Monthly Archives: August, 2024
ಸುದ್ದಿಗಳು
ಬಾಗಲಕೋಟೆಯಲ್ಲಿ ಸೆ.೨೨ಕ್ಕೆ ರಾಜೇಂದ್ರ ಪರ್ವತೀಕರ ‘ಬದರಿಧಾಮದ ತಪೋನಿಧಿ’ ಕೃತಿ ಬಿಡುಗಡೆ
ಬಾಗಲಕೋಟೆ: ನಾದಯೋಗಿ ದಿ.ದತ್ತಾತ್ರೇಯ ಪರ್ವತೀಕರ ಅವರು ಕುರಿತು ಸಂಶೋಧನಾತ್ಮಕ ಅಧ್ಯಯನ ನಡೆಸಿ ‘ಬದರಿಧಾಮದ ತಪೋನಿಧಿ’ ಎಂಬ ಕೃತಿ ರಚಿಸಲಾಗಿದ್ದು, ಬಾಗಲಕೋಟೆ ನಗರದಲ್ಲೇ ಈ ಕೃತಿಯ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಲೇಖಕ ರಾಜೇಂದ್ರ ಪರ್ವತೀಕರ ಹೇಳಿದರು.ನಗರದ ವಿದ್ಯಾಗಿರಿ ವಿಪ್ರ ಅಭಿವೃದ್ಧಿ ಸಂಘದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ‘ಬದರಿಧಾಮದ...
ಸುದ್ದಿಗಳು
ಮೂಡಲಗಿ ಪುರಸಭೆಗೆ ಖುರಷಾದ ನದಾಫ ಅಧ್ಯಕ್ಷೆ, ಭೀಮವ್ವ ಪೂಜೇರಿ ಉಪಾಧ್ಯಕ್ಷೆ
ಮೂಡಲಗಿ: ಆ,28 ರಂದು ಪಟ್ಟಣದ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಆಯ್ಕೆ ನಡೆದಿದ್ದು "ಸಾಮಾನ್ಯ ವರ್ಗದ" ಮಹಿಳಾ ಅಧ್ಯಕ್ಷರಾಗಿ ಶ್ರೀಮತಿ ಖುರಶಾದ ಬೇಗಂ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಭೀಮವ್ವ ದುರ್ಗಪ್ಪ ಪೂಜೇರಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರ ಸಲ್ಲಿಕೆ ಆಗಿದ್ದವು. ಇಬ್ಬರಲ್ಲಿ ಶ್ರೀಮತಿ ಖುರಶಾದಬೇಗಂ ಅನ್ವರ...
ಸುದ್ದಿಗಳು
ಶರಣೆ ಸತ್ಯಕ್ಕ ಮತ್ತು ಮೋಳಿಗೆ ಮಹಾದೇವಿ
ಶರಣೆ ಸತ್ಯಕ್ಕ ಅವರು ಶಿರಾಳಕೊಪ್ಪದವರು, ಅಲ್ಲಿ ಶಂಭು ಜಕ್ಕೇಶ್ವರನ ದೇವಸ್ಥಾನವಿದೆ. ಅದು ಶಿವಭಕ್ತಿಗೆ ಹೆಸರುವಾಸಿಯಾದದ್ದು. ಶಿವಶರಣರ ಅಂಗಳ ಕಸಗುಡಿಸುವ ಕಾಯಕದ ಶರಣೆ ಸತ್ಯಕ್ಕ, ಜೊತೆ ಜೊತೆಗೆ ಶಿವಶರಣರ
ಮನದ ಆಮಿಷ, ಕಲ್ಮಶಗಳನ್ನೂ ಕಳೆಯುವ ನೇಮವನ್ನು ಮಾಡಿಕೊಂಡಿದ್ದರು ಎಂದು ಶರಣೆ ರತ್ಬಕ್ಕ ಕಾದ್ರೊಳ್ಳಿಯವರು ತಮ್ಮ ಉಪನ್ಯಾಸ ಆರಂಭಿಸಿದರುವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ...
ಸಂಪಾದಕೀಯ
ಮೂಡಲಗಿ : ಮೀಸಲಿದ್ದರೂ ಸಾಮಾನ್ಯ ವರ್ಗಕ್ಕೆ ಸಿಗದ ಪುರಸಭೆ ಅಧ್ಯಕ್ಷ ಸ್ಥಾನ !
