Monthly Archives: March, 2023
ಸುದ್ದಿಗಳು
ರಸ್ತೆ ಬಂದ್ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಕೋರಿಕೆ
ಸಿಂದಗಿ: ಪಂಚಮಸಾಲಿ ಸಮಾಜದ ಜೀರ್ಣೋದ್ದಾರಕ್ಕೆ 2ಎ ಮೀಸಲಾತಿ ನೀಡುವಂತೆ ಕೂಡಲ ಸಂಗಮದಿಂದ ಬೆಂಗಳೂರವರೆಗೆ ಪಾದಯಾತ್ರೆ ಮಾಡಿದ್ದರೂ ಕೂಡಾ ಮೀಸಲಾತಿ ನೀಡುವಲ್ಲಿ ಸರಕಾರ ಮಲತಾಯಿ ಧೋರಣೆ ತಾಳುತ್ತಿದ್ದು ಇದರ ಹಿನ್ನೆಲೆಯಲ್ಲಿ ಇಡೀ ರಾಜ್ಯಾದ್ಯಂತ ಮಾರ್ಚ 4 ರಂದು ರಾಜ್ಯದ ಎಲ್ಲಾ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಕಾರಣ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ...
ಸುದ್ದಿಗಳು
ಶಾಂತವೀರ ಪಟ್ಟಾಧ್ಯಕ್ಷರ ಪಲ್ಲಕ್ಕಿ ಉತ್ಸವ
ಸಿಂದಗಿ: ಸಿಂದಗಿಯ ಸಿರಿ ಶ್ರೀ ಶಾಂತವೀರ ಪಟ್ಟಾಧ್ಯಕ್ಷರ 43ನೆಯ ಪುಣ್ಯ ಸ್ಮರಣೆ ಹಾಗೂ ಗದುಗಿನ ತೋಂಟದಾರ್ಯ ಮಠದ ಲಿಂಗೈಕ್ಯ ಡಾ. ಸಿದ್ದಲಿಂಗ ಮಹಾಸ್ವಾಮಿಗಳ ನಾಲ್ಕನೆಯ ಗುರು ಸ್ಮರಣೆ ನಿಮಿತ್ತ ಹಮ್ಮಿಕೊಂಡ ಶಾಂತವೀರ ಪಟ್ಟಾಧ್ಯಕ್ಷರ ರಜತ ಮೂರ್ತಿಯ ಪಲ್ಲಕ್ಕಿ ಉತ್ಸವವು ಶುಕ್ರವಾರ ಪಟ್ಟಣದ ವಿವಿಧ ಬೀದಿಗಳ ಮುಖಾಂತರ ಸಂಚರಿಸಿ ಶ್ರೀ ಮಠಕ್ಕೆ ತಲುಪಿತು.ಈ ಬಾರಿ ನೂರಾರು...
ಸುದ್ದಿಗಳು
ದಿ. 04 ರಂದು ಗೋಲಗೇರಿ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಸಿಂದಗಿ: ಮಾ. 04 ರಂದು 33/11 ಕೆ.ವಿ ಗೋಲಗೇರಿ ವಿದ್ಯುತ್ ಉಪಕೇಂದ್ರದಲ್ಲಿ ಗ್ರಾಹಕರ ಹಿತದೃಷ್ಟಿಯಿಂದ ತುರ್ತು ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ, ಸಹಾಯಕ ಕಾರ್ಯನಿರ್ವಾಹಕಅಭಿಯಂತರರು (ವಿ), 33/11ಕೆ.2, ಎಸ್ & ಎಲ್ ವಿಭಾಗ ಹೆಸ್ಕಾಂ, ವಿಜಯಪುರ ರವರು ನೀಡಿದ ಆದೇಶದಂತೆ ಹೊನ್ನಳ್ಳಿ ಐ.ಪಿ. ವಂದಾಲ ಐ.ಪಿ. ನಂದಗೇರಿ ಐ.ಪಿ. ಡವಳಾರ ಐ.ಪಿ. ಗೋಲಗೇರಿ ಎನ್.ಜೆ.ವಾಯ್ (ನಿರಂತರ...
ಸುದ್ದಿಗಳು
ಪಂಚಮಸಾಲಿಗಳ ರಸ್ತಾ ಬಂದ್ ಹೋರಾಟಕ್ಕೆ ಉಪ್ಪಾರ ಸಮಾಜದ ಬೆಂಬಲ
ಮೂಡಲಗಿ: ಪಂಚಮಸಾಲಿಗಳ 50ನೇ ದಿನದ ಸತ್ಯಾಗ್ರಹ, ಸರ್ಕಾರಕ್ಕೆ ನಮ್ಮ ಆಕ್ರೋಶ, ರಾಷ್ಟ್ರೀಯ ರಾಜ್ಯ ಹೆದ್ದಾರಿ, ಗ್ರಾಮ ರಸ್ತೆ ಬಂದ್ ಮಾಡಿ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಪಂಚಮಸಾಲಿಗಳಿಗೆ ಕರೆ ನೀಡಿದ ಹಿನ್ನೆಲೆ ರಸ್ತೆ ಬಂದ್ ಹೋರಾಟಕ್ಕೆ ಮೂಡಲಗಿ ತಾಲೂಕಾ ಉಪ್ಪಾರ ಸಮಾಜದವರು ಕೂಡಾ ಬೆಂಬಲ ನೀಡುತ್ತೇವೆ ಎಂದು ಮೂಡಲಗಿ ಮಹರ್ಷಿ ಶ್ರೀ...
