ಕವನ : ಪಹಲ್ಗಾಮ್ ಪ್ರವಾಸ

Must Read

ಪಹಲ್ಗಾಮ್ ಪ್ರವಾಸ

ಪಹಲ್ಗಾಮ್
ಹಸಿರು ಕಾನನದೊಳಗೆ
ನುಸುಳಿದ ಸಿಪಾಯಿ
ಬಂದೂಕುದಾರಿಗಳು
ಸಿಡಿಸಿದ ಗುಂಡಿಗೆ
ಎದೆ ಕೊಟ್ಟು ನಿಂತ ಪ್ರವಾಸಿಗರು
ಹಸಿರು ಹುಲ್ಲಿನ ಮೇಲೆ
ಬರೆದ ರಕ್ತದ ಕಲೆ
ಆರಿ ಹೋದವು ಹಗಲು ದೀಪ
ಹೆಗಲಿಗೆ ಹೆಗಲು ಆಗಲಿಲ್ಲ ಮಗ
ಹಸೆ ಮನೆಯ ಹುಡುಗಿಗೆ
ಹೆಸರಾಗಲಿಲ್ಲ ಗಂಡ
ಕಳೆದುಕೊಂಡ ತಾಳಿ
ಕಸಿದುಕೊಂಡ ಕುಂಕುಮ
ಮುಕ್ಕಿ ನಿಂತವು ಸುತ್ತುವರೆದು
ಹೌಹಾರಿದ ಕುದುರೆ ಸವಾರ
ಕಿತ್ತು ಕೊಂಡನು ಕೋವಿ
ಚೆಲ್ಲಿತು ರಕ್ತ
ಕೆಂಪಾದವು ಹಸುರೆಲೆ
ಕೂಗಿದರೂ ಧ್ವನಿ ಕೇಳದ ಜನ
ಮೂಕ ವಿಸ್ಮಿತ ಆಕ್ರೋಶ
ನಲುಗಿದ ಎದೆಗೆ
ಗುಡುಗಿದ ಸಿಡಿ ಮದ್ದು
ಹಿಂದೂ ಆದರೇನು ?
ತಂಪಾದ ತವರು ನೆಲಕ್ಕೆ
ಬೆಂಕಿ ಇಟ್ಟ ಪಾಪಿ ಪಾತಕಿ
ಘೋರಿ ಕಟ್ಟಿತು ನಟ್ಟ ನಡುವೆ
ಗುಡುಗು ಸಿಡಿಲು
ಸಿಡಿ ಮಿಡಿ ಗೊಂಡ ವೈರಿ ಪಡೆ
ಸಿಡಿಸಿ ಬಿಟ್ಟವು
ದಂಗು ದಳಪತಿ
ಓಡಿ ಹೋದವು ರಣ ಹದ್ದು
ರೆಕ್ಕೆ ಮುರಿದು ಗೂಡು ಬಿಟ್ಟು
ಛಿದ್ರವಾಯಿತು ಪಾತಕಿ

ಡಾ. ಸಾವಿತ್ರಿ ಕಮಲಾಪೂರ

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...

More Articles Like This

error: Content is protected !!
Join WhatsApp Group