂಜೆ ಶೊಷಣೆಯ ತಂತ್ರ
ಅಬ್ಬರದ ಪಲ್ಲಕ್ಕಿ ದೊಡ್ಡವರ ಕುತಂತ್ರ
ನಿಟ್ಟಿಸಿರು ಬಿಟ್ಟ ಭಕ್ತರು ಅತಂತ್ರ

- Advertisement -

ಎಲ್ಲಿರುವೆ ಬಸವಣ್ಣ ?ಭಕ್ತಿಯ ಪರುಷ
ಬಂದೊಮ್ಮೆ ತೋರು ಬಾ
ಕಳೆದಿರುವ ಕಲ್ಯಾಣ ಮರೆತಿರುವ ಸಂಗಮ
ಧರೆಯಲ್ಲಿ ಮೆರೆಯಲಿ ಶರಣ ಧ್ವಜವು

ಅಳುವ ಧ್ವನಿಯು ನಿಂತಿಲ್ಲ
ಕಂದಮ್ಮಗಳ ಕರಗೂಸು
ನಿನ್ನೆಸರಲಿ ದೆಸೆದೆಸೆಯಲಿ ಬಿಕ್ಕುತಿವೆ
ಹುಟ್ಟಿ ಬಾ ಬಸವಣ್ಣ ಸೆರಗೊಡ್ಡಿ ಬೇಡುವೆ

ಚಾಮರವ ಬೀಸಿಹೆವು
ತೋರಣವ ಕಟ್ಟಿಹೆವು
ಊರ ಕೇರಿಯಲಿ ರಂಗವಲ್ಲಿಯ ಹಾಕಿಹೆವು
ಎಲ್ಲಿರುವೆ ಬಸವಣ್ಣ ? ಕಲ್ಯಾಣದ ಮಹಾಪುರುಷ

ಡಾ ಶಶಿಕಾಂತ ಪಟ್ಟಣ -ರಾಮದುರ್ಗ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಗುಜನಟ್ಟಿ ಗ್ರಾ ಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಮೂಡಲಗಿ - ತಾಲೂಕಿನ ಗುಜನಟ್ಟಿ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಾಮಾನ್ಯ ವರ್ಗದಿಂದ ಕಲ್ಲಪ್ಪ ನಿಂಗಪ್ಪ ಮುಕ್ಕಣ್ಣವರ, ಉಪಾಧ್ಯಕ್ಷರಾಗಿ...
- Advertisement -

More Articles Like This

- Advertisement -
close
error: Content is protected !!
Join WhatsApp Group