Monthly Archives: June, 2020
ಸುದ್ದಿಗಳು
ಕಯ್ಯಾರ ಕಿಞ್ಞಣ್ಣ ರೈ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು
*ಕಯ್ಯಾರ ಕಿಞ್ಞಣ್ಣ ರೈ,ಕನ್ನಡ ಹೋರಾಟಗಾರರು ಮತ್ತು ಹಿರಿಯ ಸಾಹಿತಿಗಳು ಇವರಿಗೆ ಹುಟ್ಟು ಹಬ್ಬದ ಶುಭಾಶಯಗಳು.*ಗಡಿನಾಡಿನ ಕವಿ ಕಯ್ಯಾರ ಕಿಞ್ಞಣ್ಣ ರೈ
(ಜೂನ್ ೮, ೧೯೧೫ - ಆಗಸ್ಟ್ ೯, ೨೦೧೫)
ಅಖಿಲ ಕರ್ನಾಟಕದ ಮಹಾಕವಿಯಾಗಿ, ಹಿರಿಯ ಸಾಹಿತಿಯಾಗಿ, ಬಹುಭಾಷಾ ವಿದ್ವಾಂಸರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮುಂಚೂಣಿಯ ನಾಯಕರಾಗಿ, ಕಾಸರಗೋಡು ವಿಲೀನೀಕರಣದ ರೂವಾರಿಯಾಗಿದ್ದ ಕಯ್ಯಾರ ಕಿಞ್ಞಣ್ಣ...
ಕವನ
ಹರಿಸಿದರು ಬೇಂದ್ರೆ
ಹರಿಸಿದರು ಬೇಂದ್ರೆ
ಹರಿಸಿದರು ಬೇಂದ್ರೆ
ಲೇಸನುಂಡು ಲೇಸುಸರಿ
ಲೇಸೇ ಮೈಯ ಪಡೆದು
ಚಿಮ್ಮಲಿ ಈ ಸುಖವೆಂದು
ಚೆನ್ನಸರಸತಿಯ
ನಿತ್ಯ ಸೇವೆ ಇರಲಿ ಒಲವಿರಲಿ
ಪ್ರಾಣಿ ಪಕ್ಷಿಗಳಲಿ
ನಮಿಸು ಗುರುಹಿರಿಯರ
ಪರಿಸರವ ಪ್ರೀತಿಸೆಂದು
ನಡೆನುಡಿಯಲ್ಲಿ ಚೆನ್ನುಡಿಯಲಿ
ಚಿಮ್ಮಿಸುತ ಮೃದುಭಾವ
ಅರಳಿಸುತೆಲ್ಲರ ಮನ
ದಿವ್ಯವಿರಲಿ ಜೀವನಾ
ಎಂದು ಹರಿಸಿದರು ಬೇಂದ್ರೆ
ವಿಶ್ವದ ಕುಲಕೋಟಿಯನು
ಹರಿಸಿದರು ಬೇಂದ್ರೆ
ವಿಶ್ವದ ಚೇತನರನು.
ರಾಧಾ ಶಾಮರಾವ
ಧಾರವಾಡ
ಕವನ
ಕವನಗಳು
ನಾನು ನಾನಲ್ಲ
ಗುರು ಇರದೇ ಗುರಿ ತಲುಪುವ
ಗುರೂರು ಎನಗಿಲ್ಲ
ಗುರುತಿರದ ದಾರಿಯಲಿ
ಗುರಿತಪ್ಪುವ ಆಸೆ ನನಗಿಲ್ಲ
ಸತ್ಯವೇ ಹೇಳುವೆನು
ನಾನು ನಾನಲ್ಲ...
ಹೊತ್ತು ಹೆತ್ತಳೆನಗೆ
ನನ್ನ ಪ್ರೀತಿಯ ಅಮ್ಮ
ಗುರುತಿಗೊಂದ್ ಹೆಸರು
ಉಸುರಿದರು ಕಿವಿಯೊಳಗೆ
ನನಗೆ ನನ್ನ ಅತ್ತೆಮ್ಮಾ
ಹಸಿದಾಗ ತುತ್ತಿಟ್ಟು
ಅಕ್ಕರೆಯ ಮುತ್ತಿಟ್ಟು
ನನಗಾಗಿ ತಮ್ಮೆಲ್ಲ
ಕನಸುಗಳ ಹೂತಿಟ್ಟು
ದುಷ್ಟರ ಕೈಯಿಂದ
ಪಾರಾಗುವ ಮತಿ ಕೊಟ್ಟು
ಏನೂ ಅರಿಯದ ನನಗೆ
ಅರಿವಿನ ಅರಿವೆಯನು
ತೊಡಿಸಿದವರು ಬೇರೆ
ಗುರಿ ಮುಟ್ಟಲು ನನ್ನೊಳಗೆ
ಅಕ್ಷರದ ಗರಿಯಿಟ್ಟವರು ಬೇರೆ
ಪ್ರತಿ ಹೆಜ್ಜೆಗೂ, ಪ್ರತಿದಿನವೂ
ತರತರಹದ ಪಾಠ
ಕಲಿಸಿದವರೆಲ್ಲರೂ ಗುರು ಎನಗೆ
ಗುರು ಇರದೇ...
ಸುದ್ದಿಗಳು
ಜೂನ್ 7 ; ಇಂದು ” ಆಹಾರವನ್ನು ಸುರಕ್ಷತಾ ದಿನ “
ನಾವು ಸೇವಿಸುವ ಆಹಾರ ಕೇವಲ ಜೀವರಕ್ಷಕವಾಗಿರದೇ ಆರೋಗ್ಯ, ಆಯುಷ್ಯವನ್ನೂ ನೀಡುವುದಾಗಿರಬೇಕು ಎಂಬ ಉದ್ದೇಶದಿಂದ ಎಲ್ಲರಲ್ಲಿ ಅರಿವು ಮೂಡಿಸಲು ಇಂದು " ವಿಶ್ವ ಆಹಾರ ಸುರಕ್ಷತಾ ದಿನ " ಆಚರಿಸಲಾಗುತ್ತಿದೆ.ಹಿಂದಿನ ವರ್ಷವೇ ಅಂದರೆ ಜೂನ್ 7, 2019 ರಂದು ಆರಂಭಿಸಲ್ಪಟ್ಟ ಈ ದಿನವನ್ನು ನಾಗರಿಕರ ಆರೋಗ್ಯ ರಕ್ಷಣೆ ಆಹಾರದಲ್ಲಿದೆ ಎಂಬುದನ್ನು ತಿಳಿಸಲೋಸುಗ ಆಚರಿಸಲಾಗುತ್ತದೆ. ಡಾ.ಹರ್ಷವರ್ಧನ್ ಎಂಬುವವರು...
ಸುದ್ದಿಗಳು
ಶಿವಾಜಿ ಪಟ್ಟಾಭಿಷೇಕ ದಿನ ಈವತ್ತು
ಭಾರತ ದೇಶಕ್ಕೆ ಸ್ವಾಭಿಮಾನದ ಗಣಿಯಾಗಿ ಗೋಚರಿಸಿದ ಹಿಂದೂ ಹೃದಯ ಸಾಮ್ರಾಟನೆನಿಸಿಕೊಂಡ ಮಹಾರಾಜ ಛತ್ರಪತಿ ಶಿವಾಜಿಯವರ ಪಟ್ಟಾಭಿಷೇಕದ ದಿನ ಇಂದು. ಶಿವಾಜಿರಾಜೆ ಶಹಾಜಿರಾಜೆ ಭೋಂಸ್ಲೆ (ಫೆಬ್ರುವರಿ ೧೯, ೧೬೩೦/ಫೆಬ್ರುವರಿ ೧೯, ೧೬೨೭ - ಏಪ್ರಿಲ್ ೩, ೧೬೮೦) ಮರಾಠಾ ರಾಜ್ಯದ ಸ್ಥಾಪಕರು.ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು. ಕೊಂಕಣ...
ಸುದ್ದಿಗಳು
ರಮೇಶ್ ಗೆ ಬೆಳಗಾವಿ ಉಸ್ತುವಾರಿ, ಮೂಡಲಗಿ ಗತಿಯೇನು?
