ಕವನ

ಗೌರೀ ಗೀತೆ

ಗೌರಿಗೆ ಮಾನಸಪೂಜೆ ಭಕ್ತಿಯಿಂದಲಿ ನಿನ್ನ ಮಾನಸ ಪೂಜೆ ಮಾಡುವೆ ಬಾ ಗೌರಿ ಹೃದಯ ಮಂದಿರದ ಬಂಗಾರ ಹಸೆಗೀಗ ಎಣ್ಣೆಯ ಹೆಚ್ಚಿ ಪನ್ನೀರಿನಿಂದೆರೆದು ಮೃದು ವಸ್ತ್ರದಿಂವರೆಸಿ ರೇಶಿಮೆ ಸೀರೆ ಉಡಿಸಿ ಕುಪ್ಪುಸ ತೊಡಿಸಿ ಸುರುಳಿ ಗರುಳ ತೀಡಿ ತುರುಬು ಕಟ್ಟಿ ಬಂಗಾರದ ಕೇದಿಗೆ ಜಾಜಿ ಮಲ್ಲಿಗೆ ಮಾಲೆ ಮುಡಿಸಿ ವಜ್ರದಹರಳಿನ ಓಲೆ ಮುಖರು ಲೋಲಾಕು ತೊಡಿಸುವೆ ಪಾರ್ವತಿಯೇ ತೋಳಿಗೆ ತೋಳಬಂದಿ ನಾಗರವಂಕಿ ನಡುವಿಗೆ ವಡ್ಯಾಣ ತೊಡಿಸುವೆ ಶಾಂಭವವಿಯೇ ಕೈಗೆ...

ಕವನ: ಕೊರೋನಾ, ಕೊರೋನಾ…

ಕೊರೋನಾ, ಕೊರೋನಾ... ಗೆಳೆಯರೊಬ್ಬರು ಹೇಳಿದರು ಕೊರೋನಾ ಮೇಲೊಂದು ಕವನ ಬರೆ ಎಂದು ಏನು ? ಕೊರೋನಾ ನಾ ? ಇದರ ಮೂಲ ಚೀನಾ ? ಇದರಿಂದ ತಾನೆ ಈ ರೋನಾ, ಧೋನಾ ? ನಮ್ಮದು ಹಾಗಲ್ಲ ನಾವು ಭಕ್ತರು, ಶಕ್ತರು ನಂಬಿಕೆಯಿಟ್ಟು ನಡೆದವರು ಬಾರ್ಡರಿನಲ್ಲಿ ತಂಟೆ ತಕರಾರು ಮೀರಿದವರು ಇನ್ನೊಬ್ಬರ ಗೊಡವೆ ನಮಗಿಲ್ಲ ಆದರೂ ನಮ್ಮೊಳಗಿನ ದ್ರೋಹಿಗಳಿಗೇನೂ ಕಡಿಮೆಯಿಲ್ಲ ಕೊರೋನಾಕೆ ಇಲ್ಲ ಕರುಣ ಜನಿಸಿದ್ದು ಮಾತ್ರ ಮಾರಣಹೋಮದ ಕಾರಣ ಈಗ ಹೊರಬಿತ್ತು ನೋಡಿ ಈ ಭೂಕಳ್ಳ ಚೀನಾದ ಹೂರಣ. ವೈರಿ ನಾಶಕೆಂದು...

