Homeಕವನಕವನ: ಕಡಲ ಮುತ್ತು

ಕವನ: ಕಡಲ ಮುತ್ತು

ಕಡಲ ಮುತ್ತು

ನೀನು ಕನ್ನಡಾಂಬೆಯ ಸ್ವತ್ತು
ಸಾಹಿತ್ಯ ಕ್ಷೇತ್ರದ ಸಂಪತ್ತು
ನಿನ್ನ ಜನುಮದಿನದ ಈ ಹೊತ್ತು
ನಮನಾಂಜಲಿ ಓ! ಕಡಲ ಮುತ್ತು!!
ಕನ್ನಡ ಉಸಿರನು ಹೊತ್ತು
ನಡೆದು ಹೋದ ಗುರುತು
ಸಾಹಿತ್ಯ ಪ್ರೇಮಿಗಳಿಗೇ ಗೊತ್ತು
ಭಾರ್ಗವನ ಸಾಹಿತ್ಯ ಶ್ರಮದ ಗಮ್ಮತ್ತು!!
ರಾಜ ನೀನು ಕಾರಂತಜ್ಜ
ಕನ್ನಡದ ಕೀರ್ತಿ ಕಳಸ
ಅಕ್ಕರಗಳು ಅಕ್ಕರೆಯಿಂದ
ಕರೆಯುತಿವೆ ನಿನ್ನ ಬರಬಾರದೇ!
ಕನ್ನಡದ ಕಡಲದ ಮುತ್ತು ನೀನು
ಭಾರ್ಗವ ಶಿವರಾಮ
ಕನ್ನಡಿಗರ ಹೃದಯದ ಅರಸ
ಚಿರನೂತನ ನಿನ್ನ ನೆನಪು!!


ಗುರುದೇವಿ ಮಲಕಣ್ಣವರ
ಸ. ಹಿ. ಪ್ರಾಥಮಿಕ. ಶಾಲೆ, ಶ್ರೀರಂಗಪುರ. ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ.

RELATED ARTICLES

Most Popular

error: Content is protected !!
Join WhatsApp Group