ಕವನ: ಕನ್ನಡ ರಾಜ್ಯೋತ್ಸವ ದಿನ

Must Read

ಕನ್ನಡ ರಾಜ್ಯೋತ್ಸವ ದಿನ

ನಮ್ಮ ಭಾಷೆ ಕನ್ನಡ ನಮ್ಮ ನಾಡು ಕನ್ನಡ
ಪ್ರಾಚೀನ ಭಾಷೆ ಶಾಸ್ತ್ರೀಯ ಭಾಷೆ ಕನ್ನಡ
ಹಲ್ಮಿಡಿ ಶಾಸನ ಹೇಳಿದೆ ಪ್ರಾಚೀನ ಕನ್ನಡ

ಕುರಿತೋದದೆ ಕಾವ್ಯ ರಚಿಸಿದರ ನಾಡಿದು
ಪಂಪ ರನ್ನ ಜನ್ನ ಪೊನ್ನ ಕವಿಗಳ ನಾಡಿದು
ಕುವೆಂಪು ಬಿಎಂಶ್ರೀ ಮಾಸ್ತಿ ಬೇಂದ್ರೆ ಇದು
ಸಕಲ ಕವಿ ಪುಂಗವರು ಬೆಳೆಸಿದ ನಾಡಿದು

ಕಿತ್ತೂರು ಚೆನ್ನಮ್ಮ ಬೆಳವಡಿಯ ಮಲ್ಲಮ್ಮ
ಶೂರ ಸಂಗೊಳ್ಳಿ ರಾಯಣ್ಣ ಅನೇಕರಮ್ಮ
ಕನ್ನಡ ನೆಲಜಲ ಭಾಷೆಯ ಪೊರೆದರಮ್ಮ
ವೀರ ವನಿತೆಯರು ಶೂರ ಪುತ್ರರು ಹೆಮ್ಮೆ

ಚೆಲುವ ಕನ್ನಡ  ಸುಂದರ ಅಕ್ಕರದ ಭಾಷೆ
ಕಹಳೆಯ ಪಾಂಗಿನವೋಲ್ ಅಕ್ಕರೆ ಭಾಷೆ
ಹೊಕ್ಕುಳ ತೆರ ದುಂಡಕ್ಷರದ ನಮ್ಮ ಭಾಷೆ
ಉಳಿಸೋಣ ಬೆಳೆಸೋಣ ಬಳಸಿ ಭಾಷೆ

ಕನ್ನಡ ಅಂಕಿಗಳನು ಮರೆತೆವು ನಾವಿಂದು
ಪರಭಾಷೆಯ ಮೋಡಿಗೆ ಮೋಹಿತರಿಂದು
ನಿರ್ಧರಿಸು ನಮ್ಮ ಅಂಕಿಗಳ ಬರೆವೆನೆಂದು
ಸಂಗೀತ ಕಲೆಗಳ ಉಳಿಸಿ ಬೆಳೆಸುತಲಿಂದು

ನವೆಂಬರ ಒಂದು ಮಾತ್ರ ಎಚ್ಚರಗೊಳ್ಳದೆ
ಪ್ರತಿನಿತ್ಯ ಕನ್ನಡದ ಧ್ಯಾನವೇ ಮಾಡೋಣ
ಕನ್ನಡದ ಭಾಷೆಯಲ್ಲಿಯೇ ಮಾತಾಡೋಣ
ನಮ್ಮತನದಿ ಅನ್ಯಭಾಷೆಗಳ ಪ್ರೀತಿಸೋಣ

ಹಳದಿ ಕೆಂಪು ಬಣ್ಣದ ಹೆಮ್ಮೆಯ ಬಾವುಟ
ಇದು ನಮ್ಮಯ ಸ್ವಾಭಿಮಾನದ ಬಾವುಟ
ಇಂದು ಗರ್ವದಲಿ ಹಾರಿಸೋಣ ಬಾವುಟ
ದಶದಿಕ್ಕಿನಲಿ ಕನ್ನಡ ಹಬ್ಬಿಸಲಿ ಈ ಬಾವುಟ

ಸಿರಿಗನ್ನಡಂ ಬಾಳ್ಗೆ ಸವಿಗನ್ನಡಂ ಒಲವಿಗೆ…


ಈಶ್ವರ ಜಿ.ಸಂಪಗಾವಿ.ಕಕ್ಕೇರಿ.

Latest News

ಮಕ್ಕಳಲ್ಲಿ ಸಂಸ್ಕಾರದ ಗುಣಗಳು ಕಡಿಮೆಯಾಗುತ್ತಿರುವುದು ವಿಷಾದನೀಯ – ಕಲಶೆಟ್ಟಿ

ಸಿಂದಗಿ-ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಮಾನವೀಯ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು ಇಂದು ಸಂಸ್ಕಾರದ ಗುಣಗಳು ಮಕ್ಕಳಲ್ಲಿ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ನಿವೃತ್ತ ಉಪನ್ಯಾಸಕ ಎಸ್.ಎಸ್.ಕಲಶೆಟ್ಟಿ ಹೇಳಿದರು.ಅವರು ಪಟ್ಟಣದ ಶ್ರೀ ಸಾತವೀರೇಶ್ವರ...

More Articles Like This

error: Content is protected !!
Join WhatsApp Group