Monthly Archives: June, 2025
ಕವನ
ಕವನ :ಅಪ್ಪ ಬದಲಾಗಿದ್ದಾರೆ !
ಅಪ್ಪ ಬದಲಾಗಿದ್ದಾರೆ!ಮೊದಲೆಲ್ಲ ದಣಿವಿರದೆ
ತೋಟದಿ ದುಡಿಯುತ್ತಿದ್ದ ಅಪ್ಪ
ಈಗೀಗ ದಣಿವಾರಿಸಿಕೊಳ್ಳಲು
ತೆಂಗಿನ ಮರದ ಆಶ್ರಯ ಪಡೆಯುತ್ತಾರೆ
ಆದರೂ ದುಡಿಮೆ ಬಿಡದೇ ಸಾಗುತ್ತಿದ್ದಾರೆ
ಇಂದೇಕೋ ಅಪ್ಪ ತುಸು ಬದಲಾಗಿದ್ದಾರೆ!
ಕಪ್ಪು ಕೂದಲಿಗೆ ಮೊರೆ ಹೋಗದೆ
ಇಳಿ ವಯಸ್ಸಿನ ಸವಾಲುಗಳನ್ನು
ಸ್ವೀಕರಿಸಿದ್ದಾರೆ, ಗರಿ ಗರಿ
ಇಸ್ತ್ರಿ ಅಂಗಿಯ ಮರೆತಿದ್ದಾರೆ
ತೋಳುದ್ದ ಒಳ ಅಂಗಿ ಕಪ್ಪಾಗಿ
ಬಣ್ಣ ಮಾಸಿದ್ದರೂ ಧರಿಸಿದ್ದಾರೆ
ಅದೇಕೋ ಅಪ್ಪ ತುಸು ಬದಲಾಗಿದ್ದಾರೆ!
ತನ್ನದೇ ಹಠ ನಡೆಯಬೇಕು ಎಂಬುವರು
ನಸು ನಗುವಿಗೆ ಶರಣಾಗಿದ್ದಾರೆ,
ಈಗೀಗಷ್ಟೇ ಅವ್ವನನ್ನು
ಅರ್ಥಮಾಡಿಕೊಳ್ಳುತ್ತಿದ್ದಾರೆ
ಮುಂಚೆಗಿಂತ ಅಪ್ಪ...
ಸುದ್ದಿಗಳು
ಜ್ಯೋತಿ ಸೆಂಟ್ರಲ್ ಶಾಲೆಯ 10 ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭ
ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳಿಯ ಬೆಳಗಾವಿಯ ಜ್ಯೋತಿ ಸೆಂಟ್ರಲ್ ಶಾಲೆಯಲ್ಲಿ 10 ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಇತ್ತೀಚೆಗೆ ನಡೆಯಿತು.ಈ ಸಂದರ್ಭದಲ್ಲಿ, ಜ್ಯೋತಿ ಸೆಂಟ್ರಲ್ ಶಾಲೆಯ ಸಂಸ್ಥಾಪಕ ಮತ್ತು ಮಾಜಿ ಅಧ್ಯಕ್ಷ ಡಾ.ಪಿ.ಡಿ. ಕಾಳೆ, ಜ್ಯೋತಿ ಪಿ.ಯು. ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಮತ್ತು ಜ್ಯೋತಿ ಸೆಂಟ್ರಲ್ ಶಾಲೆಯ ಎಸ್.ಎಂ.ಸಿ ಅಧ್ಯಕ್ಷ ಪ್ರೊ.ಆರ್.ಕೆ....
ಸುದ್ದಿಗಳು
ವಾರದ ಸತ್ಸಂಗ ಕಾರ್ಯಕ್ರಮ ; ಶರಣರು ನುಡಿದು ಸೂತಕಿಗಳಲ್ಲ
ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘವು ದಿನಾಂಕ 15 ರಂದು ವಾರದ ಸತ್ಸಂಗದ ಕಾರ್ಯಕ್ರಮದಲ್ಲಿ ಪರಶಿವ ಲಿಂಗವೇ ತಾನಾದ ಶರಣರ ಮಾತು ಮಾತಿನಂತಲ್ಲ ಅವರ ಮಾತೆಂಬುದ ದಿವ್ಯ ಪ್ರಭೆಯನ್ನು ಬೀರುವ ಜ್ಯೋತಿರ್ಲಿಂಗ ನಾದ ಬಿಂದು ಕಳಾತೀತವಾದ ನಿರವಯ ನಿಕಲ ಲಿಂಗ ಆದ ಕಾರಣ ಪರಶಿವನೆ ತಾನಾದ ಶರಣರ ನುಡಿ ಪರಶಿವನುಡಿ , ಶರಣರು ನುಡಿದರೂ ಅವರು ಶಬ್ದ...