ಸುದ್ದಿಗಳು
ಮಕ್ಕಳನ್ನೇ ಆಸ್ತಿಯನ್ನಾಗಿ ಬೆಳೆಸಿ- ಸಿದ್ಧಲಿಂಗ ಕಿಣಗಿ
ಸಿಂದಗಿ: ವಿದ್ಯಾರ್ಥಿಗಳು ನಮ್ಮ ದೇಶದ ಆಸ್ತಿ, ವಿದ್ಯಾರ್ಥಿಗಳ ಪಾಲಕರಾದ ತಾವುಗಳು ಕಷ್ಟ ಪಟ್ಟು ದುಡಿದು ಆಸ್ತಿ ಅಂತಸ್ತು ಗಳಿಸುವ ಬದಲು ನಿಮ್ಮ ಮಕ್ಕಳನ್ನೇ ಆಸ್ತಿಯಾಗಿ ಬೆಳೆಸಿ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿದರೆ ದೇಶ ಅಭಿವೃದ್ಧಿ ಪತದತ್ತ ಸಾಗುತ್ತದೆ ಎಂದು ಎಚ್, ಜಿ, ಪ, ಪೂ, ಕಾಲೇಜಿನ ಪ್ರಾಧ್ಯಾಪಕ ಸಿದ್ದಲಿಂಗ ಕಿಣಗಿ ಹೇಳಿದರು.ತಾಲೂಕಿನ ಮೋರಟಗಿ ಗ್ರಾಮದ...
ಸುದ್ದಿಗಳು
ಗ್ರಾ.ಪಂ. ಹಗರಣ ಮುಚ್ಚಿ ಹಾಕುವ ಹುನ್ನಾರ – ಬಿಸ್ಮಿಲ್ಲಾ ಮುಲ್ಲಾ
ಸಿಂದಗಿ: ರಾಂಪೂರ (ಪ.ಅ) ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಜ್ಯೋತಿ ಶಿಗ್ಗಾಂವಿ ಮತ್ತು ಗ್ರಾ.ಪಂ ನ ಅಧ್ಯಕ್ಷ ನಿಂಗಣ್ಣ ಬಿಸನಾಳ ಮತ್ತು ಜೆ.ಇ ಶಂಕರ ಪೂಜಾರಿ ಇವರುಗಳು ಸೇರಿಕೊಂಡು ಗ್ರಾಮ ಪಂಚಾಯತಿಯ ಸದಸ್ಯರ ಗಮನಕ್ಕೆ ತರದೇ ಸಾಮಾನ್ಯ ಸಭೆ ನಡೆಸಿ ಗ್ರಾಮ ಪಂಚಾಯತಿಯಲ್ಲಿನ ಹಗರಣಗಳನ್ನು ಮುಚ್ಚಿಹಾಕುವ ಹುನ್ನಾರ ನಡೆಸಿದ್ದಾರೆ ಎಂದು ಗ್ರಾಮ ಪಂಚಾಯತ ಸದಸ್ಯೆ...
ಸುದ್ದಿಗಳು
ಉತ್ತರ ಕರ್ನಾಟಕ ಕಲಾವಿದರಲ್ಲಿ ಕಲಾ ಶ್ರೀಮಂತಿಕೆ ಇದೆ – ಡಾ. ಸಿ ಕೆ ನಾವಲಗಿ
ಮೂಡಲಗಿ: ‘ಬಡ ಕಲಾವಿದರಾಗಿರುವ ಉತ್ತರ ಕರ್ನಾಟಕದ ಜಾನಪದ ಕಲಾವಿದರು ತಮ್ಮ ಕಲೆಗಳಲ್ಲಿ ಶ್ರೀಮಂತಿಕೆಯನ್ನು ಹೊಂದಿದ್ದಾರೆ’ ಎಂದು ಗೋಕಾಕದ ಜಾನಪದ ವಿದ್ವಾಂಸ ಡಾ. ಸಿ.ಕೆ. ನಾವಲಗಿ ಹೇಳಿದರು.ತಾಲ್ಲೂಕಿನ ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆತಿಥ್ಯದಲ್ಲಿ ಬೆಂಗಳೂರಿನ ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಕಲ್ಲೋಳಿಯ ವೀರಭದ್ರೇಶ್ವರ ಜಾನಪದ ಕಲಾ ಪೋಷಕ ಸಂಘ ಇವರ ಆಶ್ರಯದಲ್ಲಿ ಜರುಗಿದ...
