ಕವನ: ಕಡಲ ಮುತ್ತು

Must Read

ಕಡಲ ಮುತ್ತು

ನೀನು ಕನ್ನಡಾಂಬೆಯ ಸ್ವತ್ತು
ಸಾಹಿತ್ಯ ಕ್ಷೇತ್ರದ ಸಂಪತ್ತು
ನಿನ್ನ ಜನುಮದಿನದ ಈ ಹೊತ್ತು
ನಮನಾಂಜಲಿ ಓ! ಕಡಲ ಮುತ್ತು!!
ಕನ್ನಡ ಉಸಿರನು ಹೊತ್ತು
ನಡೆದು ಹೋದ ಗುರುತು
ಸಾಹಿತ್ಯ ಪ್ರೇಮಿಗಳಿಗೇ ಗೊತ್ತು
ಭಾರ್ಗವನ ಸಾಹಿತ್ಯ ಶ್ರಮದ ಗಮ್ಮತ್ತು!!
ರಾಜ ನೀನು ಕಾರಂತಜ್ಜ
ಕನ್ನಡದ ಕೀರ್ತಿ ಕಳಸ
ಅಕ್ಕರಗಳು ಅಕ್ಕರೆಯಿಂದ
ಕರೆಯುತಿವೆ ನಿನ್ನ ಬರಬಾರದೇ!
ಕನ್ನಡದ ಕಡಲದ ಮುತ್ತು ನೀನು
ಭಾರ್ಗವ ಶಿವರಾಮ
ಕನ್ನಡಿಗರ ಹೃದಯದ ಅರಸ
ಚಿರನೂತನ ನಿನ್ನ ನೆನಪು!!


ಗುರುದೇವಿ ಮಲಕಣ್ಣವರ
ಸ. ಹಿ. ಪ್ರಾಥಮಿಕ. ಶಾಲೆ, ಶ್ರೀರಂಗಪುರ. ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group