ಚುಟುಕುಗಳು

ಸ್ಮರಣೆ ಬಾವುಟ ಹಾರಿಸಿದ ಮಂತ್ರಿಗಳು ಮಾಡಿದರು 'ಗಾಂಧಿ ಸ್ಮರಣೆ ' ಎದುರು ರಸ್ತೆಯ ಬಾರೊಂದರಲಿ ನಡೆದಿತ್ತು... ಭರ್ಜರಿ ಸೇಂದಿ ಸ್ಮರಣೆ... ಹುಚ್ಚ ಬಟ್ಟೆ ಗಂಟುಗಳ ಹಿಮಾಲಯ ಪರ್ವತ ಮೆದುಳ ತುಂಬಾ ಥಕ ದಿಂ-ಥಕ ದಿಂ ಭಾವಗಳ ಭರತನಾಟ್ಯ, ಶೃತಿಯಿಲ್ಲದ ಗಾನ ಹಾಡುವ ಆತ ದಿನವೂ ರಸ್ತೆಯ ಅಂಚಿನಲ್ಲಿ ಹುಡುಕುತ್ತಿದ್ದಾನೆ ಬೆಂಕಿ ಅಪಘಾತದಲ್ಲಿ ಭಸ್ಮವಾದ... ತನ್ನ ಹೆಂಡತಿ-ಮಕ್ಕಳನ್ನು!!! ರಾತ್ರಿ-ಹಗಲೆನ್ನದೆ ಮಳೆ-ಚಳಿ-ಗಾಳಿಗಳ ಮಧ್ಯೆ... ಅಚ್ಚರಿ..ಅಚ್ಚರಿ ಯುವಶಕ್ತಿ ಸಿಡಿದೇಳಬೇಕು ಎಂಬ ಕರೆ ಕೇಳಿ ನಮ್ಮೂರ ಯುವಕರು ಸಿಡಿದೆದ್ದು, ಬಾರಿಗೆ ನುಗ್ಗಿ 'ಗುಂಡು'ಹಾಕಿ ಊರೊಳಗೆ ನುಗ್ಗಿ ರಾತ್ರೋರಾತ್ರಿ ಹಲವರ ತೆಂಗು-,ಮಾವು ತೋಟಗಳಿಗೆ ನುಗ್ಗಿ, ಮರಗಳಿಗೆ ಲಗ್ಗೆ ಹಾಕಿ ರಸದೌತಣ ಮಾಡಿದರು... ಡಾ.ಭೇರ್ಯ ರಾಮಕುಮಾರ್, ಸಾಹಿತಿಗಳು, ಪತ್ರಕರ್ತರು ಮೊ:94496 80583 63631 72368

ಮಕ್ಕಳ ಕಥನ ಕಾವ್ಯ

ಮಕ್ಕಳ ಕಥನ ಕಾವ್ಯ ಮಾಡಿದ ತಪ್ಪನು ನೆನೆದು ಆವಾಗ ನಾನು ಚಿಕ್ಕವ ಮಳೆ ಚಳಿ ಲೆಕ್ಕಿಸದೆ ಹೊಳೆ ಹಳ್ಳ ಈಜಾಡಿ ಆಡು ಪಾಡುವ ಜೀವ ಗುಡ್ಡ ಗವಾರ ತಿರುಗಿದವ ಗಿಡ ಗಂಟೆ ಏರಿದವ ಜೇನ ರುಚಿ ಸವಿದವ ಬಾಲ ಲೋಕದಲಿ ನನ್ನ ನಾನೇ ಮರೆತವ ಹುಂಬ ಭಾವ ಹಲವು ನಿಲುವ ಮನಸು ಹರಿದಡೆ ಹೂಗನಸು ಕಾಣೋ ಜೀವ ಆವಾಗ ನಾನು ಚಿಕ್ಕವ ಹುಚ್ಚುಚ್ಚು ಭಾಷೆಯಲಿ ಬಗರಿ ಗಿಚ್ಚಾಡುತ ವಿಕಾರದಿ ನಗುತಲಿ ಹಸಿವು ತವಕ ನೀಗುತ ಹುಸಿಯ ಬಯಕೆ ತೇಲುತ ಮೃದು ಮಾತಿನಲಿ ಅಪ್ಪನು ಕರೆದನಂದು ಎತ್ತುಗಳ ಮೇಯಿಸಲು ಸರದಿಯು...

ಸ್ವಾತಂತ್ರ್ಯೋತ್ಸವ ಕವನ

ಹೇಳೋಣ ನನ್ನ ಭಾರತ ಮಹಾನ್ ಕಟ್ಟೋಣ ಇಲ್ಲೇ ಕಾಡನ್ನು ಕಡಿದು ದೊಡ್ಡ ದೊಡ್ಡ ನಿವೇಶನಗಳಲ್ಲಿ ಶಾಪಿಂಗ್ ಮಾಲ್ ಗಳನ್ನ ಕಿತ್ತೆಸೆಯೋಣ ಗುಡಿಸಲುಗಳನ್ನ ಗೇಣು ಹೊಟ್ಟೆ ತುಂಬಿಸಲು ಹೆಣಗುವ ಮಾನವ ಗೂಡುಗಳನ್ನ ನಿಮೂ೯ಲ ಮಾಡುತ್ತ ವನಸಿರಿಯನ್ನ ನಿಮಿ೯ಸೋಣ ಜಲ್ಲಿ ಕಾಂಕ್ರೀಟ್ ಕಾಡುಗಳನ್ನ ನೀರಿಲ್ಲವೆ ? ಚಿಂತೆ ಇಲ್ಲ ತರಿಸೋಣ ಬಿಸಲೆರಿ ಬಾಟಲ್ ಗಳನ್ನ ವಿದೇಶದಿಂದ ! ನಿಮಿ೯ ಸೋಣ ಒಂದು ಹೊಸ ವಿಶ್ವ ವಿಶ್ವಕಮ೯ ನಿಗೂ ಮಾಡಲಾಗದಂಥಾದ್ದು ನೀತಿ ನೈತಿಕತೆಯನ್ನು ಗಂಟು ಕಟ್ಟಿ ಬೀಸಾಡೋಣ...

