spot_img
spot_img

ಕವನಗಳು

Must Read

spot_img
- Advertisement -

ಭ್ರೂಣವು

.ಹೊಸ ಬಸುರಿನ
ಒಡಲೊಳಗೆ
ಚಿಗುರೊಡೆದ
ಭ್ರೂಣವು

ಒಡಲಾಚೆ ವಿಶ್ವದಿ
ಮೊಟ್ಟೆಯೊಡೆದು
ಹುಟ್ಟ ಬಯಸುವ
ಪಕ್ಷಿಯು

- Advertisement -

ಕಡಲೊಳಗೆ
ಕಣ್ಣ್ತೆರೆದು
ಕನಸು ಕಾಣುವ
ಪುಟ್ಟ ಮೀನು

ಜೀವಜಾಲದ ಮಧ್ಯೆ
ನಗೆಯ ಪರಿಮಳ
ಕಂಪು ಸೂಸುವದು
ಮುಗ್ಧ ಭಾವ

ಮೊಳಕೆಯೊಡೆವ
ಜೀವಕೆ ಗೊತ್ತಿಲ್ಲ
ಹೆಣ್ಣೋ ಗಂಡೋ?
ಸಮಕಳೆ ಶಾಂತಿ ಮಂತ್ರ
________________________

- Advertisement -

ನೆಲವನಾಳುವ

ನೆಲವನಾಳುವ
ನೀಚ ಮನುಜರೆ
ಏಕೆ ಕಾಡು
ಕೊಲ್ಲುತಿರಿ
ಮರದ ಪೊದರಲಿ
ಪುಟ್ಟ ಪಕ್ಷಿ
ನಗುವ ಕಲೆಗೆ
ಏಕೆ ಕಲ್ಲು
ಹೊಡೆಯುವಿರಿ
ನದಿಯೊಳಗೆ
ಕನಸು ಬಯಕೆ
ಜೀವ ಜಾಲದ
ಜಲಚರಗಳಿಗೆ
ವಿಷವನೇಕೆ
ಉಣಿಸುವಿರಿ
ಹಸಿರು ಮೇಯುವ
ಹಸು ಕರುಗಳು
ಜಿಂಕೆ ಆನೆ ಒಂಟೆ
ಅಡವಿಯ ಹುಲ್ಲು ಹಾಸಿಗೆ
ಏಕೆ ಬೆಂಕಿ ಹಚ್ಚುವಿರಿ
ನೆಲವ ಅಗಿದು
ಗಣಿಯ ಬಗೆದು
ಅದಿರು ಮಾರುವ
ಲೂಟಿ ಕೋರರೆ
ಮುಗಿಲು ಮುಟ್ಟುವ
ಫೋನ್ ಟವರ್
ಹದ್ದು ಗುಬ್ಬಿ
ಸಾಯುತಿವೆ
ಅಣು ಪರೀಕ್ಷೆ
ಬಾಂಬ್ ಗುಂಡು
ಯುದ್ಧ ಕದನ ನಿಲ್ಲವು
ಶುದ್ಧ ಗಾಳಿ ನಲುಗಿದೆ
ಪ್ರಳಯ ಘಂಟೆ ಮೊಳಗಿದೆ
ಜೀವಧಾತೆ ಮರುಗಿದೆ
ಜಗವ ನಾವು ಉಳಿಸಬೇಕು
ಎಲ್ಲ ಮರೆತು ನಗುತ ಬನ್ನಿ
________________________

ಡಾ. ಶಶಿಕಾಂತ ಪಟ್ಟಣ ರಾಮದುರ್ಗ

- Advertisement -
- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group