ಮೂಡಲಗಿ-ಗುರ್ಲಾಪೂರ ಜನರಲ್ ಕೆಟಗರಿಯಲ್ಲಿ ನೀರವ ಮೌನಮೂಡಲಗಿ - ಸ್ಥಳೀಯ ಪುರಸಭೆಯ ಅಧ್ಯಕ್ಷ ಸ್ಥಾನವು ಸಾಮಾನ್ಯ (ಜನರಲ್) ಕೆಟಗರಿಯ ಅಭ್ಯರ್ಥಿಗೇ ಮೀಸಲು ಎಂದು ಸರ್ಕಾರದ ಆದೇಶವಿದ್ದರೂ ಮೂಡಲಗಿ ಪುರಸಭಾ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯೇತರ ಕೆಟಗರಿಯ ಅಭ್ಯರ್ಥಿಗೆ ಹೋಗಿದ್ದರಿಂದ ಮೂಡಲಗಿ, ಗುರ್ಲಾಪೂರದ ಜನತೆ ಹುಬ್ಬೇರಿಸುವಂತಾಗಿದೆ.ಅಧ್ಯಕ್ಷರಾಗಿ ಶ್ರೀಮತಿ ಖುರಶಾದ ಬೇಗಂ ನದಾಫ, ಉಪಾಧ್ಯಕ್ಷರಾಗಿ ಶ್ರೀಮತಿ ಭೀಮವ್ವ ದುರಗಪ್ಪ ಪೂಜೇರಿ...
ಸುದ್ದಿಗಳು
ಸಂಭ್ರಮದಿಂದ ಜರುಗಿದ ಪತ್ರಿ ಗಿಡದ ಬಸವೇಶ್ವರ ಜಾತ್ರೆ
ತಿಮ್ಮಾಪುರ (ಹುನಗುಂದ) : ಗ್ರಾಮದ ಆರಾದ್ಯ ದೇವ ಪತ್ರಿಗಿಡದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವವು ಇತ್ತೀಚೆಗೆ ಸಡಗರ ಸಂಭ್ರಮದೊ೦ದಿಗೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ನೆರವೇರಿತು.ಈ ಜಾತ್ರಾ ಮಹೋತ್ಸವದಲ್ಲಿ ಮತ-ಭೇದವಿಲ್ಲದೆ ಎಲ್ಲ ಸಮುದಾಯದವರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವರ ದರುಶನ ಪಡೆದು ಪುನೀತರಾದರು. ಕಳೆದ ರವಿವಾರ ರಾತ್ರಿ ಗ್ರಾಮದ ಬಸಯ್ಯ ಹೊರಗಿನಮಠರವರ...
ಸುದ್ದಿಗಳು
ಕಣಚೂರು ಆಯುರ್ವೇದ ಆಸ್ಪತ್ರೆ ಉಚಿತ ಚಿಕಿತ್ಸಾ ಶಿಬಿರ
ಮಂಗಳೂರು - ನಾಟೆಕಲ್ ನಲ್ಲಿರುವ ಕಣಚೂರು ಆಯುರ್ವೇದ ಆಸ್ಪತ್ರೆ ವತಿಯಂದ ಕನ್ಯಾನದ ಭಾರತ ಸೇವಾಶ್ರಮ ಆವರಣದಲ್ಲಿ ಉಚಿತ ಚಿಕಿತ್ಸಾ ಶಿಬಿರವನ್ನು ದಿನಾಂಕ 28 ರಂದು ಯಶಸ್ವಿಯಾಗಿ ನಡೆಸಲಾಯಿತು.ಸೇವಾಶ್ರಮದ ಮುನ್ನೂರೈವತ್ತು ಆಶ್ರಮವಾಸಿಗಳ ರಕ್ತ, ಬಿ.ಪಿ ತಪಾಸಣೆ ಹಾಗೂ ಇತರ ತಪಾಸಣೆ ನಡೆಸಿ ಸೂಕ್ತ ಔಷಧಿಗಳನ್ನು ನೀಡಲಾಯಿತು.ಆಸ್ಪತ್ರೆಯ ಪಂಚಕರ್ಮ ವಿಭಾಗದ ಮುಖ್ಯಸ್ಥ ಡಾ.ಜೈನುದ್ದೀನ್ ಹಾಗೂ ಇತರ ನಾಲ್ಕು...
ಸುದ್ದಿಗಳು
ವಿದ್ಯಾರ್ಥಿಗಳ ವ್ಯಕ್ತಿತ್ವದ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ ಸಹಾಯವಾಗುತ್ತದೆ – ಮನೋಹರ ಚೀಲದ
ಯರಗಟ್ಟಿ: "ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನ ಹೊರತರುವಲ್ಲಿ ಪ್ರತಿಭಾ ಕಾರಂಜಿ ಸಹಾಯಕವಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ಹಾಗೂ ಹೊಸದಾದ ಜೀವನ ಕೌಶಲ್ಯವನ್ನು ಹೊಂದಲು ಇದು ವೇದಿಕೆಯಾಗಿದೆ. ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸಿ ಹೊರತರಲು ಶಿಕ್ಷಕರಿಗೆ ಅವಕಾಶವನ್ನು ನೀಡುತ್ತದೆ." ಎಂದು ಪರಸಗಡ ಪ್ರಾಥಮಿಕ ಶಾಲಾ ಶಿಕ್ಷಕ/ಶಿಕ್ಷಕಿಯರ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷರಾದ ಮನೋಹರ ಚೀಲದ ಅಭಿಪ್ರಾಯ ಪಟ್ಟರು.ಅವರು ಯರಗಟ್ಟಿ ಪಟ್ಟಣದ...
