spot_img
spot_img

ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹತ್ಯೆ ಖಂಡನೀಯ: ಕುಮಾರ ದೇಸಾಯಿ

Must Read

- Advertisement -

ಸಿಂದಗಿ:  ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಮಾನವ ಕುಲವೇ ತಲೆ ತಗ್ಗಿಸುವಂಥ ಕೃತ್ಯವಾಗಿದೆ ಈ ಘಟನೆ ಯಾರೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಅಂತಹ ಮನಸ್ಥಿತಿ ಹೊಂದಿದ ಆರೋಪಿಯನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಮತ್ತು ಅವನಿಗೆ ನೀಡುವ ಶಿಕ್ಷೆ ಮುಂದೆ ಅಂತಹ ದ್ರೋಹಿಗಳಿಗೆ ಭಯ ಹುಟ್ಟಿಸುವಂತಿರಬೇಕು ಎಂದು ಸಿಂದಗಿ ಯುತ್ ಕಾಂಗ್ರೆಸ್ ಅಧ್ಯಕ್ಷ ಕುಮಾರ ದೇಸಾಯಿ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹುಬ್ಬಳ್ಳಿ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ ಮತ್ತು ಆರೋಪಿಗೆ ಕಾನೂನು ರೀತಿಯಲ್ಲಿ ಶಿಕ್ಷೆ ನೀಡುತ್ತದೆ, ಇಲ್ಲಿ ಬಿಜೆಪಿ ಯವರು ಸಾವಿನ ಮನೆಯಲೂ ರಾಜಕೀಯ ಮಾಡುತ್ತಿದ್ದಾರೆ, ಅದು ಸರಿ ಅಲ್ಲ ಯಾವುದೇ ಸರ್ಕಾರ ಇರಲಿ ಯಾರೇ ಮುಖ್ಯಮಂತ್ರಿಗಳು ಇರಲಿ ಇಂತಹ ಘಟನೆಗಳಿಗೆ ಸಾಥ್ ನೀಡಲ್ಲ, ಅದಕ್ಕೆ ತನ್ನದೇಯಾದ ಕಾನೂನು ಇರುತ್ತದೆ ಕಾನೂನು ರೀತಿಯಲ್ಲಿಯೇ ಕ್ರಮ ಜರಗಿಸಬೇಕಾಗುತ್ತದೆ, ಅದನು ಬಿಟ್ಟು ಬಿಜೆಪಿಯವರು ಕಾನೂನು ಕೈಗೆ ತೆಗೆದುಕೊಳ್ಳಿ ಎನ್ನುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ, ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಕೂಡಾ ಹಲವಾರು ಪ್ರಕರಣಗಳು ನಡೆದಿವೆ ಆಗಲೂ ಕೂಡಾ ಕಾನೂನು ರೀತಿಯಲ್ಲಿಯೇ ಕ್ರಮ ಜರುಗಿಸಿದ್ದಾರೆ ಈಗಲೂ ಹಾಗೆ ಮಾಡಬಹುದು ಆದರೆ ಅದನೇ ಬಂಡವಾಳ ಮಾಡಿಕೊಂಡು ಬೇರೆಯವರ ಸಾವಿನ ಮೇಲೆ ರಾಜಕೀಯ ಮಾಡುವ ಸಂಸ್ಕೃತಿ ಬಿಜೆಪಿ ಯವರು ಬಿಡಬೇಕು ಎಂದು ಟ್ವೀಟ್  ಮಾಡಿದ್ದಾರೆ.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಉರಿಲಿಂಗ ಪೆದ್ದಿ ಇವನ ಹೆಸರಿನಲ್ಲಿ ೩೬೬ ವಚನಗಳು‌ ದೊರೆತಿವೆ. ಇವನ ತಂದೆ- ತಾಯಿ ಇವನಿಗೆ ಇಟ್ಟ ಹೆಸರು ಪೆದ್ದಣ್ಣ. ಇವನು ಗೋದಾವರಿ ತೀರದ ಹಳ್ಳಿಯೊಂದರಲ್ಲಿ ವಾಸವಾಗಿದ್ದನು.ಉರಿಲಿಂಗಪೆದ್ದಿ ಮೂಲತಃ...
- Advertisement -

More Articles Like This

- Advertisement -
close
error: Content is protected !!
Join WhatsApp Group