ಸುಸಂಸ್ಕೃತಿಯ ದೇಶ ನಮ್ಮ ಭಾರತ
ನಮ್ಮ ಭಾರತದ ಸಂಸ್ಕೃತಿ
ಇತಿಹಾಸ ಪುಟದಲ್ಲಿ ಕೀರ್ತಿ
ಶಿಲಾಶಾಸನಗಳೇ ಸಂಕೇತ.
ಭಾಷೆಗಳು ಅನೇಕಾನೇಕ
ವೇಷಭೂಷಣಗಳು ಆಕರ್ಷಕ
ವಿವಿಧತೆಯಲ್ಲಿ ಏಕತೆ ಮನಮೋಹಕ
ಸಾಹಿತ್ಯ ಲೋಕದ ಸಾಗರ
ವಚನಗಳೇ ಸುವರ್ಣಭಂಡಾರ
ಕನ್ನಡ ಜ್ಞಾನಪೀಠವು ಭರಪೂರ
ಕ್ರೀಡಾಂಗಣದೊಳು ಸಾಧನೆ
ಭಾರತ ಪಡೆದಿದೆ ಮುಂಚೂಣಿ
ಕನಕ,ಕಂಚು ರಜತ ಪದಕವನ್ನೇ
ವಿಜ್ಞಾನಿ ಡಾ. ಅಬ್ದುಲ್ ಕಲಾಂ
ಜ್ಞಾನಿ ಸುಧಾಮೂರ್ತಿ ಮೇಡಂ
ವಿದ್ವತ್,ದೇಶ ಒಂದೇ ಮಾತರಂ
ದೇಶದ ಬೆನ್ನೆಲುಬು ರೈತ
ಸೈನಿಕ ದೇಶದ ಕಣ್ ಆತ
ವೀರ,ಧೀರರ ದೇಶ ಭಾರತ
ನಿಸರ್ಗ ಸಂಪನ್ಮೂಲದ ಗುಡಿ
ಹೊನ್ನು ರತ್ನ,ಶ್ರೀಗಂಧದ ಗುಡಿ
ಮತಬೇಡ, ಇರಿ ಒಂದುಗೂಡಿ
ಎಲ್ಲರಿಗಿರಲಿ ಹೆಮ್ಮೆಅಭಿಮಾನ
ಎಲ್ಲರಿಗಿರಲಿ ಭಾಷಾಭಿಮಾನ
ಎಲ್ಲರಿಗಿರಲಿ ರಾಷ್ಟ್ರಾಭಿಮಾನ
ಶ್ರೀಮತಿ ಪಾರ್ವತಿ ದೇವಿ. ಎಂ.ತುಪ್ಪದ ಬೆಳಗಾವಿ