Monthly Archives: April, 2025
ಕವನ
ಕವನ : ಪಹಲ್ಗಾಮ್ ಪ್ರವಾಸ
ಪಹಲ್ಗಾಮ್ ಪ್ರವಾಸ
ಪಹಲ್ಗಾಮ್
ಹಸಿರು ಕಾನನದೊಳಗೆ
ನುಸುಳಿದ ಸಿಪಾಯಿ
ಬಂದೂಕುದಾರಿಗಳು
ಸಿಡಿಸಿದ ಗುಂಡಿಗೆ
ಎದೆ ಕೊಟ್ಟು ನಿಂತ ಪ್ರವಾಸಿಗರು
ಹಸಿರು ಹುಲ್ಲಿನ ಮೇಲೆ
ಬರೆದ ರಕ್ತದ ಕಲೆ
ಆರಿ ಹೋದವು ಹಗಲು ದೀಪ
ಹೆಗಲಿಗೆ ಹೆಗಲು ಆಗಲಿಲ್ಲ ಮಗ
ಹಸೆ ಮನೆಯ ಹುಡುಗಿಗೆ
ಹೆಸರಾಗಲಿಲ್ಲ ಗಂಡ
ಕಳೆದುಕೊಂಡ ತಾಳಿ
ಕಸಿದುಕೊಂಡ ಕುಂಕುಮ
ಮುಕ್ಕಿ ನಿಂತವು ಸುತ್ತುವರೆದು
ಹೌಹಾರಿದ ಕುದುರೆ ಸವಾರ
ಕಿತ್ತು ಕೊಂಡನು ಕೋವಿ
ಚೆಲ್ಲಿತು ರಕ್ತ
ಕೆಂಪಾದವು ಹಸುರೆಲೆ
ಕೂಗಿದರೂ ಧ್ವನಿ ಕೇಳದ ಜನ
ಮೂಕ ವಿಸ್ಮಿತ ಆಕ್ರೋಶ
ನಲುಗಿದ ಎದೆಗೆ
ಗುಡುಗಿದ ಸಿಡಿ ಮದ್ದು
ಹಿಂದೂ...
ಸುದ್ದಿಗಳು
ಗುರ್ಲಾಪೂರದಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಮೂಡಲಗಿ:-ತಾಲೂಕಿನ ಗುರ್ಲಾಪೂರ ಗ್ರಾಮದ ಕಂಬಳಿ
ಪ್ಲಾಟದಲ್ಲಿ ಪ್ರತಿವರ್ಷದಂತೆ ಶ್ರೀ ವೀರಭದ್ರೇಶ್ವರ ಜಾತ್ರೆ ನಡೆಯುತ್ತದೆ.ಪ್ರತಿ ವರ್ಷದಂತೆ ಈ ವರ್ಷವು ಮಂಗಳವಾರ ದಿ.
೨೯ ಹಾಗೂ ಬುದವಾರ ದಿ, ೩೦ರಂದು ಎರಡು ದಿನಗಳು ಶ್ರೀ
ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಜರಗುವದು.
ಮಂಗಳವಾರ ದಿ, ೨೯ ರಂದು ಬೆಳಗ್ಗೆ
ವೀರಭದ್ರೇಶ್ವರನಿಗೆ "ವಿಶೇಷ ಪೂಜೆ", ಸಂಜೆ
ಗ್ರಾಮದ ಆದಿ ಶಕ್ತಿ ದೇವತೆಯಾದ ಶ್ರೀ ಲಕ್ಷ್ಮೀದೇವಿಯ
"ಪಲ್ಲಕ್ಕಿ ಉತ್ಸವ" ಮಹಿಳೆಯರು ಆರತಿ,...
ಸುದ್ದಿಗಳು
ವಿವಿಧ ಬೇಡಿಕೆಗಾಗಿ ಪೌರ ಕಾರ್ಮಿಕರ ಹೋರಾಟ
ಮೂಡಲಗಿ:-ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘ, ಮೂಡಲಗಿ ತಾಲೂಕಾ ಘಟಕದಿಂದ ಕಪ್ಪು ಬಟ್ಟೆ ಧರಿಸಿ ಎಪ್ರಿಲ್, ೧೧ ರಿಂದಲೇ ಪ್ರತಿಭಟನೆ ಪ್ರಾರಂಭವಾಗಿದೆ. ಪೌರಕಾರ್ಮಿಕರು ಈಗಾಗಲೇ ಕಾಯಂ ಆದವರು ಸೇರಿ ಯಶಸ್ವಿನಿ ಆರೋಗ್ಯ ಕಾರ್ಡ ವಿತರಿಸಬೇಕು ಮತ್ತು ನಮ್ಮ ವಿವಿಧ ಬೇಡಿಕೆಗಳನ್ನು ಪೂರೈಸಬೇಕೆಂದು ಕರ್ನಾಟಕ ರಾಜ್ಯ ನೌಕರರ ಸಂಘದಿಂದ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ...
