spot_img
spot_img

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

Must Read

- Advertisement -

 

ಸಿರಿವಂತ ಶೀನಪ್ಪ ಹರಿದಾಸ ತಾನಾದ
ಹೆಂಡತಿಯ ಮೂಗುತಿಯ ಮಹಿಮೆಯಿಂದ
ಇಂಥ ಸತಿಯರ ಸಂಖ್ಯೆ ಬೆಳೆಯಲೆಂದಾಸಿಸಿದ
ಸತಿಗಿಂತ ಗುರುವುಂಟೆ ? – ಎಮ್ಮೆತಮ್ಮ‌

ತಾತ್ಪರ್ಯ
ವರದಪ್ಪ ನಾಯಕ ಮತ್ತು ರುಕ್ಮಿಣಿಯರ ಗರ್ಭದಲ್ಲಿ‌ ಆಗರ್ಭ
ಶ್ರೀಮಂತನಾಗಿ ತಿರುಪತಿ ತಿಮ್ಮಪ್ಪನ ವರದಿಂದ ಶ್ರೀನಿವಾಸ ಜನಿಸಿದನು. ತಂದೆಯಂತೆ ಲೇವಾದೇವಿ ಮಾಡುತ್ತ‌ ಬಹಳ ಜಿಪುಣನಾಗಿದ್ದ. ಪುರಂದರಗಢದಲ್ಲಿದ್ದು ವ್ಯಾಪಾರ ಮಾಡುವ
ಸಂದರ್ಭದಲ್ಲಿ‌ ಕೃಷ್ಣ ಒಬ್ಬ ಬ್ರಾಹ್ಮಣನ ವೇಷದಲ್ಲಿ‌‌ ಬಂದು
ಮಗನ ಉಪನಯನಕ್ಕಾಗಿ ಆತನ ಸತಿ ಸರಸ್ವತಿಯಲ್ಲಿ‌
ಸಹಾಯ ಕೇಳುತ್ತಾನೆ. ಆಗ ಆಕೆ ತನ್ನ ತವರವರು ಕೊಟ್ಟಿದ್ದ
ಮೂಗುತಿಯನ್ನು ಕೊಡುತ್ತಾಳೆ.‌ ಅದನ್ನು ಆ ಬ್ರಾಹ್ಮಣ
ಶ್ರೀನಿವಾಸನಲ್ಲಿ‌ ಒತ್ತಿ ಇಟ್ಟು ಹಣ ಕೇಳುತ್ತಾನೆ.ಆ ಮೂಗುತಿ
ಗುರ್ತಿಸಿ ಅದನ್ನು ಡಬ್ಬಿಯಲ್ಲಿಟ್ಟು ಮನೆಗೆ ಬಂದು ಸತಿಗೆ
ಕೇಳುತ್ತಾನೆ. ಆಗ ಆಕೆ ಸ್ನಾನಮಾಡುವಾಗ ಬಿಚ್ಚಿಟ್ಟಿರುವೆನೆಂದು ಬಚ್ಚಲಿನಲ್ಲಿ ಹೆದರಿ ವಿಷಕುಡಿಯಲು‌ ಹೊರಡುತ್ತಾಳೆ. ವಿಷದ ಬಟ್ಟಲಿನಲ್ಲಿ‌ ಮೂಗುತಿ ಬಂದು ಬೀಳುತ್ತದೆ. ಅದನ್ನು ತಂದು ಗಂಡನಿಗೆ ಕೊಡುತ್ತಾಳೆ. ತನ್ನ ಅಂಗಡಿಗೆ ಹೋಗಿ‌ ಡಬ್ಬಿ ತೆಗೆದು ನೋಡಿದರೆ ಮಾಯವಾಗಿರುತ್ತದೆ. ನಿಜವಾಗಿ ಇದು
ದೇವರ ಲೀಲೆ ಎಂದು ತಿಳಿದು ವೈರಾಗ್ಯ ತಾಳಿ‌ ಪುರಂದರದಾಸ
ಎಂದು ಬದಲಾಗಿ ಈ ಕೆಳಗಿನ ಹಾಡು ಹಾಡುತ್ತಾನೆ.

- Advertisement -

“ಆದದ್ದೆಲ್ಲ ಒಳಿತೆ ಆಯಿತು ನಮ್ಮ ಶ್ರೀಧರ ಸೇವೆ ಮಾಡಲು ಸಾಧನ ಸಂಪತ್ತಾಯಿತು; ದಂಡಿಗೆ ಬೆತ್ತ ಹಿಡಿಯೊದಕ್ಕೆ ಮಂಡೆ ಮಾಚಿ ನಾಚುತಲಿದ್ದೆ, ಹೆಂಡತಿ ಸಂತತಿ ಸಾವಿರವಾಗಲಿ, ದಂಡಿಗೆ ಬೆತ್ತ ಹಿಡಿಸಿದಳಯ್ಯ!” ಹೆಂಡತಿಯೆ ಗುರುವಾಗಿ ಆತನ ಕಣ್ಣು ತೆರೆಸಿದ ಕಾರಣ ಇಂಥ ಸತಿಯರ ಸಂತತಿ ಹೆಚ್ಚಲೆಂದು ಪುರಂದರದಾಸರು‌ ಬಯಸಿದ್ದಾರೆ. ಸತಿಯೆ ನಿಜವಾದ ಗುರು.

ರಚನೆ ಮತ್ತು ವಿವರಣೆ ‌‌ ‌‌‌ ಎನ್.ಶರಣಪ್ಪ‌ ಮೆಟ್ರಿ
ಮೊ. 9449030990

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಗುಜನಟ್ಟಿ ಗ್ರಾ ಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಮೂಡಲಗಿ - ತಾಲೂಕಿನ ಗುಜನಟ್ಟಿ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಾಮಾನ್ಯ ವರ್ಗದಿಂದ ಕಲ್ಲಪ್ಪ ನಿಂಗಪ್ಪ ಮುಕ್ಕಣ್ಣವರ, ಉಪಾಧ್ಯಕ್ಷರಾಗಿ...
- Advertisement -

More Articles Like This

- Advertisement -
close
error: Content is protected !!
Join WhatsApp Group