- Advertisement -
ಅವಳ ಬದುಕು
ಕೂಡಿಟ್ಟ ಆಸೆಗಳ ಕನಸು ಕಾಣುತ
ಮೂರು ಗಂಟಿಗೆ ಶರಣಾದಳವಳು
ಸಪ್ತಪದಿ ತುಳಿದಳು
ಕೈ ಹಿಡಿದ ಗಂಡ ಕೈಬಿಡನು ಎಂದು
ಮದುವೆ ಆದ ಮೂರೇ
ದಿನದಲ್ಲಿ ತಿಳಿಯಿತು
ಕೈ ಹಿಡಿದ ಗಂಡ ಗುಂಡಿಗೆ ದಾಸನಾಗಿದ್ದ ಅಮಲೇರಿದ ಗಂಡ
ಹೆಂಡತಿಗೆ ಮೂಲೆ ಗುಂಪಾಗಿಸಿದ..
ಜಗಳ, ಕೋಪ, ಮನಸ್ಥಾಪ,
ಹೆಚ್ಚಾಯಿತು ದಿನ ದಿನವೂ
ತವರಿನಿಂದ ತಂದ ತುಂಡು ಬಂಗಾರ ಮಾರಿ ತವರಿನ ದಾರಿ ಹಿಡಿದಳು
- Advertisement -
ಅವಳ ಬದುಕು
ನೂರು ಕಾಲ ಚೆನ್ನಾಗಿ ಇರದೆ
ಬದಲಿಗೆ ಬಹುಬೇಗ
ಅಳಿದು ಹೊಯಿತು
ರಾಹುಲ್ ಸುಭಾಷ್ ಸರೋದೆ
ಗಂಗಾವತಿ 583227
📱9482448733