- Advertisement -
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಶ್ರೀ ಬಸವೇಶ್ವರ ಅಧ್ಯಯನ ಪೀಠದಲ್ಲಿ ಗುರುವಾರ ಕೇಂದ್ರ ಬಸವ ಸಮಿತಿಯ ತಜ್ಞರ ಮತ್ತು ಸಂಶೋಧಕರ ಸಭೆಯು ಸಮಿತಿಯ ಸಭೆಯು ಡಾ.ಅರವಿಂದ ಜತ್ತಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಶಿವಾನುಭವ ಚರಮೂರ್ತಿ ಪೂಜ್ಯಶ್ರೀ ಬೇಲಿಮಠದ ಶಿವರುದ್ರ ಮಹಾಸ್ವಾಮಿಗಳು, ಡಾ. ಎಂ. ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷರು, ಹಿರಿಯ ಸಂಶೋಧಕರಾದ ಡಾ. ವೀರಣ್ಣ ರಾಜೂರ, ಹಿರಿಯ ತತ್ವಶಾಸ್ತ್ರಜ್ಞರಾದ ಡಾ. ಎನ್. ಜಿ. ಮಹದೇವಪ್ಪ, ಹಿರಿಯ ಸಾಹಿತಿಗಳಾದ ಪ್ರೊ.ಸಿದ್ದಣ್ಣ ಲಂಗೋಟಿ, ಪ್ರೊ. ಕಲ್ಯಾಣಮ್ಮ ಲಂಗೋಟಿ, ಡಾ. ಸಿ.ಎಂ. ಕುಂದಗೋಳ, ಡಾ. ಮಲ್ಲಿಕಾರ್ಜುನ ಪಾಟೀಲ, ಜಿ.ಎ. ತಿಗಡಿ ,ಬಸವ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರಾದ ಮೋಹನ ಬಸನಗೌಡ ಪಾಟೀಲ, ಧಾರವಾಡ ಬಸವ ಸಮಿತಿಯ ಸಂಯೋಜಕರಾದ ಎಂ.ಜಿ.ಮುಳಕೂರ, ಜಿ ನಂಜಪ್ಪ (ನವೀನ್ ) ಪಾಲ್ಗೊಂಡಿದ್ದರು.