ಕವನ : ಯುಗಪುರುಷ ಟಾಟಾ

Must Read

ಯುಗದ ಪುರುಷ ಟಾಟಾ

ಕರೆಯಿತು ಕಾಲನ ಕರೆ
ಹೋದರು ಟಾಟಾ
ದೇಶದ ನೈಜ ರತ್ನ
ಪದ್ಮವಿಭೂಷಣ
ಸಾಟಿ ಇಲ್ಲದ ಸಾಧಕ
ಕರೆದ ಕಾಲನ ಕರೆ
ಹೋದರು ಟಾಟಾ
ಮದುವೆ.. ಮಕ್ಕಳು..ಇಲ್ಲ
ದೇಶದ ಹಿತಕೆ ಅವನದೆಲ್ಲ

ಅವನನಂಥ ಸೇವೆಯ ಧಣಿ
ಹೋಲುವರಾರಿಲ್ಲ
ಜನ್ಮಭೂಮಿಯ ಋಣಕೆ
ಬದುಕ ದಾನ ನೀಡಿದ.                                          ಆಧುನಿಕ ಕರ್ಣ..

ಆಡು ಮುಟ್ಟದ ಕಸವಿಲ್ಲ
ಟಾಟಾ ಕೈಯಾಡಿಸದ
ಉದ್ಯೋಗ ಕ್ಷೇತ್ರವಿಲ್ಲ.
ದೇಶಕ್ಕೆ ಬಂದರೆ ಆಪತ್ತು
ಟಾಟಾ ಕಟಾಕ್ಷ ಯಾವತ್ತೂ

ಇಂಥ ಟಾಟಾ.. ನಮ್ಮ ಟಾಟಾ
ಜಗದ ತುಂಬ ಇವರ ಆಟ..
ದೇಶಕಾಗಿ.. ಇವರ ನೋಟ..
ದೇಶಹಿತವೇ ಇವರ ಹಠ..!!
ಮುಖದ ಮೇಲೆ ಮಂದಹಾಸ
ಆರದ ಛಾಯೆ..
ಹಠವ ತೊಟ್ಟು ಸ್ವಹಿತ ಬಿಟ್ಟು
ದೇಶಹಿತಕೆ ಮಿಡಿದ ಹೃದಯ
ದೇವಸಮಾನ ದಾನಗುಣದ
ಯುಗ ಯುಗದ ಆದರ್ಶ ಪುರುಷ
ನಡೆದೇ ಬಿಟ್ಟ ಎಲ್ಲ ಬಿಟ್ಟು
ಕರೆಯಿತು ಕಾಲನ ಕರೆ
ಹೋದರು ಟಾಟಾ..
ದೇಶದ ಪಾಲಿನ ನೈಜರತ್ನ

ಸೋಮಶೇಖರ ವೀ. ಸೊಗಲದ. ರಾಮದುರ್ಗ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group