ಕವನಗಳು

ಶೋಭಾ ಪುರೋಹಿತ, ಎಚ್ ಎನ್ ಸವಿತಾ, ಶರಶ್ಚಂದ್ರ ತಳ್ಳಿ ಮರಳಿ ರಾಮರಾಜ್ಯವಾಗಲಿ ಭರತಖಂಡದ ಇತಿಹಾಸದಲ್ಲಿ ಮರೆಯದ ದಿನವಿದು... ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಿಂದು!! ರಾಮಜನ್ಮಭೂಮಿಯಲ್ಲಿ ಭೂಮಿಪೂಜೆ ನಡೆದುದು.. ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವಂಥಹದು!! ಎನಿತು ಕಾಲದಿಂದ ಎದುರು ನೋಡುತಿದ್ದೆವು... ಅಂತೂ ಆ ದಿನ ಬಂದಿತಿಂದು ಸಂಭ್ರಮಿಸಿದೆವು!! ನಮ್ಮದೇ ಮನೆಯಲ್ಲಿ ಅಸಹಾಯಕರಾಗಿದ್ದೆವು!! ಶ್ರೀರಾಮ ಜನ್ಮಭೂಮಿ ಪಡೆಯುವಲ್ಲಿ ಗೆದ್ದೆವು!! ತಲೆಯೆತ್ತಲಿದೆ ಕೆಲ ಕಾಲದಲಿ ರಾಮಮಂದಿರ.. ರಾರಾಜಿಸುವನಿಲ್ಲಿ ರಘುವಂಶದ ರಾಮಚಂದಿರ!! ನೆನೆದುಕೊಂಡರೇ ಅದೇನೋ ಮನದಲಿ ಪುಳಕ.. ಹರಸಬೇಕು ನಮ್ಮನೆಲ್ಲ...

ಕವನ: ಒಪ್ಪಿಕೊ ಕೃಷ್ಣ

ಒಪ್ಪಿಕೊ ಕೃಷ್ಣ ಮನೆ ಅಂಗಳದಿ ಹೆಜ್ಜೆಗಳ ಹಾಕಿ ಹೃದಯ ಮಂಟಪದಿ ಬಾ ಎನ್ನುತ ಸುದಾಮನ ಬೆಲ್ಲ ಅವಲಕ್ಕಿ ತರತರದ ಉಂಡಿಗಳ ಮೊಸರು ಕಡೆದು ತೆಗೆದ ಬೆಣ್ಣೆಯ ಆಕಳ ನೊರೆ ಹಾಲು ಮಾನಸ ಪೂಜೆಯ ಮಾಡಿ ಅಪಿ೯ಸುತಿಹೆನು ಒಪ್ಪಿಕೋ ಕೃಷ್ಣ ಚಿನ್ನದ ತೊಟ್ಟಿಲ ಕಟ್ಟಿ ನಿನ್ನ ಮಲಗಿಸಿ ಹಾಡಿ ತೂಗುವೆನು ಯಶೋದೆಯಾಗಿ ಎನ್ನ ಹೃದಯ ಸಿಂಹಾಸನದಿ ವಿರಾಜಮಾನ ಆಗು ಬಾ ಕೃಷ್ಣ. ರಾಧಾ ಶಾಮರಾವ

ಕವನ: ನಿರಾಶ್ರಿತರಿಗೆ ಕೈ ಜೋಡಿಸೋಣ..

