ಕವನ : ಓ ಬಾಪು

Must Read

ಓ ಬಾಪು

ಜಗದ ಬೆಳಕೇ
ಸದ್ದಿಲ್ಲದಂತೆ ಸರಿದು
ಸರಹದ್ದಿಗೂ ಮೀರಿ
ದಿನಕರ ಮಬ್ಬಿಗೆ ಸರಿಸಿ
ಕೊನೆಯ ಉಸಿರೆಳೆದಿದೆ.

ಮಹಾತ್ಮನೆಂಬ ವ್ಯಕ್ತಿತ್ವ
ಸತ್ಯ ಪಥದ ಸಾಕಾರ ಮೂರ್ತಿ
ವ್ಯತಿರಿಕ್ತದಿ ನಂದಿದೆ
ಪರಿತ್ಯಾಗಿಯಾಗಿ ನಡೆದು
ಕರುಣೆ
ಹೇಳ ಹೆಸರಿಲ್ಲದಂತಾಗಿದೆ.

ಭಾರತದ ದಿವ್ಯ ಜ್ಯೋತಿ
ಸ್ವಾತಂತ್ರ್ಯದ ಹರಿಕಾರ
ಚಳವಳಿಯ ನೇತಾರ
ನಿನಗೆ ಹತ್ಯೆಯ ಬಳುವಳಿ
ಏಕಿಂತಹ ಘೋರ.

ವಿಶ್ವ ಶಾಂತಿಗೆ
ರಕ್ತದೋಕುಳಿ ಹರಿಸಿ
ಬೆರಗು ಮೂಡಿಸಿದಾತನಿಗೆ
ಚಿರನಿದ್ರೆಯ ಬಾಗಿನವೇ
ಕಳವಳಕಾರಿ ಸುದ್ದಿಯ ನೇಮ.

ಓ ಬಾಪು
ನಿನಗಾರು ಸರಿಸಾಟಿ
ಉಪವಾಸದ ನಡಿಗೆ
ಸರಳ ಸುವಿಚಾರದ ವ್ಯಕ್ತಿಗೆ
ದುರುಳತನದಿ ಹರಿತವೇ.

ಮತ್ತೊಮ್ಮೆ ಬಂದು ಬಿಡು
ಮತ್ತಿನ ಜನಕೆ ಪಾಠ ಕಲಿಸಿ
ಮುತ್ತಿನ ಮಾತನು ತಿಳಿಸಿ
ಬೇಜವಾಬ್ದಾರಿ ತನಕೆ ನೀರಿಳಿಸಿ
ಭಾರತದ ಭವ್ಯತೆಗೆ ಝೇಂಕರಿಸಿ.

ರೇಷ್ಮಾ ಕಂದಕೂರ
ಶಿಕ್ಷಕಿ
ಸಿಂಧನೂರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group