ಸುದ್ದಿಗಳು

ನೂರೊಂದು ಗಣಪತಿ ದೇವಾಲಯ ಮೈಸೂರು

ಅಂದ ಚೆಂದದ ಸುಂದರ ನಗರವೆನಿಸಿದ ಮೈಸೂರು, ತನ್ನ ಪ್ರಾಚೀನ ಸಾಂಸ್ಕೃತಿಕ ಸಂಪತ್ತಿನಿಂದ, ಜಗದ್ವಿಖ್ಯಾತ ದಸರಾ ವೈಭವದಿಂದ ಪ್ರವಾಸಿಗರ ಸ್ವರ್ಗವೆನಿಸಿದೆ. ಇಂಥ ಮೈಸೂರಲ್ಲಿ ನವರಾತ್ರಿ ವೈಭವ ಒಂದೆಡೆಯಾದರೆ ಭಾದ್ರಪದ ಮಾಸದ ಗಣೇಶ ಹಬ್ಬದ ಸಡಗರ ಕೂಡ ವಿಶಿಷ್ಟವಾದದ್ದು. ಇಲ್ಲಿನ ಅಗ್ರಹಾರದ ತ್ಯಾಗರಾಜರ ವೃತ್ತದಲ್ಲಿರುವ ನೂರೊಂದು ಗಣಪತಿ ದೇಗುಲ ಕಳೆದ ೬೦ ವರ್ಷಗಳ ಇತಿಹಾಸ ತನ್ನೊಡಲಲ್ಲಿ ಅಡಗಿಸಿಕೊಂಡು ಇಂದಿಗೂ...

ಛಾಯಾಗ್ರಹಣದಲ್ಲಿ ಸಾಧನೆಗೆ ಪ್ರಶಸ್ತಿ

ಸವದತ್ತಿ: ಕರ್ನಾಟಕ ಛಾಯಾಗ್ರಾಹಕರ ಸಂಘ ಕೆಪಿಎ ಬೆಂಗಳೂರು ಇವರು ಆಯೋಜಿಸಿದ ಡಿಜಿ ಇಮೇಜ್-೨೦೨೩ ಕಾರ್ಯಕ್ರಮದಲ್ಲಿ ಅನೇಕ ಛಾಯಾಗ್ರಾಹಕರನ್ನು ಸನ್ಮಾನಿಸಿ ಅವರನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಮಾಡಿರುವುದು ಶ್ಲಾಘನೀಯವಾದ ಕಾರ್ಯವಾಗಿದೆ. ಬೆಳಗಾವಿ ಜಿಲ್ಲೆಯ ಪ್ರತಿಯೊಂದು ತಾಲೂಕಿನಿಂದ ಛಾಯಾಗ್ರಾಹಕರಾಗಿ ಅವರು ಸಲ್ಲಿಸಿದ ಸೇವೆ ಮತ್ತು ಛಾಯಾಗ್ರಾಹಕರಿಗೋಸ್ಕರ ಅವರು ಮಾಡಿದಂತ ಸಹಾಯ ಸಹಕಾರವನ್ನು ಗಮನಿಸಿ ಅವರಿಗೆ ಪ್ರಶಸ್ತಿಯೊಂದಿಗೆ ಗೌರವಾರ್ಪಣೆ ಸಲ್ಲಿಸಲಾಗಿದೆ. ಬೆಂಗಳೂರಿನ...

ಶನಿ ದೇವರನ್ನು ಗೆದ್ದ ಗಣಪತಿಯ ರೋಚಕ ಕಥೆ

ಎಲ್ಲರ ರಾಶಿಗೆ ಪ್ರವೇಶ ಪಡೆದು,  ಕಷ್ಟ ಸುಖಗಳನ್ನು  ನೀಡಿದ ಶನಿದೇವರಿಗೆ ಗಣೇಶನನ್ನು ಕಾಡಲು ಸಾಧ್ಯವಾಗಲಿಲ್ಲ ಏಕೆ.? ಸಗಣಿಗೆ ಗರಿಕೆ ಹುಲ್ಲನ್ನು ಯಾಕೆ ಇಡ್ತಾರೆ? ಈ ಪೌರಾಣಿಕ ಕಥೆ ಸಂಪೂರ್ಣ ಓದಿ 🔸ಒಮ್ಮೆ ವಿಹಾರಕ್ಕೆಂದು ಹೊರಟ ಗಣೇಶನಿಗೆ ಆಕಸ್ಮಿಕವಾಗಿ ಎದುರಾಗಿದ್ದು ಈ ಶನಿರಾಜ. ಮುದ್ದು ಮುದ್ದಾಗಿ ಕಾಣುತ್ತಿದ್ದ ಗಣಪತಿಯನ್ನು ನೋಡಿದ ಶನಿರಾಜನಿಗೆ ಗಣಪತಿಯನ್ನೊಮ್ಮೆ ಹಿಡಿಯುವ ಮನಸ್ಸಾಗಿ ಗಣಪತಿಯ ಕಡೆ ಹೊರಟ. ಶನಿದೇವರು...

