- Advertisement -
ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಹಾಗೂ ಮೂಡಲಗಿ ಪುರಸಭೆಯಿಂದ ಮಂಗಳವಾರ ಇಲ್ಲಿಯ ಸರ್ಕಾರಿ ಪ್ರಾಥಮಿಕ ಗಂಡು ಮಕ್ಕಳ ಶಾಲೆಯ ಆವರಣದಲ್ಲಿ 75ನೇ ಆಜಾದಿ ಕಿ ಅಮೃತ ಮಹೋತ್ಸವ ಅಂಗವಾಗಿ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ ಮಾತನಾಡಿ, ‘ಸ್ವಚ್ಚತೆಯ ಬಗ್ಗೆ ಸಮುದಾಯದ ಜನರು ಕಾಳಜಿವಹಿಸಬೇಕು. ಸ್ವಚ್ಚತೆ ಇದ್ದರೆ ಉತ್ತಮ ಆರೋಗ್ಯ ಮತ್ತು ಸಮೃದ್ಧಿ ಇರುತ್ತದೆ’ ಎಂದರು.
ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದವರು ಸ್ವಚ್ಛತಾ ಅಭಿಯಾನವು ಶ್ಲಾಘನೀಯವಾಗಿದೆ ಎಂದರು.
- Advertisement -
ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ, ಕಾರ್ಯದರ್ಶಿ ಡಾ. ಸಂಜಯ ಶಿಂಧಿಹಟ್ಟಿ, ಮಹಾಂತೇಶ ಹೊಸೂರ, ಸಂಗಮೇಶ ಕೌಜಲಗಿ, ಮಹಾವೀರ ಸಲ್ಲಾಗೋಳ, ಗಿರೀಶ ಆಸಂಗಿ, ಶಾಲೆಯ ಮುಖ್ಯಸ್ಥರಾದ ಬಿ.ಎಚ್. ಹುಲ್ಯಾಳ, ಬಿ.ಎ. ಡಾಂಗೆ, ಸುರೇಶ ಕೋಪರ್ಡೆ ಇದ್ದರು.