*ನಿರಾಶ್ರಿತರಿಗೆ ಕೈ ಜೋಡಿಸೋಣ..* ಕೊರಗಬೇಡ,ಕರಗಬೇಡ ದೇವರ ದೂಷಿಸಲೂ ಬೇಡ ಪ್ರವಾಹ, ಭೂಕಂಪ, ರೋಗ-ರುಜಿನಗಳು ನೆಂಟರಂತೆ,ಬಯಸದಿದ್ದರೂ ಬಂದೇ ಬರುವವು.... ಅಂದು ನಮ್ಮ ಅಜ್ಜ-ಅಜ್ಜಿಯರ ದಿನಗಳಲಿ ರಾಕ್ಷಸನಾಗಿ ಕಾಡಿತ್ತು ಪ್ಲೇಗ್, ಸಿಡುಬು, ಕಾಲರಾ, ನಮ್ಮಷ್ಟು ವಿಧ್ಯೆ ಕಲಿಯದಿದ್ದರೂ,ಬುದ್ದಿವಂತರು ಊರ ತ್ಯಜಿಸಿ,ಹೊಲ-ಗದ್ದೆಗಳಲಿ ಗುಡಿಸಲು ಕಟ್ಟಿ, ಸಾಮಾಜಿಕ ಅಂತರ ರೂಪಿಸಿ,ಜೀವ ಕಾಪಾಡಿಕೊಳ್ಳುತ್ತಿದ್ದರು ಅಂದಿನ ಜನ..... ಕೃಷಿ ಯ ಸ್ವರ್ಗ ನೈಲ್ ನದಿಯ ಪ್ರವಾಹಕೆ ಹರಪ್ಪ-ಮೊಹೆಂಜೊದಾರೊ ಸ್ಮಶಾನವಾದವು, ಪುರಾತನ ನಾಗರೀಕತೆ ಮಣ್ಣುಪಾಲಾಗಿತ್ತು, ಆದರೂ ಮಾನವ ಸಮಾಜ ಬದುಕುಳಿಯಲಿಲ್ಲವೇ !!! ಚಂದ್ರನ ಮೇಲೇರಲಿಲ್ಲವೇ...

ಗಜಲ್ ಗಳು

ರೇಷ್ಮಾ ಕಂದಕೂರ,ಮಂಡಲಗಿರಿ ಪ್ರಸನ್ನ...... ಹಸಿವಿನಿಂದ ಕಂಗೆಟ್ಟವರ ತೊಳಲಾಟ ನೋಡದಾಗಿದೆ ಕೃಶ ದೇಹದ ಅಧೋಗತಿಯ ಪರಿಸ್ಥಿತಿ ನೋಡದಾಗಿದೆ ಕಮರಿದೆ ಭರವಸೆಯ ಬೆಳಕು ಮಂದಾಗ್ನಿಯಲಿ ಹಣೆಬರಹದ ಕ್ರೂರತನ ಮದವೇರಿದನು ನೋಡದಾಗಿದೆ ತುತ್ತಿನ ಚೀಲ ತುಂಬಿಸಲು ಕಗ್ಗಂಟಾಗಿ ಹೋಗಿದೆ ಆ ದೇವನ ದೂಷಿಸುತ ದಿನ ದೂಡುವದನು ನೋಡದಾಗಿದೆ ತಿಂದು ತೇಗಿ ಬಿಸಾಕುವ ಜನಕೆ ತಿಳಿಯಬಾರದೇ ಕೊಳ್ಳುಬಾಕ ಮನೋಭಾವದಿ ಮೆರೆಯುವವರ ನೋಡದಾಗಿದೆ ಪರಿಹಾರಕೆ ರೇಷಿಮೆಯ ಮನ ಮರುಗಿ ತಡಕಾಡಿದೆ ಪಿಷ್ಟ ಹೊತ್ತು ಕುಚೇಷ್ಟೆ ಮಾಡುವವರ...

