ಕವನಗಳು

Must Read

ಭ್ರೂಣವು

.ಹೊಸ ಬಸುರಿನ
ಒಡಲೊಳಗೆ
ಚಿಗುರೊಡೆದ
ಭ್ರೂಣವು

ಒಡಲಾಚೆ ವಿಶ್ವದಿ
ಮೊಟ್ಟೆಯೊಡೆದು
ಹುಟ್ಟ ಬಯಸುವ
ಪಕ್ಷಿಯು

ಕಡಲೊಳಗೆ
ಕಣ್ಣ್ತೆರೆದು
ಕನಸು ಕಾಣುವ
ಪುಟ್ಟ ಮೀನು

ಜೀವಜಾಲದ ಮಧ್ಯೆ
ನಗೆಯ ಪರಿಮಳ
ಕಂಪು ಸೂಸುವದು
ಮುಗ್ಧ ಭಾವ

ಮೊಳಕೆಯೊಡೆವ
ಜೀವಕೆ ಗೊತ್ತಿಲ್ಲ
ಹೆಣ್ಣೋ ಗಂಡೋ?
ಸಮಕಳೆ ಶಾಂತಿ ಮಂತ್ರ
________________________

ನೆಲವನಾಳುವ

ನೆಲವನಾಳುವ
ನೀಚ ಮನುಜರೆ
ಏಕೆ ಕಾಡು
ಕೊಲ್ಲುತಿರಿ
ಮರದ ಪೊದರಲಿ
ಪುಟ್ಟ ಪಕ್ಷಿ
ನಗುವ ಕಲೆಗೆ
ಏಕೆ ಕಲ್ಲು
ಹೊಡೆಯುವಿರಿ
ನದಿಯೊಳಗೆ
ಕನಸು ಬಯಕೆ
ಜೀವ ಜಾಲದ
ಜಲಚರಗಳಿಗೆ
ವಿಷವನೇಕೆ
ಉಣಿಸುವಿರಿ
ಹಸಿರು ಮೇಯುವ
ಹಸು ಕರುಗಳು
ಜಿಂಕೆ ಆನೆ ಒಂಟೆ
ಅಡವಿಯ ಹುಲ್ಲು ಹಾಸಿಗೆ
ಏಕೆ ಬೆಂಕಿ ಹಚ್ಚುವಿರಿ
ನೆಲವ ಅಗಿದು
ಗಣಿಯ ಬಗೆದು
ಅದಿರು ಮಾರುವ
ಲೂಟಿ ಕೋರರೆ
ಮುಗಿಲು ಮುಟ್ಟುವ
ಫೋನ್ ಟವರ್
ಹದ್ದು ಗುಬ್ಬಿ
ಸಾಯುತಿವೆ
ಅಣು ಪರೀಕ್ಷೆ
ಬಾಂಬ್ ಗುಂಡು
ಯುದ್ಧ ಕದನ ನಿಲ್ಲವು
ಶುದ್ಧ ಗಾಳಿ ನಲುಗಿದೆ
ಪ್ರಳಯ ಘಂಟೆ ಮೊಳಗಿದೆ
ಜೀವಧಾತೆ ಮರುಗಿದೆ
ಜಗವ ನಾವು ಉಳಿಸಬೇಕು
ಎಲ್ಲ ಮರೆತು ನಗುತ ಬನ್ನಿ
________________________

ಡಾ. ಶಶಿಕಾಂತ ಪಟ್ಟಣ ರಾಮದುರ್ಗ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group