Monthly Archives: October, 2024
ಸುದ್ದಿಗಳು
ಬೈಲಹೊಂಗಲದಲ್ಲಿ ಅಕ್ಟೋಬರ್ 6ರಂದು ರಾಜ್ಯಮಟ್ಟದ ಕವಿಗೋಷ್ಠಿ
ಕಿತ್ತೂರು ಚೆನ್ನಮ್ಮಾಜಿಯ 200 ನೆಯ ವಿಜಯೋತ್ಸವಬೈಲಹೊಂಗಲ: ಗ್ಲೋಬಲ್ ವುಮನ್ರೈಸ್ ಫೌಂಡೇಶನ್, ಬೆಂಗಳೂರು ವತಿಯಿದ ರವಿವಾರ ಅಕ್ಟೋಬರ್ 6 ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಚೆನ್ನಮ್ಮ ಸಮಾಧಿ ರಸ್ತೆಯಲ್ಲಿರುವ ಗಣಾಚಾರಿ ಮಹಾವಿದ್ಯಾಲಯದಲ್ಲಿ ಕಿತ್ತೂರು ಚೆನ್ನಮ್ಮಾಜಿಯವರ 200ನೆಯ ವಿಜಯೋತ್ಸವದ ನಿಮಿತ್ತವಾಗಿ ರಾಜ್ಯಮಟ್ಟದ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರಿನ ಗ್ಲೋಬಲ್ ವುಮೇನ್ರೈಸ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಮನ್ಮಥಯ್ಯ...
ಲೇಖನ
ಹುಯಿಲಗೋಳ ನಾರಾಯಣರಾಯರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ
ಹುಯಿಲಗೋಳ ನಾರಾಯಣರಾಯರು ( 1884 - 1971 ) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಕರ್ನಾಟಕ ನಾಡಗೀತೆಯೆನಿಸಿದ್ದ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಗೀತೆಯನ್ನು ರಚಿಸಿದವರು.1884 ಅಕ್ಟೋಬರ್ 4 ರಂದು ಜನಿಸಿದರು. ಇವರ ತಂದೆ ಕೃಷ್ಣರಾವ್, ತಾಯಿ ಬಹಿಣಕ್ಕ. ಬಾಲ್ಯದ ಶಿಕ್ಷಣವನ್ನು ಗದಗ, ಗೋಕಾಕ ಹಾಗು ಧಾರವಾಡಗಳಲ್ಲಿ ಪೂರೈಸಿದರು. 1902 ರಲ್ಲಿ ಧಾರವಾಡದಲ್ಲಿ ಮೆಟ್ರಿಕ್...
ಸುದ್ದಿಗಳು
ಡಾ.ಗಿರಿಧರ್ ಅವರಿಗೆ ಅಭಿನಂದನಾ ಸನ್ಮಾನ
ಚಂದನ ವಾಹಿನಿಯ ವಾರ್ತಾ ವಾಚಕರು,ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿ ಇದೀಗ ಲಂಡನ್ನಿನಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಗಿರಿಧರ್ ಅವರಿಗೆ ಅರವತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.ಈ ಸಂದರ್ಭದಲ್ಲಿ ಡಾ.ಗಿರೀಶ್ ದಂಪತಿಗಳು, ಅಖಿಲ ಭಾರತೀಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ಭೇರ್ಯ ರಾಮ...
ಕವನ
ಕವನ : ಬಸವಣ್ಣ ಬಿಟ್ಟು ಹೋಗಲಿಲ್ಲ
ಬಸವಣ್ಣ ಬಿಟ್ಟು ಹೋಗಲಿಲ್ಲಅಗಲಲಿಲ್ಲ ಬಯಲಾಗಲಿಲ್ಲ
ಲೀನವಾಗಲಿಲ್ಲ ಬಸವಣ್ಣ ,
ನಮ್ಮನು ಬಿಟ್ಟು ಹೋಗಲಿಲ್ಲ.
ಇದ್ದಾನೆ ಬಸವಣ್ಣ ನನ್ನೊಳಗೆ
ನಿಮ್ಮೊಳಗೆ ನಮ್ಮೊಳಗೆ .
