ಕವನ

Must Read

ಜಗದ ಬೆಳಕಿನ ಹಣತೆ
______________________

ಸೋಲುವನು ಬಸವಣ್ಣ
ಕಾವಿ ಮಠ ಆಶ್ರಮಗಳಲ್ಲಿ
ಜಂಗಮರ ಜಂಗುಳಿಯಲಿ
ಬಣಜಿಗರ ಬಣದಲ್ಲಿ
ಗೌಡರ ಗದ್ದಲದಲ್ಲಿ
ರಡ್ಡಿಗಳ ಅಬ್ಬರದಲ್ಲಿ
ನೊಣಬರ ಮೇಳದಲ್ಲಿ
ಸಾದರ ಸಂಭ್ರಮದಲ್ಲಿ
ಗಾಣಿಗರ ಕೂಟದಲ್ಲಿ
ಮೀಸಲಾತಿ ಕೂಗಿನಲಿ
ಹುಡುಕುತ್ತಿದ್ದಾನೆ
ಬಸವಣ್ಣ ತನ್ನನ್ನು
ಕುರುಬ ಕುಂಬಾರ
ಅಗಸ ಹಡಪದ
ಮಾದಾರ ಮೇದಾರ
ಶ್ರಮಿಕ ಶೋಷಿತ
ದುಡಿವ ವರ್ಗಗಳಲ್ಲಿ
ಗೆದ್ದರು ಲಿಂಗಾಯತರು
ಸೋಲಿಸಿ ಬಸವನನ್ನು
ಪಕ್ಷಗಳಿಗೆ ಜೈಕಾರ ಹಾಕಿ
ಕುಡಿದು ಕುಣಿಯುತ
ಮೆರವಣಿಗೆಯಲಿ
ಬಸವಣ್ಣ
ಜಗದ ಬೆಳಕಿನ ಹಣತೆ
ಅದರ ಅಡಿಯಲ್ಲಿ ನಾವು
ಸತ್ಯವರಿಯದ ಕತ್ತಲೆ
____________________
ಡಾ. ಶಶಿಕಾಂತ ಪಟ್ಟಣ ರಾಮದುರ್ಗ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group