spot_img
spot_img

ಜಗಳಗಂಟಿ (ಬಲಗನ್ನೆ)

Must Read

spot_img
- Advertisement -

ಜಗಳಗಂಟಿ (ಬಲಗನ್ನೆ)

ಜಗಳಗಂಟಿ ಎಂದ ತಕ್ಷಣ ನಮ್ಮ ಚಿತ್ತಕ್ಕೆ ಬರುವುದು ಜಗಳಗಂಟಿತನ

ಆದರೆ ನಾನು  ಈಗ ಹೇಳ ಹೊರಟಿರುವುದು ಜಗಳಗಂಟಿ ಬಲಗನ್ನೆ ಮರದ ಬಗ್ಗೆ.

       ಮರದಲ್ಲಿ ಎರಡು ವಿಧ ಹೆಣ್ಣು ಮತ್ತು ಗಂಡು ಎಂದು ನಮ್ಮಲ್ಲಿ ಗುರುತಿಸುತ್ತಾರೆ.

- Advertisement -

ಹೆಣ್ಣು ಮರದ ಚಕ್ಕೆ ತೆಗೆದಷ್ಟು ನೀಟಾಗಿ ಗಂಡು ಮರದ ಚಕ್ಕೆ ಏಳುವುದಿಲ್ಲ. ಎಲ್ಲಾ ಮರದ ಚಕ್ಕೆಯಂತಲ್ಲ ಈ ಮರದ ಚಕ್ಕೆಯಲ್ಲಿ ಜೀವಕೋಶಗಳನ್ನು ಸ್ಪಷ್ಟವಾಗಿ ಕಾಣಬಹುದು

ನಮ್ಮ ಪೂರ್ವಜರಿಂದಲೂ ಕಿಡ್ನಿ ಕಲ್ಲು ಕಾಮಾಲೆ ಮತ್ತು ಕ್ಯಾನ್ಸರ್ ನಂತಹ ಬಲವಾದ ಕಾಯಿಲೆಗೂ ಉಪಯೋಗಿಸುವಂತಹ ಮರ ಮತ್ತು ಪೂಜನೀಯ ಮರವು ಆಗಿದೆ.

ಇದರ ಕಾಂಡ ತೊಗಟೆ ಎಲೆ ಕಾಯಿ ಎಲ್ಲವೂ ಔಷಧೀಯ ಗುಣವನ್ನು ಹೊಂದಿದೆ.

- Advertisement -

      ಎಲೆಯನ್ನು ಅರೆದು ಬೆಣ್ಣೆಯೊಂದಿಗೆ ಪೇಸ್ಟ್ ಮಾಡಿ ಹಚ್ಚಿದರೆ ಗಾಯ ಕುರು ಗುಣವಾಗುತ್ತದೆ. ಕಾಂಡದ ಚೂರನ್ನು ಕಷಾಯ ಮಾಡಿ ಕುಡಿಯುವುದರಿಂದ ಬಿಳಿ ಸೆರಗು ನಂತಹ ಕಾಯಿಲೆಗಳು ಗುಣವಾಗುತ್ತದೆ. ಇದರ ಕಾಯಿಯ ಕಷಾಯ ಕುಡಿಯುವುದರಿಂದ ಬಾಯಿ ಹುಣ್ಣು ಗುಣವಾಗುತ್ತದೆ. ಇದರ ಬೀಜದಿಂದ ತೆಗೆದ ಎಣ್ಣೆ ಮೊಡವೆಯಂತಹ ಕಜ್ಜಿ ಹುಣ್ಣು ಎಲ್ಲವನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ. ಬಿಟ್ಟು ಬಿಟ್ಟು ಬರುವ ಗುಣಪಡಿಸಲಾಗದ ಜ್ವರವನ್ನು ಸಹ ಈ ಮರದಿಂದ ಗುಣಪಡಿಸಬಹುದು.

ಯಕೃತ್ತಿನ ಕಾಯಿಲೆಗೆ ಒಳ್ಳೆಯ ಔಷಧಿಯನ್ನು ಇದರಿಂದ ತಯಾರಿಸಲಾಗುತ್ತದೆ

ಈ ಗಿಡದ ಔಷಧೀಯ ತಯಾರಿಕೆಯನ್ನು ಗುಪ್ತವಾಗಿಡಲು ಕಾರಣ ತಯಾರಿಕೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅತಿಯಾದ ಭೇದಿ ರೋಗಿಗೆ ಸಮಸ್ಯೆಯನ್ನು ತರಬಹುದು ನುರಿತ ವೈದ್ಯರಿಲ್ಲದೆ ಈ ಮರದ ಔಷಧಿಯನ್ನು ಮಾಡಕೂಡದು.


 ಸುಮನಾ ಮಳಲಗದ್ದೆ 

ಪಾರಂಪರಿಕ ವೈದ್ಯರು 9980182883.

- Advertisement -
- Advertisement -

Latest News

ಶ್ರೀನಿವಾಸ ಶಾಲೆಯ ಆಡಳಿತ ಮಂಡಳಿ ಬದಲಾಗುವುದಿಲ್ಲ – ಅಧ್ಯಕ್ಷ ರಂಗಣ್ಣ ಸೋನವಾಲಕರ

ಮೂಡಲಗಿ - ಶ್ರೀನಿವಾಸ ಶಾಲೆಯನ್ನು ಬೇರೆಯವರಿಗೆ ಮಾರುತ್ತಿದ್ದಾರೆ, ಆಡಳಿತ ಮಂಡಳಿ ಬದಲಾಗುತ್ತದೆ ಎಂಬ ವದಂತಿ ಹರಡಿದ್ದು ಅದು ಸಂಪೂರ್ಣ ಸುಳ್ಳು ಎಂದು ಸ್ಥಳೀಯ ಶ್ರೀನಿವಾಸ ಸ್ಕೂಲ್ಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group