spot_img
spot_img

ಭೀಕರ ಅಪಘಾತ; ಅಣ್ಣ ತಂಗಿ ದುರ್ಮರಣ

Must Read

- Advertisement -

ಮೂಡಲಗಿ: ಎದುರಿಗೆ ಬರುತ್ತಿದ್ದ ಎರ್ಟಿಗಾ ಕಾರಿಗೆ ಆಗಬಹುದಾದ ಅಪಘಾತವನ್ನು ತಪ್ಪಿಸಲು ತಮ್ಮ ಕಾರನ್ನು ಪಕ್ಕದ ಹೊಲದೊಳಗೆ ನುಗ್ಗಿಸಿದ ಪರಿಣಾಮ ಉಂಟಾದ ಭೀಕರ ಅಪಘಾತದಲ್ಲಿ ರಾಯಬಾಗ ತಾಲೂಕಿನ ಅಣ್ಣ ತಂಗಿ ಸಾವನ್ನಪ್ಪಿರುವ ಘಟನೆ ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ತಾಲೂಕಾ ಪಂಚಾಯತ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಾಯಬಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದ ದುಂಡಪ್ಪ ಅಡಿವೆಪ್ಪ ಬಡಿಗೇರ (೩೨) ಹಾಗೂ ಅವರ ಸಹೋದರಿ ಭಾಗ್ಯಶ್ರೀ ಕಂಬಾರ (೨೮) ಅಪಘಾತದಲ್ಲಿ ಮೃತಪಟ್ಟವರು.

ದುಂಡಪ್ಪ ಅವರು ತಮ್ಮ ಸಹೋದರಿಯ ಸೀಮಂತ ಕಾರ್ಯ ಮುಗಿಸಿಕೊಂಡು ಅವರನ್ನು ಕಾರಿನಲ್ಲಿ ಕರೆದುಕೊಂಡು ಬರುವಾಗ ಮೂಡಲಗಿ ಸಮೀಪ ನಿಪ್ಪಾಣಿ ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಎದುರಿಗೆ ಬಂದ ಎರ್ಟಿಗಾ ಕಾರು ತಪ್ಪಿಸಲು ತಮ್ಮ ಕಾರನ್ನು ಹೊಲದತ್ತ ತಿರುಗಿಸಿದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ.

- Advertisement -

ಅಪಘಾತದಲ್ಲಿ ಅಣ್ಣ ತಂಗಿಯರಿಬ್ಬರೂ ಮೃತಪಟ್ಟಿದ್ದು ಮೂಡಲಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group