ಮೂಡಲಗಿ: ಅರಭಾವಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಮೇ.7 ಬುಧವಾರದಂದು ಮುಂಗಾರು ಹಂಗಾಮಿನಲ್ಲಿ ಬೀಜೋಪಚಾರ ಮತ್ತು ಬೀಜ ತಯಾರಿಕೆಯ ಮಹತ್ವ ಕುರಿತು ಮು.11 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಂತರ್ಜಾಲ ತರಬೇತಿಯನ್ನು ಆಯೋಜಿಸಿದ್ದು ಅರಭಾವಿಯ ಕಿತ್ತೂರು ರಾಣಿ ಚೆನ್ನಮ್ಮ ತೋಟಗಾರಿಕಾ ಮಹಾವಿದ್ಯಾಲಯದ ಬೀಜ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ದೀಲಿಪಕುಮಾರ ಮಸೂತಿ ಅವರು ಉಪನ್ಯಾಸ ನೀಡುವರು.
ಆಸಕ್ತರು https://meet.goole.com/vbd- nmmt- twn ಲಿಂಕ್ ಕ್ಲಿಕ್ ಮಾಡುವ ಮೂಲಕ ಅಂತರ್ಜಾಲ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತರಬೇತಿ ಪ್ರಯೋಜನ ಪಡೆಯಬೇಕೆಂದು ಕೋರಲಾಗಿದೆ.
ಮತ್ತು ಹೆಚ್ಚಿನ ಮಾಹಿತಿಗೆ 8310173108, 9535321850, 9448636451ಗೆ ಸಂಪರ್ಕಿಸಲು ಅರಭಾವಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಕೃಷಿ ಅಧಿಕಾರಿ ಡಾ. ಖಾಜಾ ರುಬೀನಾ ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.