ಲೇಖನ
ಅಮೆರಿಕಾದ ಸ್ವತಂತ್ರ ದೇವತೆ “ದಿ ಸ್ಟ್ಯಾಚು ಆಫ್ ಲಿಬರ್ಟಿ” ನಮಗೆ ಗೊತ್ತಿಲ್ಲದ ಕಥೆ
ಅಮೆರಿಕಾದ ನ್ಯೂಯಾರ್ಕ್ ಬಂದರಿನಲ್ಲಿ ಕೈಯಲ್ಲಿ ಅತಿ ದೊಡ್ಡ ದೀಪವನ್ನು ಹಿಡಿದು ನಿಂತಿರುವ ಸ್ವತಂತ್ರ ದೇವತೆಯ ಬೃಹತ್ತಾದ ಮೂರ್ತಿ ಭರವಸೆ ಸ್ವಾತಂತ್ರ ಮತ್ತು ಅಮೆರಿಕದ ಕನಸುಗಳ ಪ್ರತೀಕವಾಗಿ ನಿಂತಿದ್ದಾಳೆ. ಈ ಸ್ವತಂತ್ರ ದೇವತೆಯ ಮುಖವು ಓರ್ವ ನಿಜವಾದ ಸ್ಫೂರ್ತಿ ದೇವತೆಯಿಂದ ಎರವಲು ಪಡೆದದ್ದು ಎಂದರೆ ನೀವು ನಂಬುವಿರಾ? 19ನೇ ಶತಮಾನದಲ್ಲಿ ಬಾಳಿ ಬದುಕಿದ ಓರ್ವ ಅತ್ಯಂತ...
ಸುದ್ದಿಗಳು
ಮೈಸೂರ ಕಲಾವಿದೆ ಶೋಭಾರಾಣಿ ಏಕ ವ್ಯಕ್ತಿ ಚಿತ್ರ ಕಲಾ ಪ್ರದರ್ಶನ
ಹಾಸನದ ಚಿತ್ಕಲಾ ಪೌ೦ಡೇಶನ್ವ ತಿಯಿಂದ ಏರ್ಪಡಿಸಿರುವ ಏಕ ವ್ಯಕ್ತಿಚಿತ್ರ ಕಲಾ ಪ್ರದರ್ಶನಕ್ಕೆ ಕದಂಬ ಸೈನ್ಯ ಕನ್ನಡ ಪರ ಸಂಘಟನೆಯ ರಾಜ್ಯಾಧ್ಯಕ್ಷರು ಬೇಕ್ರಿ ರಮೇಶ್ ಸಾಹಿತಿ ಗೊರೂರು ಅನಂತರಾಜು, ಚಿತ್ರ ಕಲಾವಿದ ಯಾಕೂಬ್, ಉಪನ್ಯಾಸಕರು ಎ.ರಾಮಮೂರ್ತಿ ಕದಂಬ ಸೈನ್ಯ ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್ ಭೇಟಿ ನೀಡಿ ವೀಕ್ಷಿಸಿದರು.ಕಾರ್ಯಕ್ರಮದಲ್ಲಿ ಬಿ ಎಸ್ ದೇಸಾಯಿಯವರು ಪ್ರಾಸ್ತಾವಿಕ...
ಸುದ್ದಿಗಳು
ಇಸ್ರೊ ಮಾಜಿ ಅಧ್ಯಕ್ಷ ಡಾ. ಕೆ. ಕಸ್ತೂರಿ ರಂಗನ್ ನಿಧನ
ಬೆಂಗಳೂರು - ಭಾರತೀಯ ಬಾಹ್ಯಾಕಾಶ ಸಂಸ್ಥೆ ( ಇಸ್ರೋ) ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ ಅವರು ನಿಧನರಾಗಿದ್ದಾರೆ. ಅವರಿಗೆ ೮೪ ವರ್ಷ ವಯಸ್ಸಾಗಿತ್ತು.ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಯ ಕರಡು ಸಮಿತಿಯ ಅಧ್ಯಕ್ಷರೂ ಆಗಿದ್ದ ಕಸ್ತೂರಿರಂಗನ್ ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿ ಮತ್ತು ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ೧೯೪೦...
ಸುದ್ದಿಗಳು
ಅವಿಶ್ವಾಸ ಗೊತ್ತುವಳಿ ಕಾನೂನು ಬಾಹಿರ – ಶಾಂತವೀರ ಬಿರಾದಾರ
ಸಿಂದಗಿ: ಪುರಸಭೆ ಯಾವುದೇ ಸದಸ್ಯರ ಗಮನಕ್ಕೆ ತರದೆ ಅಧ್ಯಕ್ಷರು ಏಕ ಮುಖ ಅಧಿಕಾರ ನಡೆಸುತ್ತಿದ್ದಾರೆ ಎಂದು 15 ಜನ ಸದಸ್ಯರು ಅವಿಶ್ವಾಸ ಗೊತ್ತುವಳಿ ಕಳೆದ 16 ರಂದು ಸಭೆ ನಡೆಸಿದ್ದು ಕಾನೂನು ಬಾಹಿರವಾಗಿದೆ ಅಲ್ಲದೆ ಅವರು ಮಾಡಿದ ಆರೋಪ ಹುರುಳ್ಳಿಲ್ಲದ್ದು ಎಂದು ಅಧ್ಯಕ್ಷ ಶಾಂತವೀರ ಬಿರಾದಾರ ಸ್ಪಷ್ಟ ಪಡಿಸಿದರು.ಪಟ್ಟಣದ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ಕರೆದ...
