ಮೂಡಲಗಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವಿರೇಂದ್ರ ಹೆಗ್ಗಡೆ ಅವರು ಮಹಿಳೆಯರ ಸಬಲಿಕರಣಕ್ಕೆ ಅನೇಕ ಯೋಜನೆಗಳ ಜೊತೆಗೆ ಸಮಾಜ ಸುಧಾರಣೆ ಮತ್ತು ಶಿಕ್ಷಣ ಅಭಿವೃದ್ದಿ, ಗ್ರಾಮೀಣ ಅಭಿವೃದ್ದಿ, ದೇವಾಲಯಗಳ ಅಭಿವೃದ್ದಿ, ಸ್ಮಶಾನ ಅಭಿವೃದ್ದಿ, ಆರೋಗ್ಯ ಅಭಿವೃದ್ದಿ, ಶುದ್ದ ಕುಡಿಯುವ ನೀರಿನ ಘಟಕಗಳಂತಹ ಹತ್ತು ಹಲವಾರು ನಿರಂತರ ಮಾಡುವ ಸೇವಾಕಾರ್ಯಗಳು ಇತರರಿಗೂ ಮಾದರಿಯಾಗಿವೆ ಎಂದು ಮೂಡಲಗಿ ಎಮ್ ಇ ಎಸ್ ಕಾಲೇಜಿನ ಉಪನ್ಯಾಸಕ ಚಂದ್ರಕಾಂತ ಮೋಟೆಪ್ಪಗೋಳ ಹೇಳಿದರು.
ಸುಕ್ಷೇತ್ರ ಹುಣಶ್ಯಾಳ ಪಿಜಿಯ ಶ್ರೀ ಸಿದ್ದಲಿಂಗೇಶ್ವರ ಕೈವಲ್ಯಾಶ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ಬಿ.ಸಿ ಟ್ರಸ್ಟ್ ಮೂಡಲಗಿ ತಾಲೂಕು, ಪ್ರಗತಿಬಂಧು, ಸ್ವ ಸಹಾಯ ಸಂಘಗಳ ಒಕ್ಕೂಟ ಹುಣಶ್ಯಾಳ ಪಿಜಿ ವಲಯ ಇವರುಗಳ ಸಂಯುಕ್ತ ಆಶ್ರಯದಲ್ಲಿ ರಾಜರ್ಷಿ ಡಾ.ವಿರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆ ಅವರ ಶುಭಾಶೀರ್ವಾದದೊಂದಿಗೆ ಜರುಗಿದ ಸಾಮೂಹಿಕ ಶ್ರೀ ವರಮಾಹಲಕ್ಷ್ಮೀ ಪೂಜಾ ಮತ್ತು ಉಡಿ ತುಂಬುವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು ಮಹಿಳೆಯರು ಹೆಚ್ಚೆಚ್ಚು ಸಬಲರಾಗಿ ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಗ್ರಾ.ಯೋ ಜಿಲ್ಲಾ ನಿರ್ದೇಶಕಿ ನಾಗರತ್ನ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರ ಯೋಜನಾ ಅಧಿಕಾರಿ ರಾಜು ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಗ್ರಾ ಪಂ ಉಪಾಧ್ಯಕ್ಷ ಸಿದ್ಧಾರೂಢ ಇಂಚಲ ಅಧ್ಯಕ್ಷತೆ ವಹಿದ್ದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಸಿದ್ದಲಿಂಗೇಶ್ವರ ಕೈವಲ್ಯಾಶ್ರಮದ ನಿಜಗುಣ ದೇವರು ಅರ್ಶೀವಚನ ನೀಡಿದರು. ಗೋಕಾಕ ಎಲ್ ಇ ಟಿ ಕಾಲೇಜು ಉಪನ್ಯಾಸಕ ನಾರಾಯಣ ತೋಟಗಿ ಹಾಗೂ ಪೂಜಾ ಸಮಿತಿ ಸದಸ್ಯ ಅಜೀತ ಪಾಟೀಲ ಮಾತನಾಡಿದರು.
ಗಾ ಪಂ ಸದಸ್ಯ ಸಿಕಂದರಸಾಬ ನದಾಫ್, ಪೂಜಾ ಸಮಿತಿ ಅಧ್ಯಕ್ಷ ಅರ್ಜುನ ನಂದಿ ಸದಸ್ಯರಾದ ಸಚಿನ ನಂದಿ, ಶಬ್ಬೀರ ತಾಬೇಟಕರ, ಶಂಕರ ಭಜಂತ್ರಿ ಹಾಗೂ ಹುಣಶ್ಯಾಳ ಪಿಜಿ, ವಡೇರಹಟ್ಟಿ, ಪುಲಗಡ್ಡಿ, ಧರ್ಮಟ್ಟಿ, ಸಂಗನಕೇರಿ, ದುರದುಂಡಿಯ ಗ್ರಾ ಪಂ ಸದಸ್ಯರು, ಸಂಘದ ಸೇವಾಪ್ರತಿನಿಧಿಗಳು, ನೂರಾರು ಮಹಿಳೆಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಶಿಕ್ಷಕಿ ದೇವಕಿ ವಡೆಯರ ನಿರೂಪಿಸಿದರು. ಸಂಘದ ಮೇಲ್ವಿಚಾರಕಿ ಮಂಜುಳಾ ಹಿರೇಮಠ ವಂದಿಸಿದರು.