spot_img
spot_img

Bidar News: ಪ್ರೇಮ ಪ್ರಕರಣ; ಯುವಕನ ಕೊಲೆ

Must Read

- Advertisement -

ಬೀದರ – ಸಹೋದರಿಯನ್ನು ಪ್ರೀತಿಸಿದ ಯುವಕನೊಬ್ಬನನ್ನು ಹುಡುಗಿಯ ಸಹೋದರರು ಭೀಕರವಾಗಿ ಕೊಲೆ ಮಾಡಿ ಬಿಸಾಕಿರುವ ಘಟನೆ ತಾಲೂಕಿನ ಖೇಣಿರಂಜೋಳ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಕೊಲೆಯಾಗುವ ಮುನ್ನ ಯುವಕ ತನ್ನ ಸ್ನೇಹಿತನಿಗೆ ಕರೆ ಮಾಡಿದ್ದು ತನ್ನನ್ನು ಕೈಕಾಲು ಕಟ್ಟಿ ಕಾರಂಜಾ ನದಿಯಲ್ಲಿ ಬಿಸಾಕುವ ಯೋಜನೆಯನ್ನು ಕೊಲೆಗಾರರು ಮಾಡಿದ್ದರ ಬಗ್ಗೆ ಹೇಳಿಕೊಂಡಿದ್ದಾನೆ. ತನಗೆ ಒಂದು ಚಾನ್ಸ್ ಕೊಡಿ ಎಂದು ಕೇಳಿಕೊಂಡರೂ ಅವರು ಒಪ್ಪಲಿಲ್ಲ. ತನ್ನ ಕೈಕಾಲು ಸಂಪೂರ್ಣ ಮುರಿದುಹಾಕಿದ್ದಾರೆ. ಈಗ ಸದ್ಯಕ್ಕೆ ನದಿಯಲ್ಲಿ ಬಿಸಾಡಲು ಸಿದ್ಧರಾಗಿರುವುದಾಗಿ ಹೇಳಿ, ಅದನ್ನು ರೆಕಾರ್ಡ್ ಮಾಡಲು ಕೂಡ ಹೇಳಿರುವ ಆಡಿಯೋ ಟೈಮ್ಸ್ ಗೆ ಲಭ್ಯವಾಗಿದೆ.

ಕಣಜಿ ಗ್ರಾಮದ ಆನಂದ (೨೫) ಎಂಬ ಯುವಕನೇ ಕೊಲೆಯಾದ ದುರ್ದೈವಿ. ಯುವತಿಯ ಸಹೋದರರಾದ ಓಮೇಶ ಹಾಗೂ ದೇವಧೂಳಪ್ಪ ಎಂಬುವವರು ಸೇರಿ ಯುವಕನ ಕೈಕಾಲು ಮುರಿದು, ತಲೆಗೆ ಹೊಡೆದು ಕಟ್ಟಿ ಕಾರಂಜಾ ನದಿಗೆ ಬಿಸಾಕಿದ್ದಾರೆನ್ನಲಾಗಿದ್ದು ಪ್ರಕರಣದ ತನಿಖೆ ನಡೆದಿದೆ.

- Advertisement -

ವರದಿ : ನಂದಕುಮಾರ್ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

- Advertisement -
- Advertisement -

Latest News

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ನಿರ್ದೇಶಕರಾಗಿ ಶ್ರೀಮತಿ ದಯಾಶೀಲ 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ಬೆಳ್ತಂಗಡಿ ಮೂಲದ ಶ್ರೀಮತಿ ದಯಾಶೀಲರವರು ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗಡೆಯವರ ಆಶೀರ್ವಾದದೊಂದಿಗೆ ಯೋಜನೆಯ ಮುಖ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group