ಸುದ್ದಿಗಳು

ಜಾನಪದ ಗಾರುಡಿಗ

ವ್ಯಾಮೋಹವಿಲ್ಲದ ಪ್ರೇಮ ನಿರ್ಭರವಿರಲಿ, ಭೀಮ ಸಾಹಸವಿರಲಿ, ಹಗೆತನವನಳಿದು ನೇಮನಿಷ್ಠೆಗಳಿರಲಿ, ಡಂಬಕರಿಣತೆ ಬಿಟ್ಟು ಸೌಮ್ಯತೆ ಎಲ್ಲೆಡೆ ಇರಲಿ ಮಂಕು ತಿಮ್ಮ. ಎಂಬ ಕವಿ ವಾಣಿ ನಮ್ಮ ಈಶ್ವರ ಚಂದ್ರ ಶಿವಪುತ್ರಪ್ಪ ಬೇಟಗೇರಿಯವರನ್ನು ಕಂಡು ಹೇಳಿದಂತಿದೆ.ಈಶ್ವರ ಚಂದ್ರ ಬೇಟಗೇರಿ ತಮ್ಮ ಹೆಸರಿಗೆ ತಕ್ಕಂತೆ ಶಾಂತ ಸ್ವಭಾವದ, ಮುಗ್ದತೆ ತುಂಬಿದ ಚಂದ್ರನ ಬೆಳದಿಂಗಳಿನಂತೆ ಎಲ್ಲರಲ್ಲೂ ತಂಪು ಸೂಸುವ, ಹಾಲಲ್ಲಿ ಸಕ್ಕರೆ ಬೆರೆತಂತೆ...

ಕೂಡಲಸಂಗಮದಲ್ಲಿ ಜರುಗಲಿರುವ 36ನೇ ಶರಣ ಮೇಳದ ಪ್ರಚಾರ ಸಭೆ

ಶರಣ ಮೇಳ ಕೇವಲ ಜಾತ್ರೆಯಲ್ಲ ಅನುಭವ ಹಂಚಿ  ಅನುಭಾವ ಪಡೆದು ಪುನೀತರಾಗುವ ಮಹಾಮೇಳ ಪ್ರತಿ ವರ್ಷ ಕೂಡಲಸಂಗಮದಲ್ಲಿ ಜರುಗುವ ಶರಣ ಮೇಳ ಬಂದು ಹೋಗುವ ಜನಕೂಡಿಸುವ ಜಾತ್ರೆಯಲ್ಲ. ಅನುಭಾವ ಹಂಚುವ,ಹೊಸತನ್ನು ಅನುಭವಿಸುವ,ನಮ್ಮ ಜೀವನ ಶೈಲಿಯನ್ನು ತಿದ್ದಿಕೊಳ್ಳುವ, ನಮ್ಮನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವ ಮಹಾಮೇಳವಾಗಿದೆ ಎಂದು ಶರಣ ಮೇಳದ ಕಾರ್ಯಾಧ್ಯಕ್ಷರು ಕೂಡಲಸಂಗಮ ಪೀಠದ ಮಹಾ ಜಗದ್ಗುರುಗಳು ಆದ  ಶ್ರೀ....

ರೈತರ ಕಬ್ಬಿಗೆ 50 ರೂ ಘೋಷಣೆ ರಾಜ್ಯ ಸರ್ಕಾರದ ನಿರ್ಧಾರ; ಸಂಸದ ಕಡಾಡಿ ಸ್ವಾಗತ

ಮೂಡಲಗಿ: 2022-23 ನೇ ಸಾಲಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಪ್ರತಿ ಟನ್ನಿಗೆ ಹೆಚ್ಚುವರಿಯಾಗಿ 50 ರೂ. ಕಾರ್ಖಾನೆಯವರು ಕೊಡಲು ಆದೇಶಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಸ್ವಾಗತಿಸಿದ್ದಾರೆ.ನವದೆಹಲಿಯಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು ಎಥನಾಲ್ ಉತ್ಪಾದನೆ ಸೇರಿದಂತೆ ಇತರೆ ಉಪ ಉತ್ಪನ್ನಗಳ  ಮಾರಾಟದಿಂದ  ಬರುವ ಆದಾಯದಲ್ಲಿ ರೈತರಿಗೆ ನೀಡುವಂತೆ...