ಸಂಪಾದಕೀಯ
ಆರ್ ವಿ ಲರ್ನಿಂಗ್ ಹಬ್ ಸಂಸ್ಥೆಯ ಪರವಾನಿಗೆ ರದ್ದು ಮಾಡಿ
ಬೆಂಗಳೂರಿನ ಪ್ರತಿಷ್ಠಿತ (?) ಕಾಲೇಜು ಆರ್ ವಿ ಲರ್ನಿಂಗ್ ಹಬ್ ಎಂಬ ಸಂಸ್ಥೆಯಲ್ಲಿ ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕರೊಬ್ಬರನ್ನು ಆಡಳಿತ ಮಂಡಳಿ ವಜಾ ಮಾಡಿದೆ ಎಂಬ ವರದಿ ಕನ್ನಡ ಭಾಷೆಗೆ ಸಂಬಂಧಿಸಿದಂತೆ ಕಳವಳಕಾರಿಯಾದುದು.ಕನ್ನಡದ ಅನ್ನ ತಿಂದು, ಇಲ್ಲಿಯ ಸೌಲಭ್ಯಗಳನ್ನು ಅನುಭವಿಸುವ ಇಂಥ ಸಂಸ್ಥೆಗಳು ಕನ್ನಡಕ್ಕೆ ಋಣಿಯಾಗಿರಬೇಕು ಆದರೆ ಕನ್ನಡ ಮಾತನಾಡುವವರನ್ನೇ ಸೇವೆಯಿಂದ ವಜಾ ಮಾಡುತ್ತಾರೆ ಎಂದರೆ...
ಸುದ್ದಿಗಳು
ಜೀವನವನ್ನು ದಿವ್ಯ ಮಾಡಿಕೊಳ್ಳಲು ನಿಯಮಗಳು ಅವಶ್ಯಕ – ತೃಪ್ತಿ ಬೆಹೆನ್ ಜೀ ಅಭಿಮತ
ಮೈಸೂರು ಯಾವ ವ್ಯಕ್ತಿ ದಿವ್ಯ ಜೀವನವನ್ನು ಪ್ರೀತಿಸುತ್ತಾರೆ ಅವರು ನಿಯಮಗಳನ್ನು ಅವಶ್ಯವಾಗಿ ಸ್ವೀಕರಿಸುತ್ತಾರೆ ಎಂದು ಸೂರತ್ ಮಹಾನಗರ ಈಶ್ವರೀಯ ವಿಶ್ವವಿದ್ಯಾಲಯಗಳ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ತೃಪ್ತಿ ಬೆಹೆನ್ ಜೀ ಅಭಿಪ್ರಾಯಪಟ್ಟರು. ಹುಣಸೂರು ರಸ್ತೆಯಲ್ಲಿರುವ ಜ್ಞಾನ ಸರೋವರ ಪುನಶ್ಚೇತನ ಕೇಂದ್ರದಲ್ಲಿ ನಡೆಯುತ್ತಿರುವ 5 ದಿನಗಳ ಅಖಂಡ ಮೌನ, ರಾಜಯೋಗ ಧ್ಯಾನ, ವ್ಯಕ್ತಿತ್ವ ವಿಕಸನ,ದಿವ್ಯಜೀವನ ಕಾರ್ಯಗಾರದ ಸಮಾರೋಪ...
ಸುದ್ದಿಗಳು
ದಿ.೧೬ ರಂದು ಹಿರಿಯ ನಾಗರಿಕರ ದೌರ್ಜನ್ಯ ತಡೆ ದಿನಾಚರಣೆ ಅಂಗವಾಗಿ ಮನವಿ ಪತ್ರ ಸಲ್ಲಿಕೆ
ಬೆಳಗಾವಿ - ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿರುವ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಪ್ರತಿ ವರ್ಷ ಜೂನ 15 ರಂದು ಹಿರಿಯ ನಾಗರಿಕರ ದೌರ್ಜನ್ಯ ತಡೆ ದಿನಾಚರಣೆ ಜರುಗಿಸಿ, ಸಮಾಜ ಹಾಗೂ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಹೇಳಲಾಗಿದೆ. ಆದರೆ ಈ ಘೋಷಣೆಯ ಉದ್ದೇಶವನ್ನು ಸರಕಾರ ಹಾಗೂ ಸಮಾಜಗಳು ತಿಳಿದುಕೊಳ್ಳದ ಕಾರಣ ಕರ್ನಾಟಕ ರಾಜ್ಯ ಹಿರಿಯ...
