ಸಿಂದಗಿ: ರಾಜ್ಯದಲ್ಲಿ ಕೋವಿಡ್ 19 ಒಮಿಕ್ರೋನ್ ವೈರಸ್ ವೇಗವಾಗಿ ಹರಡುತ್ತಿರುವುದರಿಂದ ಜನಸಂದಣಿ ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಆದೇಶದನ್ವಯ ಫೆ. 01 ರಿಂದ 09ರ ವರೆಗೆ ನಡೆಯಲಿರುವ ದಾವಲ್ ಮಲಿಕ್ ಜಾತ್ರೆ ಜಾತ್ರೆಯನ್ನು ರದ್ದುಗೊಳಿಸಿ ಸರಳವಾಗಿ ಪೂಜಾ ವಿಧಾನಗಳನ್ನು ಮಾಡುವಂತೆ ಸೂಚನೆಯಿರುವ ಕಾರಣ ಭಕ್ತಾಧಿಗಳು ಸರಕಾರದ ನಿಯಮಗಳನ್ನು ಪಾಲಿಸಿ ಕರೋನಾ ತಡೆಗೆ ಸಹಕರಿಸಬೇಕು ಎಂದು ತಹಶೀಲ್ದಾರ ಸಂಜೀವಕುಮಾರ ದಾಸರ ಮನವಿ ಮಾಡಿಕೊಂಡರು.
ತಾಲೂಕಿನ ಯಂಕಂಚಿ ಗ್ರಾಮದಲ್ಲಿ ದಾವಲ್ ಮಲಿಕ್ ಜಾತ್ರೆ ನಿಷೇಧಿಸುವ ನಿಮಿತ್ತ ಕರೆದ ಸಾರ್ವಜನಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾವಿರಾರು ಸಂಖ್ಯೆಯಲ್ಲಿ ಸೇರುವ ದಾವಲ ಮಲಿಕ ಜಾತ್ರೆಯು ಜನರಿಗೆ ಕಂಟಕವಾಗಬಾರದು ಇದರಿಂದ ತಪ್ಪು ಸಂದೇಶ ಹೋಗಿ ದೇವರನ್ನು ನಿಂದಿಸುವ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಬಾರದು ಎನ್ನುವ ದೃಷ್ಟಿಯಿಂದ ಬೇರೆ ಬೇರೆ ರಾಜ್ಯ, ಜಿಲ್ಲೆಗಳಿಂದ ಬರುತ್ತಿರುವ ಭಕ್ತರಿಗೆ ಈ ಸಂದೇಶವನ್ನು ಬಿತ್ತರಿಸಿ ಜಾತ್ರೆಯನ್ನು ಇಲ್ಲಿ ಭಕ್ತರು ಸರಳವಾಗಿ ಪೂಜೆ ಸಲ್ಲಿಸಿ ಎಂದರು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೊಂಗಯ್ಯ, ಆರಕ್ಷಕ ವೃತ್ತ ನಿರೀಕ್ಷಕ ರವಿಂದ್ರ ಉಕ್ಕುಂದ, ಪಿಎಸ್ಐ ನಿಂಗಪ್ಪ ಪೂಜಾರಿ, ಕಂದಾಯ ನಿರೀಕ್ಷಕ ಐ.ಎಂ.ಮಕಾನದಾರ, ಗ್ರಾಪಂ ಅದ್ಯಕ್ಷ-ಉಪಾದ್ಯಕ್ಷರು ಹಾಗೂ ಸದಸ್ಯರು ಮತ್ತು ಸಾರ್ವಜನಿಕರು ಹಾಗೂ ಜಾತ್ರಾ ಕಮಿಟಿ ಸದಸ್ಯರು ಸಭೆಯಲ್ಲಿ ಹಾಜರಿದ್ದರು.