Monthly Archives: February, 2024

ನಿರಾಶಾದಾಯಕ ರಾಜ್ಯ ಬಜೆಟ್ – ಈರಣ್ಣ ಕಡಾಡಿ

ಮೂಡಲಗಿ: ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಎಲ್ಲರನ್ನೂ ಮೆಚ್ಚಿಸುವ ಭರದಲ್ಲಿ ಕಾಂಗ್ರೆಸ್ ಪಕ್ಷದ ಕರ ಪತ್ರದಂತೆ ರಾಜ್ಯದ ಬಜೆಟ್‌ನ ಪಾವಿತ್ರ‍್ಯತೆಯನ್ನು ಹಾಳುಗೆಡವಿ ಜನತೆಯ ನಿರೀಕ್ಷೆಯನ್ನು ಹುಸಿಗೊಳಿಸಿರುವ ನಿರಾಶದಾಯಕ ಬಜೆಟ್ ಮಂಡನೆಯಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ಶುಕ್ರವಾರ ಫೆ-16ರಂದು ರಾಜ್ಯ ಬಜೆಟ್ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ಎಲ್ಲ ಇಲಾಖೆಗಳಿಗೂ ಮೀಸಲಿಟ್ಟ...

ಬಯಲು ರಂಗಮಂದಿರಗಳು ಸಾಂಸ್ಕೃತಿಕ ಕೇಂದ್ರಗಳಾಗಲಿ -ಈರಣ್ಣ ಕಡಾಡಿ

ಮೂಡಲಗಿ: ಗ್ರಾಮೀಣ ಪ್ರದೇಶದ ಜನತೆಯ ಮನರಂಜನೆಗೆ ಬಯಲು ರಂಗ ಮಂದಿರಗಳು ಕೇಂದ್ರ ಸ್ಥಾನವಾಗಿದೆ. ಸದಾ ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡುವ ಮೂಲಕ ಬಯಲು ರಂಗ ಮಂದಿರದ ಸದುಪಯೋಗ ಮಾಡಿಕೊಳ್ಳಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ಗುರುವಾರ ಫೆ-15 ರಂದು ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯ ಅನುದಾನದಡಿ  ಬನಸಿದ್ದೇಶ್ವರ ದೇವಸ್ಥಾನದ ಹತ್ತಿರ...

ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಸಂಭ್ರಮದ ರಥಸಪ್ತಮಿ

ಮೈಸೂರಿನ ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಯದುಗಿರಿ ಯತಿರಾಜ ಮಠ ಇದರ ಶಾಖೆಯ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿಂದು (ಫೆ.16) ರಥಸಪ್ತಮಿ ಪ್ರಯುಕ್ತ ಬಹಳ ಅದ್ಧೂರಿಯಾಗಿ ಪ್ರಧಾನ ವ್ಯವಸ್ಥಾಪಕ ವಿದ್ವಾನ್ ಕೆ.ಆರ್.ಯೋಗಾನರಸಿಂಹನ್ (ಮುರುಳಿ) ನೇತೃತ್ವದಲ್ಲಿ ಉತ್ಸವ ಜರುಗಿತು. ಉತ್ಸವಮೂರ್ತಿಯನ್ನು ದೇವಸ್ಥಾನದ ಸುತ್ತಲೂ ಮೂರು ಸುತ್ತು ತರಲಾಯಿತು. ದೇವರ ಪೂಜಾ ಕಾರ್ಯಕ್ರಮಗಳು ಬಹಳ ಅದ್ಧೂರಿಯಾಗಿ ಮೂಡಿಬಂತು. ಭಕ್ತಾದಿಗಳು ಸಕಾಲಕ್ಕೆ ಆಗಮಿಸಿ...

ಬೆಳಗಾವಿ ವಿಭಜನೆಯಲ್ಲಿ ಜಿಲ್ಲಾ ರಾಜಕಾರಣಿಗಳ ಕುಟಿಲತೆ; ವಕೀಲ ಚೌಕಾಶಿ ಆಕ್ರೋಶ

ಮೂಡಲಗಿ - ಬೆಳಗಾವಿ ಜಿಲ್ಲಾ ವಿಭಜನೆಗೆ ಸಂಬಂಧಿಸಿದಂತೆ ಬೆಳಗಾವಿಯ ರಾಜಕಾರಣಿಗಳ ಕುಟಿಲತೆ ಕೆಲಸ ಮಾಡಿದೆ. ಪ್ರತಿ ಸಲ ಮಗುವನ್ನು ಚಿವುಟಿ ತೊಟ್ಟಿಲು ತೂಗುತ್ತಿದ್ದ ಇವರು ಈ ಬಾರಿ ತೊಟ್ಟಿಲು ಮಾತ್ರ ತೂಗಿ ಮಗು ಅಳದಿರುವಂತೆ ನೋಡಿ ಕೊಂಡಿದ್ದಾರೆ ಎಂದು ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಚೌಕಾಶಿ ವ್ಯಂಗ್ಯ ಮಾಡಿದ್ದಾರೆ. ಪತ್ರಿಕೆಗೆ ಹೇಳಿಕೆಯೊಂದನ್ನು ನೀಡಿರುವ ಅವರು, ...

