- Advertisement -
ಸಿಂದಗಿ– ಪಟ್ಟಣದ ಎಚ್.ಜಿ.ಪದವಿ ಪೂರ್ವ ಮಹಾವಿದ್ಯಾಲಯದ ಸಮಾಜಶಾಸ್ತ್ರ ಉಪನ್ಯಾಸಕ ಶಾಂತುಲಾಲ ಶಂಕರ ಚವ್ಹಾಣ ಅವರು ಸಮಾಜಶಾಸ್ತ್ರ ವಿಭಾಗದಲ್ಲಿ ಮಂಡಿಸಿದ ಜಾಗತೀಕರಣದಲ್ಲಿ “ಲಂಬಾಣಿ ತಾಂಡಾಗಳು” ವಿಶೇಷವಾಗಿ ಆಶಿಹಾಳ ತಾಂಡಾದ ಕುರಿತು ಒಂದು ಸಮಾಜಶಾಸ್ರ್ತೀಯ ಅಧ್ಯಯನ (ರಾಯಚೂರ ಜಿಲ್ಲೆ) ಕುರಿತಾದ ಮಹಾಪ್ರಬಂಧಕ್ಕೆ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿದೆ. ಅವರಿಗೆ ಡಾ.ರವಿ ದಳವಾಯಿ ಅವರು ಮಾರ್ಗದರ್ಶನ ನೀಡಿದ್ದಾರೆ.
ಇವರಿಗೆ ಸಂಸ್ಥೆಯ ಅಧ್ಯಕ್ಷ ಅಶೋಕ ಮನಗೂಳಿ ಮತ್ತು ಆಡಳಿತ ಮಂಡಳಿಯ ಸದಸ್ಯರು ಹಾಗೂ ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ಮತ್ತು ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.