ಸಿಂದಗಿ: ವೃತ್ತಿ ಧರ್ಮ ಪಾಲನೆ ಪ್ರತಿಯೊಬ್ಬ ಕರ್ತವ್ಯವಾಗಲಿ – ಎಂದು ಮಾಜಿ ಇನ್ನರ್ವಿಲ್ ಕ್ಲಬ್ ಅಧ್ಯಕ್ಷ ನಾಗರತ್ನ ಮನಗೂಳಿ ಹೇಳಿದರು.
ನಗರದ ಓಂ ಶಾಂತಿ ಭವನದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಾಗೂ ತಾಲೂಕಾ ಆರೋಗ್ಯ ಇಲಾಖೆ ಇವರ ಸಹಯೋಗದಲ್ಲಿ ನಡೆದ ಆಶಾ ಕಾರ್ಯಕರ್ತೆಯರಿಗಾಗಿ ವೃತ್ತಿ ಕೌಶಲ್ಯ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಆಶಾ ಕಾರ್ಯಕರ್ತೆಯರು ಸಮಾಜದ ಭರವಸೆಯ ಬೆಳಕಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಶಾ ಎಂದರೆ ಆಸೆ,ಹಾರೈಕೆ, ಭರವಸೆಯಲ್ಲಿ ಪ್ರತಿ ವ್ಯಕ್ತಿಯ ಬದುಕಿಗೆ ಮತ್ತು ಸ್ವಾಸ್ತ್ಯ ಸಮಾಜದ ಸರ್ವತೋಮುಖ ಬೆಳವಣಿಗೆಯಲ್ಲಿ ಇವರ ಕಾರ್ಯ ಶ್ಲಾಘನೀಯವಾಗಿದೆ. ಜನಸೇವೆ ಅವಕಾಶ ಸಿಕ್ಕಾಗ ಬಿಡದೆ ಅದನ್ನ ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸಚೀನ ಉಟಗಿ ಮಾತನಾಡಿ, ಧರ್ಮ-ದೇವರುಗಳ ಪರಿಕಲ್ಪನೆಯಲ್ಲಿ ಪ್ರಕೃತಿದತ್ತ ತೋಟಗಾರಿಕೆ ಮತ್ತು ಅಧ್ಯಾತ್ಮ ಎರಡು ಒಂದೇ, ಅಧ್ಯಾತ್ಮ ಮನವನ್ನು ಅರಳಿಸಿದರೆ ಪ್ರಕೃತಿ ಹೂಗಳನ್ನ ಸಸಿಗಳನ್ನು ಅರಳಿಸುತ್ತದೆ ಹಾಗೆ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಅಧ್ಯಾತ್ಮದ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಿದರೆ, ಆಶಾ ಕಾರ್ಯಕರ್ತೆಯರು ಸಮಾಜದಲ್ಲಿ ಆರೋಗ್ಯ ಕಾಪಾಡುವ ಮೂಲಕ ರೋಗ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಿದ್ದಾರೆ ಎಂದರು.
ಬಾಗಲಕೋಟೆ ಸೇವಾ ಕೇಂದ್ರದ ಸಂಚಾಲಕಿ ಬಿ ಕೆ ನಾಗರತ್ನ, ಅಲಮೇಲ ಸೇವಾ ಕೇಂದ್ರದ ಸಂಚಾಲಕಿ ಬಿ ಕೆ ರೇಣುಕಾ, ಸಿಂದಗಿ ಸೇವಾ ಕೇಂದ್ರದ ಸಂಚಾಲಕಿ ಪವಿತ್ರಾಜಿ,ಎಂ ಕೆ ಹುಬ್ಬಳ್ಳಿ ಸೇವಾ ಕೇಂದ್ರ ಸಂಚಾಲಕಿ ಬಿ ಕೆ ಜ್ಯೋತಿ, ಬಿ ಕೆ ಗಾಯತ್ರಿ, ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಸರೋಜಿನಿ ಪೊದ್ಧಾರ ವೇದಿಕೆ ಮೇಲಿದ್ದರು. ಪ್ರಾಚಾರ್ಯ ಡಾ. ಬಿ ಜಿ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕರಿಸಿದರು. ಶಿಕ್ಷಕ ಸಿದ್ದಲಿಂಗ ಚೌದರಿ ನಿರೂಪಿಸಿದರು.
ಈ ಸಂದರ್ಭದಲ್ಲಿ ಎಸ್ ವೈ ಬಿರಾದಾರ, ಎಂ ಎಂ ದೊಡ್ಡಮನಿ, ಕೆ ಎಸ್ ಪತ್ತಾರ ಐಶ್ವರ್ಯ ನಾಯಕ, ತಾನಾಜಿ ಕನ್ಸೆ, ವಿಜಯಕುಮಾರ ತೇಲಿ ವಿಜಯಕುಮಾರ ಪತ್ತಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 200 ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು