ಕವನ: ಶಂಭೋ ಶಂಕರ

Must Read

ಶಂಭೋ ಶಂಕರ

ದಯಾಮಯಿ ಪರಮೇಶ
ನಿನ್ನ ನಂಬಿಹೆವಯ್ಯ
ಅನುದಿನದಿ ನಿನ್ನ ಸ್ಮರಣೆ
ಶಿಶಿರ ಋತುವು ಕೃಷ್ಣ ಪಕ್ಷ
ಬಹುಳ ಚತುರ್ದಶಿಯ ಶಿವರಾತ್ರಿ
ಶಿವ ಸ್ಮರಣೆಯ ಜಾಗರಣೆಯ ಶುಭರಾತ್ರಿ

ಅಗ್ನಿ ಕಂಭದ ಶಿರದಿ
ಇಳಿಯುವ ಕೇತಕಿ ಪುಷ್ಪದಿ
ಬ್ರಹ್ಮ ವಿಷ್ಣುವಿನ ಅಗ್ನಿ ಕಂಬದ
ಶಿರ ಭಾಗದ ಹುಡುಕಾಟದಿ
ಮಾಘ ಮಾಸದಿ ಲಿಂಗ ರೂಪವ
ತಾಳಿದ ಪರಶಿವನ ಶಿವರಾತ್ರಿ

ಹಗಲುಗಳಲಿ ಜರಗುವವು ಎಲ್ಲ ಪೂಜೆಗಳು
ಜಾಗರಣೆಯ ಪೂಜೆಯ ವಿಶೇಷ ಶಿವರಾತ್ರಿ
ಓಂ ನಮಃ ಶಿವಾಯ ಪಠಣದೊಳು
ಪರಶಿವನ ಸ್ಮರಿಸುತಲಿ
ಜಗದ ಒಳಿತನು ಕಾಣುತಲಿ
ಭಕ್ತ ಸಮೂಹ ಸ್ಮರಿಸುವ ಶುಭರಾತ್ರಿ

ಬಿಲ್ವಪತ್ರಿ.ತಿಲಗಿ ಪುಷ್ಪ.ತುಳಸಿಯ
ಮಾಲೆಯೊಳು ಅರ್ಪಿಸುತಲಿ
ಪರಶಿವಗೆ ಓಂ ನಮಃ ಶಿವಾಯ
ಓಂ ನಮಃ ಶಿವಾಯ.ಓಂ ನಮಃ ಶಿವಾಯ
ಭಕ್ತಿ ಭಾವದಿ ರಾತ್ರಿಯಿಡೀ ಜಾಗರಣೆಯೊಳು
ಶಿವ ಸ್ಮರಣೆಯ ಶಿವರಾತ್ರಿ

ಶಿವಭಕ್ತರಿಗಿದು ಮಂಗಳಕರ ರಾತ್ರಿ
ದಿನವಿಡೀ ಉಪವಾಸದಿ ಶುಭ ದಿನವು
ಶಿವಪುರಾಣದೊಳು ವಿಷಕಂಠನ
ಕತೆಯ ಆಲಿಸುತಲಿ.ಪಾರ್ವತಿ
ಪರಶಿವನ ವಿವಾಹಮಹೋತ್ಸವ ಕತೆಯ
ಕೇಳುತಲಿ ಭಕ್ತಿ ಭಾವದಿ ಸ್ಮರಿಪ ಶಿವರಾತ್ರಿ

ತ್ರಯೋದಶಿಯು ಶಕ್ತಿರೂಪ
ಚತುರ್ದಶಿಯು ಶಿವರೂಪ
ತ್ರಯೋದಶಿಯೊಳು ಚತುರ್ದಶಿಯ
ಅಂತರ್ಗತವಾಗಿರಲು ಶಿವಶಕ್ತಿಯೋಗ
ಬೇಡರ ಕಣ್ಣಪ್ಪನಿಗೊಲಿದ ಶಿವಸ್ವರೂಪ
ಶಿವಗುಣರೂಪವ ಸ್ಮರಿಸುವ ಶಿವರಾತ್ರಿ


ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮುನವಳ್ಳಿ ೫೯೧೧೧೭

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group