ಭಾನುವಾರದ ಕವನಗಳು

ಛತ್ರಿಗಳು ಛತ್ರಿಗಳು ಸಾರ್ ನಾವು ಛತ್ರಿಗಳು ಕತ್ರಿಗಳಿಗೆ ಛತ್ರಿ ಹಿಡಿಯುವ ಛತ್ರಿಗಳು ಸಾರ್ ನಾವು ಛತ್ರಿಗಳು ಬಡತನದ ಬಿಸಿಲಿನಲ್ಲಿ ಸುಟ್ಟುಕೊಂಡರು ದುಃಖದ ಮಳೆಯಲ್ಲಿ ಒದ್ದೆಯಾದರು ಕತ್ರಿಗಳಿಗೆ ಛತ್ರಿ ಹಿಡಿಯುವ ಛತ್ರಿಗಳು ಸಾರ್ ನಾವು ಛತ್ರಿಗಳು ಕತ್ರಿಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ಛತ್ರಿ ಚಾಮರ ಹಿಡಿದು ಬಹು ಪರಾಕ್ ಹೇಳುವ ಛತ್ರಿಗಳು ಸಾರ್ ನಾವು ಛತ್ರಿಗಳು ಛತ್ರಪತಿಗಳಿಗಾದರು ಇದ್ದವು ಶ್ವೇತಛತ್ರಿಗಳು ಈ ಕತ್ರಿಪತಿಗಳಿಗೆ ನಾವೆ ಕಪ್ಪುಛತ್ರಿಗಳು ಛತ್ರಿಗಳು ಸಾರ್ ನಾವು ಛತ್ರಿಗಳು ಎಲ್ಲೆಂದರಲ್ಲಿ ಕೊಳೆತು ನಾರುವ ತಿಪ್ಪೆಯಲ್ಲಿ ಬೆಳೆಯುವ ಶ್ವಾನಛತ್ರಿಗಳಂಥ ಛತ್ರಿಗಳು ಸಾರ್ ನಾವು ಛತ್ರಿಗಳು ನಮ್ಮೆಲ್ಲರ ಮೇಲೊಂದು ನೀಲಿಛತ್ರಿ ಇದೆಯೆಂಬುದು ಮರೆತವರು ಛತ್ರಿಗಳು ಸಾರ್ ನಾವು ಛತ್ರಿಗಳು ಎನ್.ಶರಣಪ್ಪ ಮೆಟ್ರಿ ಗಂಗಾವತಿ ಹಲ್ಲಿಗಳು ಹಲ್ಲಿಗಳಿಗೆ ಗೋಡೆಗಳೆ ಆಶ್ರಯಸ್ಥಾನ ಗೋಡೆಗಳ ಮೇಲೆ ಅವುಗಳ ಜೀವನ ಹುಳಹುಪ್ಪಟೆಗಳನ್ನು ಕಳ್ಳಹೆಜ್ಜೆಹಾಕಿ ಗುಳುಮ್ಮನೆ ನುಂಗಿಬಿಡುವವು ಯಾರಾದರು ಹಿಡಿಯಲು ಹೋದರೆ ಬಾಲಕಳಚಿಕೊಟ್ಟು ತಪ್ಪಿಸಿಕೊಳ್ಳುವವು ಅವುಗಳು ಮೈಮೇಲೆ ಉಚ್ಚೆಹೊಯ್ದರೆ ಆಮ್ಲೀಯ ಮೂತ್ರದಿಂದ ಚರ್ಮದ ಮೇಲೆ ಬೊಬ್ಬೆಗಳೇಳುವವು ಅಡಿಗೆಯಲ್ಲಿ...
- Advertisement -

Latest News

ಹನಿಗವನಗಳು

ಹನಿಗವನಗಳು 1) ಸುಳ್ಳುಗಾರರು ಹತ್ತು ನಾಲಿಗೆಯ ರಾವಣ ಹೇಳಲಿಲ್ಲ ಒಂದು ಸುಳ್ಳು ಒಂದೇ ನಾಲಿಗೆಯ ರಾಜಕಾರಣಿ ಹೇಳುತ್ತಾನೆ ದಿನಕ್ಕತ್ತು ಸುಳ್ಳು! 2) ಶೀಲಾ ನೆರೆಮನೆ ಶೀಲಾ ಪರ ಪುರುಷರೊಡನೆ ಸೇರಿ ಹೆಸರು ಕೆಡಿಸಿಕೊಂಡಳು 3) ಟಿವಿ ಹಾವಳಿ ಮನೆಯಲ್ಲಿ ಟಿವಿ ಮುಂದೆ ಸದಾ ಇರುವ ವಿದ್ಯಾ ರ್ಥಿಗಳು ಶಾಲೆಯಲ್ಲಿ ಹಿಂದೆ ಬೀಳುವರು. 4) ವಾಸ್ತವ ಕಟ್ಟುವವು...
- Advertisement -
close
error: Content is protected !!
Join WhatsApp Group