ಡಾ.ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಣೆ

ಸಿಂದಗಿ: ಪ್ರತಿಯೊಂದು ಮಹಿಳೆಯರಿಗೂ ಕೂಡಾ ಮುಂದೆ ಬರಲು ಪ್ರತಿಯೊಂದು ಕ್ಷೇತ್ರದಲ್ಲಿ ಭಾಗವಹಿಸುವಂತೆ ಮಾಡಿರುವುದು ನಮ್ಮ ಸಂವಿಧಾನ ಇದನ್ನು ಉಳಿಸಿಕೊಂಡು ಹೋಗುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಂಗಮ ಸಂಸ್ಥೆಯ ಸಹ ನಿರ್ದೇಶಕರಾದ ಸಿಸ್ಟರ್ ಸಿಂತಿಯಾ ಡಿಮೆಲ್ಲೊರವರು ಹೇಳಿದರು.ಪಟ್ಟಣದ ಸಂಗಮ ಸಂಸ್ಥೆಯಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ ರವರ ಪರಿನಿರ್ವಾಣ ದಿನದ ಅಂಗವಾಗಿ ಮಹಿಳೆಯರಿಗೆ ಉದ್ಯಮಶೀಲತಾಭಿವೃದ್ಧಿ...

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ವತಿಯಿಂದ ಸಿಪಿಐ ದಂಪತಿಗಳಿಗೆ ಶೃದ್ಧಾಂಜಲಿ

 ಸಿಂದಗಿ: ಪೊಲೀಸ ಅಧಿಕಾರಿಗಳೆಂದರೆ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಸಂದರ್ಭದಲ್ಲಿಯೂ ಸೌಜನ್ಯತೆಯಲ್ಲಿ ಅಹವಾಲನ್ನು ಸ್ವೀಕರಿಸಿ ಸಾಮಾನ್ಯರಂತೆ ಸಾಮಾನ್ಯರಾಗಿ 11 ತಿಂಗಳ ಸೇವೆ ಸಲ್ಲಿಸಿದ ಒಬ್ಬ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯನ್ನು ನಾವು ಕಳೆದುಕೊಂಡಿದ್ದು ಪೊಲೀಸ್ ಇಲಾಖೆಗೆ ತುಂಬಲಾರದ ನಷ್ಟವೇ ಸರಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷ ಪಂಡಿತ ಯಂಪೂರೆ ಹೇಳಿದರು.ಪಟ್ಟಣದ ಪ್ರವಾಸಿ...

ಈಗಿನಿಂದಲೇ ತಟ್ಟಿದ ಚುನಾವಣೆಯ ಬಿಸಿ

ಬೀದರನ ಭಾಲ್ಕಿಯಲ್ಲಿ ತಂದೆ - ಮಗನ ವಿಭಿನ್ನ ಹೋರಾಟ ಬೀದರ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ  ಹತ್ತಿರ ಬರುತ್ತಿದ್ದಂತೆ ಜಿಲ್ಲೆಯ  ಭಾಲ್ಕಿ ಕ್ಷೇತ್ರವು ಎರಡು ರೀತಿಯ ಪ್ರಕರಣಗಳಿಂದ ಸುದ್ದಿಗೆ ಗ್ರಾಸವಾಯಿತು.ಒಂದು ಕಡೆ ರಾಜ್ಯ ಸರ್ಕಾರದ ವಿರುದ್ಧ ಯುವಕರ ಪ್ರತಿಭಟನೆಯ ಕೂಗು ಕೇಳಿ ಬರುತ್ತದೆ. ಇನ್ನೊಂದು ಕಡೆ ಇದೇ ಭಾಲ್ಕಿ ಕ್ಷೇತ್ರದಲ್ಲಿ ಕೆಲವು ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿ...

ಭೀಕರ ಅಪಘಾತ; ಅಣ್ಣ ತಂಗಿ ದುರ್ಮರಣ

ಮೂಡಲಗಿ: ಎದುರಿಗೆ ಬರುತ್ತಿದ್ದ ಎರ್ಟಿಗಾ ಕಾರಿಗೆ ಆಗಬಹುದಾದ ಅಪಘಾತವನ್ನು ತಪ್ಪಿಸಲು ತಮ್ಮ ಕಾರನ್ನು ಪಕ್ಕದ ಹೊಲದೊಳಗೆ ನುಗ್ಗಿಸಿದ ಪರಿಣಾಮ ಉಂಟಾದ ಭೀಕರ ಅಪಘಾತದಲ್ಲಿ ರಾಯಬಾಗ ತಾಲೂಕಿನ ಅಣ್ಣ ತಂಗಿ ಸಾವನ್ನಪ್ಪಿರುವ ಘಟನೆ ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ತಾಲೂಕಾ ಪಂಚಾಯತ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಾಯಬಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದ...