ಹೌದು, ಈ ಪ್ರಶ್ನೆಗೆ ಈಗ ಮತ್ತಷ್ಟು ಬಲ ಬಂದಂತಾಗಿದೆ. ಯಾಕೆಂದರೆ ಮೂಡಲಗಿ ತಾಲೂಕೆಂದು ಘೋಷಣೆಯಾಗಿದ್ದನ್ನು ರದ್ದು ಮಾಡಿದವರು ಇದೇ ರಮೇಶ ಜಾರಕಿಹೊಳಿಯವರು. ಹಾಗೆಂದು ಅವರೇ ಆಗ ಒಪ್ಪಿಕೊಂಡರು ಅಮೇಲೆ ಅದಕ್ಕಾಗಿ ಮೂಡಲಗಿಯಲ್ಲಿ ದೊಡ್ಡ ಹೋರಾಟವೇ ಆಯಿತು. ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಬೃಹತ್ ಪ್ರಮಾಣದ ವಿರೋಧವನ್ನೇ ಎದುರಿಸಬೇಕಾಯಿತು. ಆದರೂ ಶಾಸಕರು ಮುತುವರ್ಜಿ ವಹಿಸಿ ತಿಂಗಳುಗಟ್ಟಲೆ ಬೆಂಗಳೂರಿನಲ್ಲೇ...
Uncategorized
ನೇಕಾರರ ಪರಿಸ್ಥಿತಿ ಗಂಭೀರ ತಿರುವು ತೆಗೆದುಕೊಳ್ಳುತ್ತಿದೆ! ಯಾವ ಹಂತ ತಲುಪುವದೊ ಗೊತ್ತಿಲ್ಲ!!
ಮಾನ್ಯ ಮುಖ್ಯಮಂತ್ರಿಗಳೇ,ನೇಕಾರಿಕೆ ಉದ್ಯೋಗದಲ್ಲಿ ತೊಡಗಿರುವ ರಾಜ್ಯದ ಲಕ್ಷಾಂತರ ಸ್ಥಿತಿ ಗಂಭೀರವಾಗತೊಡಗಿದೆ. ಕೊರೋನಾ ಲಾಕ್ ಔಟ್ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳುಗಳಿಂದ ವಿದ್ಯುತ್ ಮಗ್ಗಗಳನ್ನು ಅವಲಂಬಿಸಿರುವ ಲಕ್ಷಾಂತರ ಜನರು ಅಕ್ಷರಶಃ ಉಪವಾಸದ ದಿನಗಳನ್ನು ಕಳೆಯುತ್ತಿದ್ದಾರೆ. ಇದಕ್ಕೆ ಬೆಳಗಾವಿಯಲ್ಲಿ ಕಳೆದ ಒಂದು ವಾರದಿಂದ ನಡೆದಿರುವ ಕೆಲವು ಘಟನೆಗಳೇ ಸಾಕ್ಷಿಯಾಗಿವೆ.ಇದಕ್ಕಿಂತ ಬೇರೆಯ ಪುರಾವೆಗಳೇ ಬೇಕಾಗಿಲ್ಲ! ವಿದ್ಯುತ್ ಮಗ್ಗಗಳಲ್ಲಿ ತಯಾರಾಗಿ...
ಸುದ್ದಿಗಳು
ಜೂನ್ 5 :ವಿಶ್ವ ಪರಿಸರ ದಿನ
World environment day
United Nation Environment Programme ಸಂಸ್ಥೆ 1973
ಜೂನ್ 5 ರಂದು ವಿಶ್ವ ಪರಿಸರ ದಿನ ಆಚರಿಸಲು ಕರೆ ನೀಡಿತು. ಸಾಮಾನ್ಯವಾಗಿ ನಾವೆಲ್ಲರು ಅಭಿವೃದ್ದಿ ನೆಪದಲ್ಲಿ ,ಅತಿಯಾದ ಜನಸಂಖ್ಯೆ ಹೆಚ್ಚಳ,ಕೈಗಾರಿಕೆಗಳ ಹೆಚ್ಚಳ, ಜಲ ಮಾಲಿನ್ಯ, ವಾಯು, ಧ್ವನಿ ಮಾಲಿನ್ಯ, ಕಾಡು ನಾಶ...ಹೀಗೆ ಹತ್ತು ಹಲವಾರು ಕಾರಣಗಳಿಂದ ಪರಿಸರ ಮಾಲಿನ್ಯ ಮುಂದುವರೆದಿದೆಜಲಮಾಲಿನ್ಯ,ಭೂ ಮಾಲಿನ್ಯ ,ವಾಯುಮಾಲಿನ್ಯ,...
