- Advertisement -
ಬೆಳಗಾವಿ – ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ತಾಲೂಕು ಘಟಕ ನಿಪ್ಪಾಣಿ ವತಿಯಿಂದ ಯಮಗರ್ಣಿಯಲ್ಲಿ ವೇದಗಂಗಾ ನದಿಯ ಪ್ರವಾಹಕ್ಕೆ ಒಳಗಾಗಿ ನಿರಾಶ್ರಿತರಾದ ಜನರಿಗೆ ಆಹಾರ ದಿನನಿತ್ಯದ ಪದಾರ್ಥಗಳನ್ನು ಗ್ರಾಮ ಪಂಚಾಯತ್ ಸದಸ್ಯರಾದ ಇನಾಮದಾರ ಸರಕಾರ, ಸಂತೋಷ ಚವ್ಹಾಣ, ಸೋಮಾ ಪಿಸುತ್ರೆ ರವರಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯದರ್ಶಿ ಎ. ಆಯ್ ಪೀರಜಾದೆ, ಮುಖ್ಯೋಪಾಧ್ಯಾಯರು ಆರ.ಬಿ.ಮಲಕಾಪೂರೆ, ರಾವಸಾಹೇಬ ಜನವಾಡೆ, ಅಮೂಲ ವದ್ಹಡಿ, ಟಿ. ಬಿ. ಬೆಳಗಲಿ, ವಾಯ. ಬಿ.ಹಂಡಿ, ಅಧ್ಯಕ್ಷರು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಚಿಕ್ಕೋಡಿ. ಪ್ರಸಾದ ದೀವಟೆ ಉಪಸ್ಥಿತರಿದ್ದರು.