ಬೆಟಗೇರಿಯಲ್ಲಿ ಶೀಘ್ರವೇ ಡಿಸಿಸಿ ಬ್ಯಾಂಕ್ ಶಾಖೆ – ಸತೀಶ ಕಡಾಡಿ

ಕೌಜಲಗಿ(ಬೆಟಗೇರಿ): ಗ್ರಾಮೀಣ ಭಾಗದ ಆರ್ಥಿಕ ಅಭ್ಯುಧಯಕ್ಕೆ ಹಣಕಾಸು ಸಂಸ್ಥೆಗಳು ಅವಶ್ಯಕತೆ ಇದ್ದು ಬೆಟಗೇರಿ ಗ್ರಾಮದಲ್ಲಿ ಶೀಘ್ರದಲ್ಲಿಯೇ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಶಾಖೆ ಪ್ರಾರಂಭಿಸಲಾಗುವುದು ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಹೇಳಿದರು. ಸಮೀಪದ ಬೆಟಗೇರಿ ಗ್ರಾಮಕ್ಕೆ ಶುಕ್ರವಾರ ಬಿಡಿಸಿಸಿ ಬ್ಯಾಂಕ ಶಾಖೆ ಪ್ರಾರಂಭಿಸಲು ರಚಿಸಿದ ಕಮೀಟಿ ಸದಸ್ಯರು ಭೇಟಿ ನೀಡಿದ ಸಂದರ್ಭದಲ್ಲಿ ಬಿಡಿಸಿಸಿ...

ಜೆಇಇ ಮೇನ್ಸ್ ನಲ್ಲಿ ಜ್ಞಾನೋದಯ ಪಿಯು ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಮೈಸೂರು: ನಗರದ ಸರಸ್ವತಿಪುರಂನಲ್ಲಿರುವ ಜ್ಞಾನೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜನವರಿ ತಿಂಗಳಲ್ಲಿ ನಡೆದ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಸುಮಾರು 20ಕ್ಕೂ ಹೆಚ್ಚು ವಿದ್ಯಾರ್ಥಿಗಳು 90ಕ್ಕಿಂತ ಅಧಿಕ ಶೇಕಡಾವಾರು ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಆಕಾಶ್ ಎಂ.ಆರ್. (ಶೇ.99.621) ಹಾಗೂ ಪ್ರಥಮ್ ಆದಿತ್ಯ ಮೋಹನ್ (ಶೇ.99.528) ಕ್ರಮವನ್ನು ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ....

ಅಪರೂಪದ ಶಿಕ್ಷಕ ಸಾಹಿತಿ ಶ್ರೀಮತಿ ಲೀಲಾ ರಾಜಪೂತ

(ಸೃಜನಶೀಲ ಬರಹಗಾರ್ತಿ, ನಿರೂಪಕಿ,) ಹಿನ್ನೆಲೆ ಶ್ರೀಮತಿ ಲೀಲಾ ಅವರು ಬೆಳಗಾವಿ ಜಿಲ್ಲೆಯ ಹಿರಿಯ ಸಾಹಿತಿಗಳು. ಶಿಕ್ಷಣ B.A.B ed. ಜನನ 26-01-1965 ಪತಿ ಅಶೋಕ ರಜಪೂತ (ನಿವೃತ್ತ ಸೈನ್ಯಾಧಿಕಾರಿಗಳು ಭಾರತೀಯ ನೌಕಾ ಪಡೆ) ವೃತ್ತಿ ಶಿಕ್ಷಕಿ. ಲೇಖಕಿಯಾಗಿ ತೊಟ್ಟಿಲು ತೂಗುವ ಕೈ ಲೇಖನಿಯನ್ನು ಹಿಡಿಯಬಲ್ಲದು ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿ ನಿಂತಿದ್ದಾರೆ. ಪತಿ ಮರಾಠಿಗರಾಗಿದ್ದರೂ ಕೂಡ ಪತ್ನಿಯ ಅಭಿರುಚಿಗೆ ಯಾವತ್ತೂ ತೊಂದರೆ ಮಾಡಿದವರಲ್ಲ.ಜೊತೆಯಲ್ಲಿ ನಿಂತು ಇವರ ಸಾಧನೆಗೆ ಕಾರಣವಾಗಿದ್ದಾರೆ.ನೂರಾರು ಪದ್ಯ, ಗದ್ಯಗಳು ಇವರ ಲೇಖನಿಯಿಂದ...