ಕವನ
ಕವನ : ನಮ್ಮ ದೇಶ ಕಟ್ಟುವಾ
ನಮ್ಮ ದೇಶವ ಕಟ್ಟುವಾಬೇಡ ನಮಗೆ
ಜಾತಿ ಧರ್ಮ
ಭವ್ಯ ಭಾರತ
ಕಟ್ಟುವ
ಸತ್ಯ ಸಮತೆ
ಶಾಂತಿ ಪ್ರೀತಿ
ಬುದ್ಧ ಬಸವರ
ನೆನೆಯುವಪಂಥ ಬೇಡ
ಪೂಜೆ ಬೇಡ
ಗಟ್ಟಿ ರಾಷ್ಟ್ರವ
ಕಟ್ಟುವಾ
ಅಚ್ಚ ಹಸುರಿನ
ವಿಂಧ್ಯ ಪರ್ವತ
ಹಿಮಾಲಯ
ಮೆರೆಯುವಕಾಡು ಕಣಿವೆ
ಹಳ್ಳ ಕೊಳ್ಳ
ನದಿಯ ನೀರು
ಮತ್ತೆ ಶುದ್ಧಗೊಳಿಸುವ
ಉಚ್ಚ ನೀಚ
ಭೇದ ಬೇಡ
ನಾವು ಭಾರತಿಯರು
ನಮ್ಮ ದೇಶವ ಕಟ್ಟುವಾ
________________________ಡಾ ಶಶಿಕಾಂತ ಪಟ್ಟಣ ಪುಣೆ
ಸುದ್ದಿಗಳು
ಪಹಲ್ಗಾಮ್ ದಾಳಿ ; ಬಿಜೆಪಿ ಸಿಂದಗಿ ಮಂಡಲ ವತಿಯಿಂದ ಪ್ರತಿಭಟನೆ
ಸಿಂದಗಿ; ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಅಮಾಯಕ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ನಡೆಸಿರುವ ದಾಳಿಯನ್ನು ಖಂಡಿಸಿ ಭಾರತೀಯ ಜನತಾ ಪಾರ್ಟೀ ಯುವ ಮೋರ್ಚಾ ಸಿಂದಗಿ ಮಂಡಲ ವತಿಯಿಂದ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಅಮಾಯಕ...
ಸುದ್ದಿಗಳು
ಪರಿಣಾಮಕಾರಿ ಯೋಜನಾ ತಯಾರಿಕೆ ಕಾರ್ಯಾಗಾರ
ಸಿಂದಗಿ; ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಸಿ.ಎಮ್.ಮನಗೂಳಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪರಿಣಾಮಕಾರಿ ಯೋಜನಾ ತಯಾರಿಕೆ ಕುರಿತು ಒಂದು ದಿನದ ಕಾರ್ಯಗಾರವನ್ನು ದಿನಾಂಕ ೨೧-೦೪-೨೦೨೫ರಂದು ಹಮ್ಮಿಕೊಳ್ಳಲಾಗಿತ್ತು.ಡಾ. ರೇಷ್ಮ ಗಜಾಕೋಶ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು, ಗೌರವ ಅತಿಥಿಗಳಾಗಿ ಪಟ್ಟಣದ ಜಿ.ಪಿ. ಪೋರವಾಲ್ ಕಾಲೇಜಿನ ಡಾ. ಪ್ರಕಾಶ ರಾಠೋಡ, ಅಧ್ಯಕ್ಷರಾಗಿ ಪ್ರಾಚಾರ್ಯ ಡಾ....
Latest News
ಕವನ : ಬೆಳಕಿನ ದೀಪಾವಳಿ
ಬೆಳಕಿನ ದೀಪಾವಳಿ
ಬೆಳಕು ಸರಿದು ನೇಸರನ
ಅಸ್ತದೊಡನೆ
ಜಗಕೆ ಜಗಮಗಿಸುವ
ದೀಪಗಳ ದರ್ಶನ
ಬಾನಂಚಿನಲಿ ಶಬ್ದಗಳ ನಡುವೆ
ಬೆಳಕಿನ ಚಿತ್ತಾರ
ಮೂಡಿಸುವ ಹಬ್ಬ
ಬೆಳಕಿನ ದೀಪಾವಳಿತಮವ ಕಳೆದು
ಜ್ಯೋತಿ ಬೆಳಗುವ
ನಾಡಿನಪವಿತ್ರ ಹಬ್ಬ
ತಳಿರು ತೋರಣ ಕಟ್ಟಿ
ಮನೆಯನು ಸಿಂಗರಿಸಿ
ಹಬ್ಬದಡುಗೆಯ ಸವಿಯುಣ್ಣುವ
ಮನದ ಖುಷಿಯ...