ಶತಮಾನದಿಂದ ಮೌನ ಹೊತ್ತು
ಉಸಿರುತ್ತಿದ್ದಾನೆ ವಚನವ ಜಪಿಸುತ್ತ
ಗುರು ವಿರಕ್ತರ ಗುದ್ದಾಟ
ಕಾವಿಗಳ ಕಾದಾಟ
ಭಕ್ತರ ಹುಚ್ಚಾಟಕ್ಕೆ ಮರುಗಿದ್ದಾನೆ
ಜಗದ್ಗುರುಗಳ ಅಡ್ಡ ಪಲ್ಲಕ್ಕಿಗೆ
ಹೆಗಲು ಕೊಟ್ಟಿದ್ದಾನೆ.
ಯಜ್ಞ ಹವನ ಹೋಮಕ್ಕೆ
ಎಣ್ಣೆ ತುಪ್ಪ ಹಾಕುತ್ತಿದ್ದಾನೆ .
ಮುಗಿಲೆತ್ತರದ ಬಸವ ಮೂರ್ತಿಗೆ
ಕಲ್ಲು ಮರಳು ಹೊರುತ್ತಿದ್ದಾನೆ.
ಜಂಗಮರ ಪಾದಪೂಜೆಗೆ ಸಿದ್ಧ
ಪುರಾಣ ಪ್ರವಚನದ ಶಬ್ದ ಮಾಲಿನ್ಯ
ತುಲಾಭಾರ ವರ್ಧಂತಿ...
Uncategorized
ಎಮ್ಮೆ ತಮ್ಮನ ಕಗ್ಗದ ತಾತ್ಪರ್ಯ
ಉಪ್ಪಿಷ್ಟು ಹುಳಿಯಿಷ್ಟು ಸಿಹಿಯಿಷ್ಟು ಖಾರಿಷ್ಟು
ಸೇರಿದರೆ ಬಹಳರುಚಿ ಮಾಡಿದಡಿಗೆ
ಅಳುನಗುವು ಸುಖದುಃಖ ನೋವ್ನಲಿವು ಸೇರಿದರೆ
ಅನುಭಾವದಡಿಗೆ ರುಚಿ - ಎಮ್ಮೆತಮ್ಮಶಬ್ಧಾರ್ಥ
ಅನುಭಾವ = ಅತೀಂದ್ರಿಯವಾದ ಅನುಭವತಾತ್ಪರ್ಯ
ನಾವು ಮಾಡುವ ಅಡಿಗೆಯಲ್ಲಿ ಷಡ್ರಸಗಳಾದ ಉಪ್ಪು ,ಹುಳಿ,
ಸಿಹಿ, ಕಹಿ, ಖಾರ, ಒಗರು ಇದ್ದರೆ ಊಟ ಬಹಳ ರುಚಿಯಾಗಿ
ಇರುತ್ತದೆ. ಜೊತೆಗೆ ಹಾಲು, ಮೊಸರು, ತುಪ್ಪ ಇದ್ದರೆ ಇನ್ನೂ
ರುಚಿಯಾಗಿರುತ್ತದೆ.ನೈವೇದ್ಯಂ ಷಡ್ರಸೋಪೇತೇ| ನಾನಾಭಕ್ಷಂ
ಸಮನ್ವಿತಂ|| ದಧೀಕ್ಷೀರಘೃತೋಪೇತಂ| ನೈವೇದ್ಯಂ ಪ್ರತಿಗೃಹ್ಯತಾಂ|| ಎಂಬ...