ಸುದ್ದಿಗಳು
ಹೊಸ ಪುಸ್ತಕ ಓದು: ಶಿವ ಸಂಪದ (ಡಾ. ಸಿ.ಶಿವಕುಮಾರಸ್ವಾಮಿ ಷಷ್ಟ್ಯಬ್ದಿ ಅಭಿನಂದನಾ ಸಂಪುಟ)
ಶಿವ ಸಂಪದ (ಡಾ. ಸಿ.ಶಿವಕುಮಾರಸ್ವಾಮಿ ಷಷ್ಟ್ಯಬ್ದಿ ಅಭಿನಂದನಾ ಸಂಪುಟ)
ಸಂಪಾದಕರು: ಡಾ. ಎಂ. ಶಿವಕುಮಾರ ಸ್ವಾಮಿ, ಡಾ. ಬಿ. ನಂಜುಂಡಸ್ವಾಮಿಪ್ರಕಾಶಕರು: ಶ್ರೀ ವೀರಭದ್ರಸ್ವಾಮಿ ಚಾರಿಟಬಲ್ ಟ್ರಸ್ಟ್, ಬೆಂಗಳೂರು, ೨೦೨೨ನೂರು-ನೂರಿಪ್ಪತ್ತು ವರ್ಷಗಳ ಹಿಂದೆ ಆಂಗ್ಲರ ಆಡಳಿತ ಕಾಲದಲ್ಲಿ ವೀರಶೈವರು ಶೂದ್ರರು ಎಂದು ಪರಿಗಣಿಸಿದ ಸಂದರ್ಭದಲ್ಲಿ ಶ್ರೇಣೀಕೃತ ಸಮಾಜದಲ್ಲಿ ವೀರಶೈವ ಸಮುದಾಯವು ಹಿಂದೂ ಪರಂಪರೆಯಲ್ಲಿ ಶ್ರೇಷ್ಠವಾದುದು ಎಂದು ಸಿದ್ಧಪಡಿಸಬೇಕಾದ ಒಂದು ಅನಿವರ್ಯತೆ...
ಸುದ್ದಿಗಳು
ಶ್ರೀ ಸತ್ಯ ಸಾಯಿಬಾಬಾರ 16ನೇ ವಾರ್ಷಿಕೋತ್ಸವ ಮಾ.5ರಂದು
ಮೂಡಲಗಿ: ಪಟ್ಟಣದ ಶ್ರೀ ಸತ್ಯ ಸಾಯಿಬಾಬಾ ಸೇವಾ ಸಮಿತಿ ಆಶ್ರಯದಲ್ಲಿ ಶ್ರೀ ಸತ್ಯ ಸಾಯಿಬಾಬಾರ 16ನೇ ವಾರ್ಷಿಕೋತ್ಸವ ಸಮಾರಂಭವು ಮಾ.5 ರಂದು ಆರ್.ಡಿ.ಎಸ್. ಶಿಕ್ಷಣ ಸಂಸ್ಥೆಯ ಸಭಾ ಭವನದಲ್ಲಿ ನಡೆಯಲಿದೆ.ಸಮಾರಂಭದ ಸಾನ್ನಿಧ್ಯವನ್ನು ಸ್ಥಳೀಯ ಶ್ರೀ ಶಿವಬೋಧರಂಗ ಮಠದ ಶ್ರೀ ದತ್ತಾತ್ರೇಯಬೋಧ, ಶ್ರೀ ಶ್ರೀಧರಬೋಧಬೋಧ ಸ್ವಾಮೀಜಿಗಳು, ಸುಣಧೋಳಿ ಜಡಿಸಿದ್ದೇಶ್ವರ ಮಠದ ಶ್ರೀ ಶಿವಾನಂದ ಸ್ವಾಮಿಗಳು, ಶಿರೂಂಜದ...
ಸುದ್ದಿಗಳು
ಕಾಂಗ್ರೆಸ್ ಯೋಜನೆಗಳ ಉಪಯೋಗ ಮಾಡಿಕೊಳ್ಳಲು ಕರೆ
ಸಿಂದಗಿ: ಹಿಂದೆ ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಎಲ್ಲ ಯೋಜನೆಗಳನ್ನು ಪುನಃ ಪ್ರಾರಂಭ ಮಾಡುವುದಲ್ಲದೆ ಕಾಂಗ್ರೆಸ ಗ್ಯಾರಂಟಿ ಗೃಹಲಕ್ಷ್ಮಿ, ಗೃಹಜ್ಯೋತಿ, ಮನೆ ನಿರ್ವಹಣೆಗೆ ಕಾಂಗ್ರೆಸ ಪರಿಹಾರ ಬಾಂಡಗಳು, ಹಾಗೂ ಕುಟುಂಬದ ಪ್ರತಿ ಸದಸ್ಯರಿಗೆ 10 ಕಿಲೊ ಅನ್ನ ಬಾಗ್ಯ ಯೋಜನೆ ಮೂಲಕ ಹಂಚಲಾಗುವದು ಎಂದು ಬ್ಲಾಕ್ ಕಾಂಗ್ರೆಸ ಸಮಿತಿ ಅಧ್ಯಕ್ಷ ವಿಠ್ಠಲ ಜಿ ಕೊಳ್ಳೂರ ಹೇಳಿದರು.ತಾಲೂಕಿನ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