ಲೇಖನ
ಮಾತನಾಡುವ ಮುನ್ನ ಎಚ್ಚರವಿರಲಿ
*ಮಾತೇ ಜ್ಯೋತಿರ್ಲಿಂಗ*
ಮಾತು ಎನ್ನುವುದು ಮನುಜನಿಗೆ ದೇವನಿತ್ತ ಅಮೂಲ್ಯವಾದ ವರ. ಎಲ್ಲ ಜೀವಿಗಳಿಗಿಂತ ಭಿನ್ನ ಎನಿಸಿಕೊಂಡಿದ್ದು ಈ ಕಾರಣಕ್ಕೆ. ಮನುಜಕುಲದ ಹುಟ್ಟಿನೊಂದಿಗೆ ಮಾತು ಹುಟ್ಟಲಿಲ್ಲ, ಪ್ರಕೃತಿಯ ಮಡಿಲಲ್ಲಿ ಮನುಜಕುಲದ ಬೆಳವಣಿಗೆಯೊಂದಿಗೆ ಮಾನವನ ಬುದ್ಧಿಮಟ್ಟ ವೃದ್ಧಿಸಿದಂತೆ, ಮನುಷ್ಯ ಹಲವು ರೀತಿಯಲ್ಲಿ ಬೆಳೆಯತೊಡಗಿದ. ಹಕ್ಕಿಗಳ ಕೂಗು, ನದಿ ತೊರೆಗಳ ಶಬ್ದ, ಗಾಳಿಯ ಝೇಂಕಾರ ಮುಂತಾದ ಧ್ವನಿಗಳನ್ನು ಕೇಳುತ್ತಾ ಅವುಗಳಿಗೆ...
ಕವನ
ಕವನಗಳು
ರೈತ
ಮಳೆ ಗಾಳಿ ಬಿಸಿಲನು ನೋಡದ
ಬಂಡೆಗಲ್ಲು ನನ್ನ ರೈತ
ಅವನೇ ನಮಗೆ ಅನ್ನದಾತ.
ಬೆವರು ಸುರಿಸಿ ದುಡಿದು ತಾನು
ಜಗಕೆ ಅನ್ನ ನೀಡುತಿರುವ ಅನ್ನದಾತನು
ಕೋಟಿ ವಿದ್ಯೆಯಲ್ಲಿ ಮೇಟಿವಿದ್ಯೆ ಮೇಲು ಎಂದು
ತೋರಿಸಿದಾತನು.
ಭೂಮಿತಾಯಿ ಒಡಲು ತುಂಬಿ
ಭೂಮಿತಾಯಿ ಮಗನು ಆಗಿ
ಮಣ್ಣಿನಲ್ಲಿ ಮಾಣಿಕ್ಯ ತೆಗೆದು
ರತ್ನಕಂಬಳಿಯಲ್ಲಿ ಮೆರೆಯುತಿರುವನು.
ಬಸವ ಸೇವೆ ಮಾಡುತ ನೀನು
ಜಗಮೆಚ್ಚಿದ ಮಗನು ನೀನು
ನಿನ್ನ ಋಣವ ತೀರಿಸಲು ನಾವು
ಏಳು ಜನ್ಮ ಬೇಕು ನಮಗೆ.
ರೈತ ನಿನ್ನ ದುಡಿಮೆಗೆ
ಭೂಮಿತಾಯಿ ಒಲಿದು...
Latest News
ಕವನ : ಅನುಬಂಧ
ಅನುಬಂಧಕಾಣದ ದಾರಿಯಲ್ಲಿ
ಬೆಸೆದ ನಂಟು,
ಹೆಸರಿಲ್ಲದಿದ್ದರೂ ಹೃದಯಕ್ಕೆ
ಪರಿಚಿತವಾದ ಬಂಧ…
ಕಾಲದ ಹೊಳೆ ಹರಿದರೂ
ಕಳೆಯದ ಗುರುತು, ಗಂಟು
ಅದು ಅನುಬಂಧ.
ಮೌನದಲ್ಲೂ ಮಾತಾಡುವ
ಸಂಬಂಧ, ಬಂಧ..
ಕಣ್ಣಂಚಿನ ನೀರನ್ನೂ
ಓದುತ್ತದೆ ಒರೆಸುತ್ತದೆ.
ಹೃದಯ ಮುರಿದು
ನೊಂದ ಕ್ಷಣದಲ್ಲಿ
ಅದೃಶ್ಯವಾಗಿ ಕೈ
ಹಿಡಿದುಕೊಳ್ಳುತ್ತದೆ.
ಮಣ್ಣಿನ ವಾಸನೆಯಂತೆ
ಸಹಜ,
ಬೆಳಗಿನ ಬೆಳಕಿನಂತೆ
ಮೃದುವು.
ನಗುವಿನಲ್ಲೂ,...