ಕವನ
ಕವನ : ನಾಜೂಕು ನಜರು
ನಾಜೂಕು ನಜರುನಿನ್ನ ಆ ಸೌಂದರ್ಯವ
ಕಂಡ ಈ ನನ್ನ
ನಾಜೂಕು ನಜರಿಗೂ
ಜೀಕುವ ಭಾವಲಹರಿಗೂ
ಸಲ್ಲದ ಪೈಪೋಟಿಯೊಂದು
ಸದ್ದಿಲ್ಲದೆ ಅಲೆಯ
ಎಬ್ಬಿಸಿರಲು, ಆ ಸಲ್ಲಾಪವ
ಲೇಖನಿಗೆ ವರ್ಗಾಯಿಸುವುದೋ
ಬೇಡವೋ ಎಂಬ
ಹೊಸಗೊಂದಲದ
ಗೂಡೊಂದು ಸದ್ದಮಾಡುತ್ತಲೇ
ತನ್ನೆಡೆಗೆ ನನ್ನನ್ನು ಸೆಳೆಯುತಿದೆ...ಸೆಳೆವ ಗೊಂದಲದ
ಗೂಡೆಡೆಗೆ ಹೋಗಲೋ
ಅದಾಗಲೇ ಸೆಳೆದ
ಕಾವ್ಯದ ಅಮಲಿನಲ್ಲಿ
ಮುಳುಗಲೋ,
ಮತ್ತೊಂದು ಗೊಂದಲ
ಮರಿ ಹಾಕಿ ನನ್ನೆಡೆ ನೋಡಿ
ಮುಸಿನಗಲು, ಆ ನಿನ್ನ ಸೆಳೆದ
ಸೌಂದರ್ಯ ನನ್ನಿಂದ
ದೂರ ಸಾಗಿಯಾಗಿತ್ತು...ನನ್ನೆಡೆ ಕಿರುನಗೆಯ ಬೀರಿ
ತುಸುದೂರ ನಿಂತಿದ್ದ
ಕವಿತೆಗೆ ನಾನು ಸೋತಾಗಿತ್ತು...ಈ ಕಾವ್ಯಾಗ್ನಿಯ ಬೆರಳುಗಳು
ಕವಿತೆಯ ತಕಧಿಮಿತಕ್ಕೆ
ಸಿದ್ಧವಾಗಿ ಕಾವ್ಯಕ್ಕೆ
ಮುನ್ನುಡಿಯ...
ಸುದ್ದಿಗಳು
ಎಸ್.ಸುಜ್ಞಾನಶ್ರೀಗೆ ಬಿ.ಎಸ್ಸಿಯಲ್ಲಿ ಪ್ರಥಮ ರ್ಯಾಂಕ್
ಮೈಸೂರು - ನಗರದ ಅಶೋಕಪುರಂನ ೩ನೇ ಕ್ರಾಸ್ನ ನಿವಾಸಿ ಎಸ್.ಸುಜ್ಞಾನಶ್ರೀಯವರು ಎಸ್ಬಿಆರ್ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎಸ್ಸಿ.ಬಿಟಿಬಿಎಂನಲ್ಲಿ ಪ್ರಥಮ ರ್ಯಾಂಕ್ನೊಂದಿಗೆ ಚಿನ್ನದ ಪದಕವನ್ನು ಗಳಿಸಿರುತ್ತಾರೆ.ಇವರು ಡಾ.ಬಿ.ಆರ್.ಅಂಬೇಡ್ಕರ್, ಎಸ್ಸಿ, ಎಸ್ಟಿ ಅಭಿವೃದ್ಧಿ ಸಂಘದ ಅಧ್ಯಕ್ಷ ಸುರೇಶ್ ಸಿ. ಹಾಗೂ ಯಶೋದಮ್ಮ ಅವರ ಪುತ್ರಿ. ಮುಂದೆ ಎಂಎಸ್ಸಿ ಬಯೋಟೆಕ್ನಲ್ಲಿ ಪಿಹೆಚ್ಡಿ ಮಾಡಿ ಕ್ಯಾನ್ಸರ್ ಬಯೋಲಜಿಯಲ್ಲಿ ಸಾಧನೆ...
ಸುದ್ದಿಗಳು
ಯುವ ಸಾಹಿತಿ ಡಾ. ಬದರೀನಾಥ ಜಹಗೀರದಾರಗೆ “ಅಭಿನವಶ್ರೀ ” ಪ್ರಶಸ್ತಿ
ಬೀದರ : ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠ, ಅಭಿನವಶ್ರೀ ಪ್ರಕಾಶನ, ಅಭಿನವಶ್ರೀಗಳ 38ನೇ ಜನ್ಮದಿನೋತ್ಸವ, 19ನೇ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ಹಾಗೂ ಗ್ರಂಥಗಳ ಲೋಕಾರ್ಪಣೆ ಸಮಾರಂಭ ಇತ್ತೀಚೆಗೆ ಬೀದರ್ ಜಿಲ್ಲೆಯ ಬಸವಕಲ್ಯಾಣದ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠದಲ್ಲಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಶ್ರೀಮಠದ ವತಿಯಿಂದ...
