- Advertisement -
ಮೂಡಲಗಿ – ಪಟ್ಟಣದ ಯುವ ಗಾಯಕ ಪ್ರಜ್ವಲ್ ಪುಟಾಣಿ, ಇವನ ಸ್ವರ ಮಾಧುರ್ಯಕ್ಕೆ ಪ್ರೇಕ್ಷಕರು ಮನಸೋಲದವರೆ ಇಲ್ಲ.
ಈತನ ಗಾಯನ ಹಾಗೂ ಸಾಹಿತ್ಯದ ಹಿರಿಮೆಗೆ ಒಲಿದು ಬಂದ ಪ್ರಶಸ್ತಿ.
ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ತು ಆರ್.ಎನ್.ಶಟ್ಟಿ ಕ್ರೀಡಾಂಗಣದಲ್ಲಿ ನಡೆದ ಚೇತನ ಫೌಂಡೇಶನ್ ಕರ್ನಾಟಕ ಸಾಮ್ರಾಟ ಇವರು ಪ್ರಜ್ವಲ್ ಯವ ಗಾಯಕನನ್ನು ಗುರ್ತಿಸಿ, ಗಾನ ಗಂಧರ್ವ ಡಾllಪಂಡಿತ ಪುಟ್ಟರಾಜ ಕವಿ ಗವಾಯಿ,110ನೆಯ ಜಯಂತ್ಯುತ್ಸವದ ಅಂಗವಾಗಿ ಸಂಗೀತ ಸೌರಭ ಕಾರ್ಯಕ್ರಮದಲ್ಲಿ “ಪದ್ಮಭೂಷಣ ಪುಟ್ಟರಾಜ ಗವಾಯಿ ರಾಷ್ಟ್ರೀಯ ಪ್ರಶಸ್ತಿ” ನೀಡಿದರು.
- Advertisement -
ಮುಕ್ತ ಕವಿಗೋಷ್ಠಿ ಹಾಗೂ ಸಂಗೀತ ರಸದೌತಣ ಕಾರ್ಯಕ್ರಮ ಜರುಗಿತು. ರಾಜ್ಯದ ಬಹುತೇಕ ಸಾಧಕರ ಜೊತೆಯಲ್ಲಿ ಮೂಡಲಗಿ ಯುವ ತರುಣ ಗಾಯಕ ಪ್ರಜ್ವಲ್ ಪುಟಾಣಿಗೂ ಒಲಿದ ಭಾಗ್ಯ. ಡಾ.ವಿಜಯ ಜಂಬಗಿ ಸಮಾಜ ಸೇವಕರು ಬೆಳಗಾವಿ, ಚಂದ್ರಶೇಖರ ಮಾಡಲಗೇರಿ ಅಧ್ಯಕ್ಷರು ಚೇತನ ಫೌಂಡೇಷನ್ ಕರ್ನಾಟಕ ಇವರಿಂದ ಗಾಯನರಂಗದಲ್ಲಿ ಸಾಧನೆ ಮಾಡಿದವರಿಗೆ ಸತ್ಕರಿಸಿ, ಪ್ರಶಸ್ತಿ ನೀಡಿ ನಂತರ ಮಾತನಾಡಿದರು.