ಕವನ: ಪ್ರೇಮ ಲೋಕದ ಬಾಗಿಲಲಿ

ಪ್ರೇಮ ಲೋಕದ ಬಾಗಿಲಲಿ ನೀ ಇಲ್ಲದಿರೆ ಏನೋ ಕಳೆದ ಭಾವ ಈ ಮನದೊಳು ನನ್ನ ಮನದ ಸವಿ ನೆನಪು ನೀ ನೆನಪಾಗಿ ಕಾಡುತಿಹೆ ನಲ್ಲೆ ಅಂತರಂಗದಿ ಹುದುಗಿಹ ಮೋಹ ನಿನ್ನ ನೆನಪ ಮತ್ತೆ ಮತ್ತೆ ಸೆಳೆಯುತಿಹುದು ನಮ್ಮೊಲವ  ಭಾವಕ್ಕೆ ಬರ ಬಂದ ಹಾಗೆ ಏಕೀ ರೀತಿ ಕಾಡುತಿರುವೆ ನಿರೀಕ್ಷೆ ಯ ಬದುಕಿನಲಿ ಎಂದಾದರೂ ಸೇರಬಹುದು ನಾವು ಎಂಬ ಆಶಾಭಾವ ಮನಸಲಿ ಉಸಿರಲ್ಲಿ ಹುದುಗಿರುವ ನಿನ್ನ ನೆನಪು ಪ್ರೇಮ ಲೋಕದ ಬಾಗಿಲಲಿ ಕಾಯುತಿರುವೆ ನಿನಗಾಗಿ ಈ ವಯಸಿಗೊಂದು...

ಬಿಜೆಪಿ ಅರಭಾವಿ ಮಂಡಲದಿಂದ ಸೇವಾ ಪಾಕ್ಷಿಕ ಅಭಿಯಾನಕ್ಕೆ ಚಾಲನೆ

ಮೂಡಲಗಿ: ನರೇಂದ್ರ ಮೋದಿಯವರ ಜನುಮದಿನದ ಅಂಗವಾಗಿ ವಿಶೇಷ ಗೌರವ ಅರ್ಪಿಸುವ ಪ್ರಯುಕ್ತ ದೇಶಾದ್ಯಂತ ಭಾರತೀಯ ಜನತಾ ಪಕ್ಷದ ವತಿಯಿಂದ "ಸೇವಾ ಪಾಕ್ಷಿಕ" ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ ಹೇಳಿದರು ರವಿವಾರದಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ, ಬಿಜೆಪಿ ಅರಭಾವಿ ಮಂಡಲವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿಯಾನಕ್ಕೆ, ಬಿಜೆಪಿ ಅರಭಾವಿ ಮಂಡಲ ಅಧ್ಯಕ್ಷ...

ಶಿಕ್ಷಕ ಆರೋಗ್ಯಕರ ಸಮಾಜದ ಹಿತಚಿಂತಕ: ಹಾಸಿಂಪೀರ ವಾಲಿಕಾರ

ಸಿಂದಗಿ: ಆರೋಗ್ಯಕರ, ಸಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಅದಕ್ಕೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ. ಒಬ್ಬ ಆದರ್ಶ ಶಿಕ್ಷಕ ಸಾವಿರಾರು ವಿದ್ಯಾರ್ಥಿಗಳ ಬಾಳ ದೀವಿಗೆಯಾಗಿ ವಿದ್ಯಾರ್ಥಿಗಳ ಯಶಸ್ವಿನ ಪ್ರತಿಬಿಂಬವಾಗಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು. ಪಟ್ಟಣದ ಜ್ಞಾನ ಭಾರತಿ ಪ್ರೌಢ...

Sindagi: ವಿಶ್ವ ಆತ್ಮಹತ್ಯೆ ತಡೆ ದಿನ ಆಚರಣೆ

ಸಿಂದಗಿ: ಮಾನಸಿಕ ಖಾಯಿಲೆಯಿಂದ ಬಳಲುತ್ತಿರುವವರು ತಮ್ಮ ತಮ್ಮ ಕುಟುಂಬದ ಸದಸ್ಯರ ಜೊತೆ ಸಮಸ್ಯೆಗಳನ್ನು ಅಥವಾ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಿ ಹಾಗೂ ಒಳ್ಳೆಯವರ ಸ್ನೇಹ ಬೆಳೆಸಿಕೊಳ್ಳಿ. ಹೆಣ್ಣು ಮಕ್ಕಳು ಸಾಯಂಕಾಲದ ಹೊತ್ತು ದಾರಾವಾಹಿ ನೋಡುವುದನ್ನು ಕಡಿಮೆ ಮಾಡಿ ಅಕ್ಕ ಪಕ್ಕದ ಮನೆಯವರ ಜೊತೆ ತಮ್ಮ ದುಃಖ, ನೋವು ಹಾಗೂ ಸಮಸ್ಯೆಗಳನ್ನು ಹಂಚಿಕೊಳ್ಳುವುದರಿಂದ ಮಾನಸಿಕ ಖಿನ್ನತೆಯನ್ನು ಕಡಿಮೆ...