ಲೇಖನ
ದಿನಕ್ಕೊಬ್ಬ ಶರಣ ಮಾಲಿಕೆ
ಕಾಲಕರ್ಮವಿರಹಿತ ಕೀಲಾರದ ಭೀಮಣ್ಣಜನಸಾಮಾನ್ಯರ ಸಾಹಿತ್ಯ, ಸರಳವಾಗಿ ತಿಳಿಯುವ ಬರಹ ಓದಿದರೆ ಹಾಡಾಗುವ, ಹಾಡಿದರೆ ಅನುಭಾವವಾಗುವ, ಅನುಭಾವದಿ ಭಕ್ತನಾಗುವ ಪರಿಯ ಸಾಹಿತ್ಯವಿದು. ಭವ ಜೀವನ ಕಳೆದು, ಲಿಂಗಾಂಗ ಸಾಮರಸ್ಯದಿಂದ ಬಯಲಾಗಿ, ಬಯಲಲಿ ಬಯಲನಪ್ಪಿ ಶೂನ್ಯತ್ವಕ್ಕೇರುವ ಆತ್ಮಜ್ಞಾನದ, ಮಾನವನ ಅರಿವಿನ, ಮನೋವಿಕಾಸದ ಸಾಹಿತ್ಯ ಇದಾಗಿದೆ.ಇಡಿಯಾಗಿರದೆ, ಹಿಡಿ-ಹಿಡಿಯಾಗಿ ಚಿಕ್ಕವರು, ಮಧ್ಯವಯಸ್ಸಿನವರು, ದೊಡ್ಡವರು, ಮುಪ್ಪಿನವರು ಯಾವುದೇ ಕಾಲದವರು, ಎಲ್ಲಾ ಕಾಲ,...
Uncategorized
ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಬಿಸಿಲು ಬೇಗೆಯನುಂಡು ತಂಪು ಬೆಳದಿಂಗಳನು
ಚೆಲ್ಲುವನು ಚಂದಿರನು ಧರೆಯ ಮೇಲೆ
ದುಃಖದುಗುಡವ ನುಂಗಿ ಸುಖವ ಕೊಡುವರು ಜಗಕೆ
ಸಜ್ಜನರ ಪರಿಯಿಂತು - ಎಮ್ಮೆತಮ್ಮಶಬ್ಧಾರ್ಥ
ಬೇಗೆ - ಬೆಂಕಿ, ಉರಿ, ತಾಪ, ಸಂಕಟ . ಧರೆ - ಭೂಮಿ
ದುಗುಡ - ಚಿಂತೆ, ಆತಂಕ,ತಾತ್ಪರ್ಯ
ಚಂದ್ರ ಸೂರ್ಯನ ಪ್ರಖರವಾದ ಬಿಸಿಲು ತನ್ನ ಮೈಮೇಲೆ
ಬಿದ್ದರು ಅದನ್ನು ಸಹಿಸಿಕೊಂಡು ಕನ್ನಡಿಯಂಥ ತನ್ನ ಮೈಯಲ್ಲಿ ಪ್ರತಿಬಿಂಬಿಸಿ ತಂಪಾದ ಹಿತವಾದ...
ಸುದ್ದಿಗಳು
ಅಮುಗೆ ರಾಯಮ್ಮ ಮತ್ತು ಗಂಗಾoಬಿಕೆ
ರಾಯಮ್ಮ ಎನ್ನುವ ಇಬ್ಬರು ಶರಣೆಯರಿದ್ದಾರೆ. ರಾಯಸದ ಮಂಚಣ್ಣನವರ ಪತ್ನಿಯಾಗಿದ್ದ ರಾಯಮ್ಮ ಒಂದು ವಚನ ರಚಿಸಿದರೆ, ಅಮುಗೆ ದೇವಯ್ಯನವರ ಪತ್ನಿ ರಾಯಮ್ಮನವರು 116 ವಚನಗಳನ್ನು ರಚಿಸಿದ್ದಾರೆ ಎಂದು ಶರಣೆ ಸರಸ್ವತಿ ಬಿರಾದಾರ ಹೇಳಿದರು.ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಸುಧಾ ಪಾಟೀಲ ಅವರ ತಂದೆಯವರಾದ ಲಿಂ. ಶರಣ...
Latest News
ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ
ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...



