ಕವನಗಳು

Must Read

ನಿಲ್ಲದ ನಗೆ

ಚಿಕ್ಕವನಾಗಿದ್ದಾಗ
ಪ್ರಪಂಚ ನೋಡಿ
ಎಲ್ಲರೂ ನನ್ನವರೆಂದು
ಸಂತೋಷದಿಂದ
ನಗು ನಗುತ್ತಿದ್ದೆ,
ವಯಸ್ಸಾದಂತೆ
ಸಮಾಜದ ಎಲ್ಲರೂ
ಆಸ್ತಿ,ಅಂತಸ್ತು, ಸ್ವಾರ್ಥಗಳ
ಬೇಲಿ ಹಾಕಿಕೊಂಡಿದ್ದ ನೋಡಿ
ವಿಷಾದದ ನಗು ನಗಲಾರಂಭಿಸಿದೆ
ಅದೇಕೋ ಏನೋ
ಇನ್ನೂ ನಗು ನಿಲ್ಲಿಸಲಾಗಿಲ್ಲ,
ನಂಗೊಂದು ಹೆದರಿಕೆ
ನಾನೂ ಸಹ ನಗೆ ನಿಲ್ಲಿಸದ
ಲಾಫಿಂಗ್ ಬುದ್ಧ
ಆಗಿ ಬಿಡುತ್ತೇನೋ ಅಂತ..

ವಾಸ್ತವ

ಬಾಯಲ್ಲಿ ಜೇನುತುಪ್ಪ ಸುರಿಸುತ್ತಾ
ಹೃದಯದಲ್ಲಿ ವಿಷ ಹರಿಸುವ
ಕಾರ್ಕೋಟಕ ಮನುಜರ ಕಂಡಾಗ
ಪರೋಪಕಾರ ಮಾಡಲೂ ಹೇಸಿಗೆ..

ನೋವಿನ ತುತ್ತತುದಿಯಲ್ಲಿ
ಎಲ್ಲೋ ಬೆಳಕು ಕಾಣಿಸಿದಾಗ,
ಮಾಡಿದ ಸೇವೆಗೆ ಯಾರೋ ಸಹೃದಯರು
ಆತ್ಮಪೂರ್ವಕ ಮೆಚ್ಚುಗೆ ನೀಡಿದಾಗ,
ಮತ್ತೆ ಕತ್ತಲಿಗೆ ಬೆಳಕು ಕಾಣಿಸುವ ಹಂಬಲ..

ಡಾ.ಭೇರ್ಯ ರಾಮಕುಮಾರ್, ಮೈಸೂರು

Latest News

ಕವನ : ಕರುನಾಡ ಒಡೆಯರು

ಕರುನಾಡ ಒಡೆಯರುಕರುನಾಡ ಒಡೆಯರು ಕನ್ನೆಲದ ಧೀರರು ಕನ್ನಡವ ಕಟ್ಟಿದರು ಕಲ್ಯಾಣ ಶರಣರುದೇವ ಭಾಷೆಯ ತೊರೆದು ಜನ ಭಾಷೆ ಮೆರೆದು ಸತ್ಯದ ಕೂರಲಗದೀ ಕನ್ನಡ ನುಡಿ ಕಟ್ಟಿದರುಚಂಪೂ ಮೋಹವ ಬಿಟ್ಟು ದೇಸಿ ಪ್ರಜ್ಞೆಯ ಕಟ್ಟು ಕಾಯಕದ ಧರ್ಮವನು ಕಟ್ಟಿದರು ಶರಣರುಹಾಸಿ...

More Articles Like This

error: Content is protected !!
Join WhatsApp Group