ಸುದ್ದಿಗಳು
ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಪ್ರೇರಣಾ ಕಾರ್ಯಾಗಾರ
ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ವೃತ್ತಿ ಮಾರ್ಗದರ್ಶನ ಮತ್ತು ಆಪ್ತ ಸಲಹಾ ಕೇಂದ್ರದ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.ಉಪನ್ಯಾಸಕರಾಗಿ ಆಗಮಿಸಿದ ಧಾರವಾಡದ ಮೇಧಾಶಕ್ತಿ ಸಂಸ್ಥೆಯ ಮುಖ್ಯಸ್ಥರಾದ ಕುಶಾಲರಡ್ಡಿ ಗಣಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆ, ಕೌಶಲ್ಯವನ್ನು ಗುರುತಿಸಿಕೊಂಡು ಬದುಕಿನ ಗುರಿ ನಿರ್ಧರಿಸಿಕೊಳ್ಳಬೇಕು ಎಂದರು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಕಷ್ಟು...
ಸುದ್ದಿಗಳು
ಓರಿಯೆಂಟಲ್ ಪೌಂಡೇಶನ್ ವತಿಯಿಂದ 103 ಸಾಧಕರಿಗೆ ಪ್ರಶಸ್ತಿ
ಬೆಂಗಳೂರು- ಓರಿಯೆಂಟಲ್ ಪೌಂಡೇಶನ (ರಿ) ಕನ್ನಡ ಸಾಹಿತ್ಯ ಪರಿಷತ್ 2024-25 ನೇ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಟ್ಟು 103 ಸಾಧಕರಿಗೆ ಇಂಡಿಯನ್ ಐಕಾನ ಅವಾರ್ಡ್ ಪ್ರಶಸ್ತಿ ಪ್ರದಾನ ಸಮಾರಂಭವು ದಿ. 15 ರವಿವಾರದಂದು ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ ಪಂಪ ಮಹಾಕವಿ ರಸ್ತೆ ಚಾಮರಾಜಪೇಟೆ ಬೆಂಗಳೂರು ಕೃಷ್ಣ ರಾಜ ಪರಿಷತ್ ಮಂದಿರದಲ್ಲಿ...
ಲೇಖನ
ಅಪಾಯ ಎದುರಿಸುವ ಬಗೆ ಹೀಗೆ . . . . .
ನಾ ನೀಗ ತಮ್ಮೊಂದಿಗೆ ಹಂಚಿಕೊಳ್ಳುತ್ತಿರುವ ಕಥೆ ರಷ್ಯಾದ ಖ್ಯಾತ ಸಾಹಿತಿ ಲಿಯೋ ಟಾಲ್ ಸ್ಟಾಯ್ ಬರೆದದ್ದು. ಒಮ್ಮೆ ಇಬ್ಬರು ಗೆಳೆಯರು ಕಾಡಿನಲ್ಲಿ ಹೋಗುತ್ತಿದ್ದರು. ಕಾಡು ಪ್ರಾಣಿಗಳು ಪೊದೆಗಳ ಹಿಂದೆ ಅಡಗಿರಬಹುದೆಂಬ ಭಯದಿಂದ ಇಬ್ಬರೂ ಕೈ ಕೈ ಹಿಡಿದು ಸಾಗುತ್ತಿದ್ದರು. ಕಾಡಿನ ದಾರಿಯನ್ನು ಗೆಲುವಾಗಿ ಸಾಗಲು ಅತಿ ಪ್ರೀತಿಯಿಂದ ಅದು ಇದು ಹರಟುತ್ತ ಸಾಗುತ್ತಿದ್ದರು. ಒಮ್ಮೆಲೇ...
ಸುದ್ದಿಗಳು
ಶಾಲಾ ವಾಹನ ಚಾಲಕರು ಮಕ್ಕಳನ್ನು ಜೋಪಾನವಾಗಿ ಕರೆದೊಯ್ಯಬೇಕು –
ಮೂಡಲಗಿ - ಶಾಲಾ ವಾಹನ ಚಾಲಕರು ನೀವು ಸಮವಸ್ತ್ರ ಧರಿಸಬೇಕು, ಚಾಲನಾ ಲೈಸೆನ್ಸ್ ಹೊಂದಿರಬೇಕು, ವಾಹನದ ವಿಮೆ ಮುಗಿದಿದ್ದರೆ ಮಾಡಿಸಬೇಕು, ಹಲವಾರು ಮಕ್ಕಳ ಜೀವ ನಿಮ್ಮ ಕೈಯಲ್ಲಿರುತ್ತದೆ. ವಾಹನದ ಬಗ್ಗೆ ಏನಾದರೂ ಕುಂದು ಕೊರತೆ ಇದ್ದರೆ ಸಂಸ್ಥೆಯ ಅಧ್ಯಕ್ಷರಿಗೆ ಹೇಳಿ ಮಾಡಿಸಬೇಕು. ಮಕ್ಕಳನ್ನು ಮನೆಗೆ ಬಿಡುವಾಗ ರಸ್ತೆ ದಾಟಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ...
Latest News
ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು
ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...