ಸುದ್ದಿಗಳು
ಅ.೫ರಂದು ವಿಶೇಷ ‘ಸ್ವಾತಿ’ ಪೂಜೆ
ಮೈಸೂರು - ನಗರದ ಕಾಳಿದಾಸ ರಸ್ತೆಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಯದುಗಿರಿ ಯತಿರಾಜ ಮಠ, ಮೈಸೂರು ಶಾಖೆಯ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಅ.೫ರಂದು ಶನಿವಾರ ‘ಸ್ವಾತಿ’ ನಕ್ಷತ್ರದ ಪ್ರಯುಕ್ತ ವಿಶೇಷ ಪೂಜೆ ಆಯೋಜಿಸಲಾಗಿದೆ.ಅಂದು ಬೆಳಿಗ್ಗೆ ೮ಕ್ಕೆ ಸಂಕಲ್ಪ, ೯ಕ್ಕೆ ಅಭಿಷೇಕ, ೧೦.೩೦ಕ್ಕೆ ಅಲಂಕಾರ, ೧೧.೩೦ಕ್ಕೆ ಮಹಾಮಂಗಳಾರತಿ, ಮಧ್ಯಾಹ್ನ ೧೨.೩೦ಕ್ಕೆ ಶಾತ್ತುಮೊರೈ, ೧ ಗಂಟೆಗೆ...
ಸುದ್ದಿಗಳು
ಮುಖ್ಯಮಂತ್ರಿಗೆ ಗೌರವ ಸಮರ್ಪಣೆ
ಬೆಂಗಳೂರು - ನಗರದ ಅಶೋಕಪುರಂನಲ್ಲಿರುವ ಆದಿ ಕರ್ನಾಟಕ ಮಹಾ ಸಂಸ್ಥೆಯ ವತಿಯಿಂದ ನಡೆದ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರಿಗೆ ಸನ್ಮಾನಿಸಿ, ಗೌರವಿಸಲಾಯಿತು.ಈ ಸಂದರ್ಭದಲ್ಲಿ ಆದಿ ಕರ್ನಾಟಕ ಮಹಾ ಸಂಸ್ಥೆಯ ಅಧ್ಯಕ್ಷ ಪಿ.ಸಿದ್ದರಾಜು (ಸುನಿಲ್), ಉಪಾಧ್ಯಕ್ಷ ಶಿವಸ್ವಾಮಿ, ಕಾಂಗ್ರೆಸ್ ಮುಖಂಡ ಮಹೇಶ್, ವಿಧಾನಪರಿಷತ್...
Latest News
ಕವನ : ಅನುಬಂಧ
ಅನುಬಂಧಕಾಣದ ದಾರಿಯಲ್ಲಿ
ಬೆಸೆದ ನಂಟು,
ಹೆಸರಿಲ್ಲದಿದ್ದರೂ ಹೃದಯಕ್ಕೆ
ಪರಿಚಿತವಾದ ಬಂಧ…
ಕಾಲದ ಹೊಳೆ ಹರಿದರೂ
ಕಳೆಯದ ಗುರುತು, ಗಂಟು
ಅದು ಅನುಬಂಧ.
ಮೌನದಲ್ಲೂ ಮಾತಾಡುವ
ಸಂಬಂಧ, ಬಂಧ..
ಕಣ್ಣಂಚಿನ ನೀರನ್ನೂ
ಓದುತ್ತದೆ ಒರೆಸುತ್ತದೆ.
ಹೃದಯ ಮುರಿದು
ನೊಂದ ಕ್ಷಣದಲ್ಲಿ
ಅದೃಶ್ಯವಾಗಿ ಕೈ
ಹಿಡಿದುಕೊಳ್ಳುತ್ತದೆ.
ಮಣ್ಣಿನ ವಾಸನೆಯಂತೆ
ಸಹಜ,
ಬೆಳಗಿನ ಬೆಳಕಿನಂತೆ
ಮೃದುವು.
ನಗುವಿನಲ್ಲೂ,...