ಲಿಂಗಾಯತ ಸಂಘಟನೆ ವತಿಯಿಂದ ‘ವಚನ ಚಿಂತನ’ ಕಾರ್ಯಕ್ರಮ

ವಚನಗಳಲ್ಲಿಯ ವಾಸ್ತವಿಕತೆ ಅರಿತು ಇನ್ನಾದರೂ ಬದುಕು ಸಾಗಿಸೋಣ- ಸಾಹಿತಿ ವೀರಭದ್ರ ಅಂಗಡಿ ಅಭಿಮತ ಬೆಳಗಾವಿ: ಸಾಹಿತ್ಯದ ಪ್ರಕಾರಗಳಲ್ಲಿಯೇ ಶ್ರೇಷ್ಠತೆಯನ್ನು ಮೆರೆದಿರುವ ವಚನ ಸಾಹಿತ್ಯ 12 ನೇ ಶತಮಾನದಲ್ಲಿಯೇ ವಚನಗಳಲ್ಲಿ ಭವಿಷ್ಯದ ಸರ್ವಕಾಲಿಕ ಸತ್ಯ ಮತ್ತು ಜೀವನದ ತತ್ವಗಳನ್ನು ಅರ್ಥಯುತವಾಗಿ ಕಟ್ಟಿಕೊಟ್ಟಿದೆ. ಆ ವಚನ ಸಾಹಿತ್ಯದ ಸಾರಯುಕ್ತ ವಾಸ್ತವಿಕತೆಯ ಸತ್ಯವನ್ನು ಇನ್ನಾದರೂ ನಾವು ಪಾಲಿಸುತ್ತಾ ಬದುಕನ್ನು ಪಾವನಗೊಳಿಸಬೇಕಿದೆ...

ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ

ಮೂಡಲಗಿ: ತಾಲೂಕಿನ ನಲ್ಲಾನಟ್ಟಿ ವಲಯದ ಉದಗಟ್ಟಿ ಕಾರ್ಯಕ್ಷೇತ್ರದಲ್ಲಿ ಈ ದಿನ ಉದ್ದಮ್ಮಾದೇವಿ ಜ್ಞಾನವಿಕಾಸ ಕೇಂದ್ರ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅಥಣಿ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಶ್ರೀಮತಿ ನಾಗರತ್ನ ಹೆಗಡೆ ಇವರು ಜ್ಞಾನ ವಿಕಾಸ ಕೇಂದ್ರದ ಮಹತ್ವ, ಉದ್ದೇಶ, ಜ್ಞಾನವಿಕಾಸ ಕೇಂದ್ರದ ಶಿಸ್ತು  ಕೇಂದ್ರದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳ ಬಗ್ಗೆ ಹಾಗೂ...

ಸಕಲ ಜೀವರಾಶಿಗಳಿಗೆ ಆರೋಗ್ಯವೇ ಮಹತ್ವದ್ದು – ಸಿಪಿಐ ಬ್ಯಾಕೂಡ

ಮೂಡಲಗಿ: ಸಮಾಜದಲ್ಲಿ ಉತ್ತಮ ಆರೋಗ್ಯವಿದ್ದಾಗ ಮಾತ್ರ ಸಕಲವನ್ನು ಸಾಧಿಸಲು ಸಾಧ್ಯವಾಗುವದು. ಆರೋಗ್ಯ ಕಡೆ ನಿಷ್ಕಾಳಜಿ ಹೊಂದಿ ಮಾನಸಿಕ, ದೈಹಿಕ ವಿವಿಧ ಕಸರತ್ತುಗಳನ್ನು ಮರೆತಾಗ ಜೀವನದಲ್ಲಿ ದೊಡ್ಡ ಮಟ್ಟದ ದಂಡ ಕಟ್ಟುವ ಅನಿವಾರ್ಯತೆಯಾಗುವದು ಎಂದು ಅಂತಾರಾಷ್ಟ್ರೀಯ ಐರನ್ ಮ್ಯಾನ್ ಪ್ರಶಸ್ತಿ ವಿಜೇತ ಸಿಪಿಐ ಶ್ರೀಶೈಲ ಬ್ಯಾಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಶನಿವಾರದಂದು ಪಟ್ಟಣದ ಬಿಇಒ ಕಾರ್ಯಾಲಯದಲ್ಲಿ ಜರುಗಿದ ಸಾಧಕರ...
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -
close
error: Content is protected !!
Join WhatsApp Group