ಗಡಿ ವಿವಾದ ಸೃಷ್ಟಿಸಿದ ಮಹಾರಾಷ್ಟ್ರ ಸರ್ಕಾರಕ್ಕೆ ಶಾಕ್

ಮಹಾರಾಷ್ಟ್ರ ಗಡಿ ಭಾಗದ ಜನರಿಂದ ಮಹಾ ಸರ್ಕಾರದ ವಿರುದ್ಧ ಆಕ್ರೋಶ ಬೀದರ: ಮಹಾರಾಷ್ಟ್ರದ ಮಂತ್ರಿಗಳೇ ಬೆಳಗಾವಿ ಭೇಟಿ ಬದಲು ನಿಮಗೆ ಮತ ನೀಡಿರುವ ಜನತೆಯನ್ನು ನೋಡಿ ಇಲ್ಲಿನ ಜನರ ಸಮಸ್ಯೆ ಬಗೆಹರಿಸಿ ಎಂದು ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರ ಮಾಡುವ ಮೂಲಕ ಕರ್ನಾಟಕಕ್ಕೆ ಹೋಗಲು ಅನುಮತಿ ನೀಡಿ ನಮಗೆ ಕರ್ನಾಟಕ ಬೇಕು...

ಮರಾಠಿ ಪುಂಡರಿಗೆ ಎಚ್ಚರಿಕೆ

ಬೀದರ - ಮಹಾರಾಷ್ಟ್ರದ ಶಿವಸೇನೆ ಹಾಗೂ ಎಮ್ಈಎಸ್ ಪುಂಡರು ಇದೇ ರೀತಿ ಪುಂಡಾಟಿಕೆ ನಡೆಸುತ್ತಿದ್ದರೆ ಕರ್ನಾಟಕದ ಏಳು ಕೋಟಿ ಕನ್ನಡಿಗರು ತಕ್ಕ ಉತ್ತರ ಕೊಡಲು ಸಮರ್ಥವಾಗಿದ್ದಾರೆ ಎಂದು ಪ್ರಜಾಶಕ್ತಿ ಪಕ್ಷದ ರಾಜ್ಯ ಅಧ್ಯಕ್ಷ  ಡಾ. ವಿಶ್ವನಾಥ ಎಚ್ಚರಿಕೆ ಕೊಟ್ಟಿದ್ದಾರೆ.ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಕ್ಯಾತೆ ವಿಚಾರವಾಗಿ ಮಾತನಾಡಿದ ಅವರು, ಕನ್ನಡಿಗರು ಪುಂಡ ಮರಾಠಿಗರನ್ನು ಮಹಾರಾಷ್ಟ್ರದ...

ನಿಪ್ಪಾಣಿ ನಗರಸಭೆ ಕರ್ನಾಟಕದ್ದೋ ಮರಾಠಿಗರದ್ದೋ?

೩೧ ವರ್ಷಗಳ ಹಿಂದೆಯೇ ಭಗವಾಧ್ವಜ ಹಾರಿಸಲು ಠರಾವು!! ಕರ್ನಾಟಕ - ಮಹಾರಾಷ್ಟ್ರದ ಗಡಿಭಾಗದಲ್ಲಿರುವ ನಿಪ್ಪಾಣಿ ನಗರವು ಯಾವ ರಾಜ್ಯಕ್ಕೆ ಸೇರಿದೆಯೆಂಬ ಬಗ್ಗೆ ಅನುಮಾನ ಮೂಡುತ್ತಿದೆ. ಯಾಕೆಂದರೆ ಈ ನಗರಸಭೆಯ ಕಟ್ಟಡದ ಮೇಲೆ ಮರಾಠಿಗರ ಸಂಕೇತವಾದ ಭಗವಾಧ್ವಜ ಕಳೆದ ೩೧ ವರ್ಷಗಳಿಂದ ಹಾರಾಡುತ್ತಿದೆ ಆದರೆ ನಮ್ಮ ಕನ್ನಡ ಹೋರಾಟಗಾರರಿಗಾಗಲಿ, ಕನ್ನಡದ ಅನ್ನ ಉಣ್ಣುತ್ತಿರುವ ನಿಪ್ಪಾಣಿ ನಾಗರಿಕರಿಗಾಗಲಿ, ಕನ್ನಡವೇ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group