ಕವನ: ರಾಧಾ ಕೃಷ್ಣರ ದಿವ್ಯ ಪ್ರೇಮ

Must Read

ಸ್ನೇಹ ಎಂದೇ ನೀ

ಸ್ನೇಹ ದಾಟಿ ಪ್ರೇಮವೆಂದೇ ನಾ
ಪ್ರೀತಿಯ ಹೆಜ್ಜೆಗೆ ಸ್ನೇಹವೇ ಮೂಲಾಧಾರ
ನನ್ನ ಭಾವ ತರಂಗದ ಮಾತೆಂದು
ಮೌನಿಯಾದೆ ನಾ……

ಯಾರದೋ ಶಾಪಕ್ಕೆ ಮರೆತು
ಹೊರಟೆಯಾ ನನ್ನ
ನಿನ್ ಎದುರಲೇ ನಿಂತು ನಿನ್ನವನೆಂದು
ನೆನಪಿಸುತಿಹೇ ನಾ ! ಕ್ರೋಧದಿ ತೋರುವ
ಪ್ರೀತಿಯನ್ನು ನಿನ್ನಲ್ಲಿ ಕಂಡೆ ನಾ

ನೀ ಮರೆತು ಮರೆಯಾದರು ಈ
ಹೃದಯ ನಿನ್ನದೆಂದು ಮೌನಿಯಾಗಿಹೆ ನಾ
ದುಃಖದ ಕಡಲಲಿ ಕೊನೆಯಾಯಿತು
ನನ್ನ ಪ್ರೀತಿಯ ಪಯಣ

ಪ್ರೀತಿ ಹುಟ್ಟಿತೆಂದು
ಹೇಳಲಾರದೆ ನಿಂದೆ ನೀ
ಕೊಳಲ ನಾದಕೆ ಮೈ ಮರೆತು
ಸಖನ ರಾಸಲೀಲೆಯೊಳು ಮುಳುಗಿಹೆ ನೀ

ಪ್ರೀತಿಗೆ ಮೋಹವೆಂದ ನಾ
ಅವಳ ಮನಸ ಸೂರೆಗೊಳಿಸಿದವ ನಾ
ನಾನವಳ ಮನದೊಡೆಯನಾದರೇನು
ರಾಧೆ ನನ್ನವಳಲ್ಲ

ಆನಂದ ಬಬಲಿ, ನಾಗನೂರ
ಜಿಲ್ಲಾ – ಬೆಳಗಾವಿ

Latest News

ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನನ್ನು ಥಳಿಸಿದ ಬೈಕ್ ಸವಾರ

ಬೀದರ - ಸರ್ಕಾರಿ ಬಸ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಬೈಕ್ ಸವಾರ ಹಲ್ಲೆ...

More Articles Like This

error: Content is protected !!
Join WhatsApp Group