ಕವನ : ಯುಗಪುರುಷ ಟಾಟಾ

Must Read

ಯುಗದ ಪುರುಷ ಟಾಟಾ

ಕರೆಯಿತು ಕಾಲನ ಕರೆ
ಹೋದರು ಟಾಟಾ
ದೇಶದ ನೈಜ ರತ್ನ
ಪದ್ಮವಿಭೂಷಣ
ಸಾಟಿ ಇಲ್ಲದ ಸಾಧಕ
ಕರೆದ ಕಾಲನ ಕರೆ
ಹೋದರು ಟಾಟಾ
ಮದುವೆ.. ಮಕ್ಕಳು..ಇಲ್ಲ
ದೇಶದ ಹಿತಕೆ ಅವನದೆಲ್ಲ

ಅವನನಂಥ ಸೇವೆಯ ಧಣಿ
ಹೋಲುವರಾರಿಲ್ಲ
ಜನ್ಮಭೂಮಿಯ ಋಣಕೆ
ಬದುಕ ದಾನ ನೀಡಿದ.                                          ಆಧುನಿಕ ಕರ್ಣ..

ಆಡು ಮುಟ್ಟದ ಕಸವಿಲ್ಲ
ಟಾಟಾ ಕೈಯಾಡಿಸದ
ಉದ್ಯೋಗ ಕ್ಷೇತ್ರವಿಲ್ಲ.
ದೇಶಕ್ಕೆ ಬಂದರೆ ಆಪತ್ತು
ಟಾಟಾ ಕಟಾಕ್ಷ ಯಾವತ್ತೂ

ಇಂಥ ಟಾಟಾ.. ನಮ್ಮ ಟಾಟಾ
ಜಗದ ತುಂಬ ಇವರ ಆಟ..
ದೇಶಕಾಗಿ.. ಇವರ ನೋಟ..
ದೇಶಹಿತವೇ ಇವರ ಹಠ..!!
ಮುಖದ ಮೇಲೆ ಮಂದಹಾಸ
ಆರದ ಛಾಯೆ..
ಹಠವ ತೊಟ್ಟು ಸ್ವಹಿತ ಬಿಟ್ಟು
ದೇಶಹಿತಕೆ ಮಿಡಿದ ಹೃದಯ
ದೇವಸಮಾನ ದಾನಗುಣದ
ಯುಗ ಯುಗದ ಆದರ್ಶ ಪುರುಷ
ನಡೆದೇ ಬಿಟ್ಟ ಎಲ್ಲ ಬಿಟ್ಟು
ಕರೆಯಿತು ಕಾಲನ ಕರೆ
ಹೋದರು ಟಾಟಾ..
ದೇಶದ ಪಾಲಿನ ನೈಜರತ್ನ

ಸೋಮಶೇಖರ ವೀ. ಸೊಗಲದ. ರಾಮದುರ್ಗ.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group