ಡಾ. ಶಂಬಾ ಜೋಶಿ ಮೂಲ ಸಂಸ್ಕೃತಿಯ ಚಿಂತಕರು – ಪ್ರೊ. ಬಸವರಾಜ ಕಲ್ಗುಡಿ

ಬೆಳಗಾವಿ: "ಕನ್ನಡ ಸಂಸ್ಕೃತಿ, ಭಾರತೀಯ ಸಂಸ್ಕೃತಿ ಹಾಗೂ ಜಾಗತಿಕ ಸಂಸ್ಕೃತಿಗಳ ಹಲವು ಜ್ಞಾನಶಿಸ್ತುಗಳನ್ನು ಆಧರಿಸಿ ಸಂಶೋಧನೆಗಿಳಿದ ಶಂಬಾ ಅವರು ಕನ್ನಡ ಸಂಶೋಧನಾ ಲೋಕಕ್ಕೆ ಬಹುಶಿಸ್ತೀಯ ಅಧ್ಯಯನ ಮಾದರಿಯನ್ನು ನೀಡಿದವರು ಎಂದು  ಪ್ರೊ. ಬಸವರಾಜ ಕಲ್ಗುಡಿ ಅಭಿಪ್ರಾಯಪಟ್ಟರು. ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ ಹಾಗೂ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಡಾ....

ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ಯುವ ಸಂಸತ್ ಅಧಿವೇಶನ

ಸಂವಿಧಾನ ಜಾಗೃತಿ ಜಾಥ -2024ರ ಅಂಗವಾಗಿ ಗುರುವಾರ  ಡಾ ಬಿ ಆರ್ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ನೊಣವಿನಕೆರೆ (ಕೊನೆಹಳ್ಳಿ) ತಿಪಟೂರು ತಾಲ್ಲೂಕು ತುಮಕೂರು ಜಿಲ್ಲೆ ಇಲ್ಲಿ, ನಮ್ಮ ಸಂವಿಧಾನ ನಮ್ಮ ಹೆಮ್ಮೆಯ ಅಂಗವಾಗಿ ಯುವ ಸಂಸತ್ ಅಧಿವೇಶನ ಕಾರ್ಯಕ್ರಮ ನಡೆಯಿತು. ನಿಜಗುಣಯ್ಯ ಹೆಚ್ ಎಸ್ .ಸಮಾಜ ವಿಜ್ಞಾನ ಶಿಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳ  ಮಾರ್ಗದರ್ಶನದಲ್ಲಿ ...

ದೇವರನ್ನು ಅಂತರಂಗದಲ್ಲಿ ಧ್ಯಾನಿಸಬೇಕು – ಸಾವಳಗಿ ಶ್ರೀಗಳು

ಮೂಡಲಗಿ: 'ನಿರ್ಮಲವಾದ ಮತ್ತು ತ್ಯಾಗಮಯವಾದ ಭಕ್ತಿಯ ಇದ್ದರೆ ದೇವರ ಅನುಗ್ರಹವಾಗುವುದು. ದೇವರನ್ನು ಅಂತರಂಗದಲ್ಲಿ ಧ್ಯಾನಿಸುವಂತಾಗಬೇಕು ಎಂದು ಸಾವಳಗಿ ಸಿದ್ಧ ಸಂಸ್ಥಾನ ಪೀಠದ ಜಗದ್ಗರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಹೇಳಿದರು. ತಾಲ್ಲೂಕಿನ ಖಾನಟ್ಟಿ ಗ್ರಾಮದ ಶಿವಲಿಂಗೇಶ್ವರ ದೇವಸ್ಥಾನದ ಮಹಾದ್ವಾರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ಮನುಷ್ಯನಿಗೆ ಅಂತರಂಗ ಮತ್ತು ಬಹಿರಂಗ ಎರಡರಲ್ಲೂ ಶುದ್ಧಿಯಾಗಿಸಿಕೊಂಡು ಬದುಕನ್ನು ಸಾರ್ಥಕ...
- Advertisement -spot_img

Latest News

10 ನೆಯ ತರಗತಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಧೈರ್ಯ ನೀಡಿದ ತಾಲೂಕಾಧಿಕಾರಿಗಳು

ಮೂಡಲಗಿ:- ಮಾರ್ಚ್ ನಲ್ಲಿ ನಡೆಯುವ 10 ನೆಯ ತರಗತಿ ವಿದ್ಯಾರ್ಥಿಗಳ ಪರೀಕ್ಷೆ, ಅದರ ಪೂರ್ವ ತಯಾರಿ ನಡೆಸುತ್ತಿರುವ ತಾಲೂಕಾ ಅಧಿಕಾರಿಗಳು ಪೂರ್ವಭಾವಿಯಾಗಿ ವಿದ್ಯಾರ್ಥಿಗಳ ಮನೆಗೆ ಭೇಟಿ...
- Advertisement -spot_img
close
error: Content is protected !!
Join WhatsApp Group